ರೋಗಿಗಳನ್ನು ಮುಟ್ಟಲು ಅಸಹ್ಯ ಬೇಡ: ಡಾ.ಚನ್ನಬಸವ ಪಾಟೀಲ್

| Published : May 14 2024, 01:03 AM IST

ರೋಗಿಗಳನ್ನು ಮುಟ್ಟಲು ಅಸಹ್ಯ ಬೇಡ: ಡಾ.ಚನ್ನಬಸವ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯರಿಗಿಂತಲೂ ದಾದಿಯರ ಸೇವೆ ಮಹತ್ವದ್ದು ಎಂದು ಸಿಂಧನೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಜನನಿ ಮಕ್ಕಳ ಆಸ್ಪತ್ರೆಯ ವೈದ್ಯ ಡಾ.ಚನ್ನಬಸವ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ರೋಗಿಗಳನ್ನು ಮುಟ್ಟಲು ಅಸಹ್ಯ ಪಡಬೇಡಿ. ಅವರ ಸೇವೆ ಪುಣ್ಯದ ಕಾರ್ಯವಾಗಿದೆ ಎಂದು ಜನನಿ ಮಕ್ಕಳ ಆಸ್ಪತ್ರೆಯ ವೈದ್ಯ ಡಾ.ಚನ್ನಬಸವ ಪಾಟೀಲ್ ಹೇಳಿದರು.

ನಗರದ ಸನ್ರೈಸ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್‌ನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಹಾಗೂ ಲ್ಯಾಂಪ್ ಲೈಟಿಂಗ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈದ್ಯರಿಗಿಂತಲೂ ದಾದಿಯರ ಸೇವೆ ಮಹತ್ವದಾಗಿದ್ದು, ಎಲ್ಲರೂ ಅವರನ್ನು ಗೌರವಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಳೆಕೋಟೆ ವಿರಕ್ತಮಠದ ಸಿದ್ದಬಸವ ಮಹಾಸ್ವಾಮಿ, ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಶಾಂತನಗೌಡ ಪಾಟೀಲ್, ವೈದ್ಯ ಡಾ.ಮಾಳಿಂಗರಾಯ, ನಿವೃತ್ತ ಶಿಕ್ಷಕ ಎಂ.ಡಿ.ಆಲಂ, ಮನೋಜ್ ಮಿಶ್ರ ಮಾತನಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷ ಖಾಜಾ ಮಹಿನುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ನಂತರ ನಸಿರ್ಂಗ್ ಪ್ರಾಚಾರ್ಯ ಸಿರಿಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ನಂತರ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಿ-ಫಾರ್ಮಸಿ ಮತ್ತು ಪ್ಯಾರಾ ಮೆಡಿಕಲ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಅಭಿನಂದನಾ ಪತ್ರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಶಿವನಮ್ಮ ಹಾಗೂ ಗುರು ಶಾಂತಮ್ಮ, ಇರ್ಫಾನಾ ಬೇಗಂ ಅವರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ಅನಿಲ್ಕುಮಾರ್, ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಎಚ್., ಆಂಜನೇಯ, ಅಮರೇಶ್, ಸಂಸ್ಥೆಯ ಕಾರ್ಯದರ್ಶಿ ಇಮ್ರಾನ್, ಇಸಾಕ್, ಫಾರ್ಮಸಿ ಪ್ರಾಚಾರ್ಯ ವಾಸೀಂ ಹುಸೇನ್, ಪ್ಯಾರಾ ಮೆಡಿಕಲ್ ಪ್ರಾಚಾರ್ಯ ಡಿ.ಚಕ್ರವರ್ತಿ, ಉಪನ್ಯಾಸಕರಾದ ಅಶುಪಾಷಾ, ಬಸವಲಿಂಗ, ರಾಜೇಶ್, ಸರ್ವೇಶ್, ನಿರ್ಮಲ, ಜ್ಞಾನೇಶ್ವರಿ, ಆಸೀಫ್, ಮನೋಹರ್, ಭಾಗ್ಯಶ್ರೀ ಇದ್ದರು. ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಕೆ ವಂದಿಸಿದರು.