ಸಾರಾಂಶ
ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರಿದಿದ್ದರೂ ರಕ್ತಕ್ಕೆ ಬದಲಿ ವ್ಯವಸ್ಥೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆಯಿಂದ ಬಳಲುತ್ತಿರುವವರಿಗೆ ಸದಾ ರಕ್ತದ ಅವಶ್ಯಕತೆ ಇರುತ್ತದೆ. ಯುವಜನತೆ ಕನಿಷ್ಠ ವರ್ಷಕ್ಕೆ ಒಂದು ಬಾರಿ ರಕ್ತದಾನ ಮಾಡಿದರು ರಕ್ತದ ಕೊರತೆಯಿಂದಾಗುವ ಸಾವು-ನೋವುಗಳ ಸಂಖ್ಯೆ ಇಲ್ಲದಂತಾಗುತ್ತದೆ.
ಕುಕನೂರು:
ಯವಜನತೆ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯಿಂದಾಗುವ ಸಾವು-ನೋವು ತಡೆಯಬೇಕು ಎಂದು ಆಪ್ತ ಸಮಾಲೋಚಕ ಅಮರೇಶ ಅಂಗಡಿ ಹೇಳಿದರು.ತಾಲೂಕಿನ ಮಂಗಳೂರಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಬುಧವಾರ ಜರುಗಿದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರಿದಿದ್ದರೂ ರಕ್ತಕ್ಕೆ ಬದಲಿ ವ್ಯವಸ್ಥೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆಯಿಂದ ಬಳಲುತ್ತಿರುವವರಿಗೆ ಸದಾ ರಕ್ತದ ಅವಶ್ಯಕತೆ ಇರುತ್ತದೆ. ಯುವಜನತೆ ಕನಿಷ್ಠ ವರ್ಷಕ್ಕೆ ಒಂದು ಬಾರಿ ರಕ್ತದಾನ ಮಾಡಿದರು ರಕ್ತದ ಕೊರತೆಯಿಂದಾಗುವ ಸಾವು-ನೋವುಗಳ ಸಂಖ್ಯೆ ಇಲ್ಲದಂತಾಗುತ್ತದೆ. ಯುವಜನತೆ ರಕ್ತದಾನ ಮಾಡುವ ಮೂಲಕ ವೈದ್ಯಕೀಯ ಸೇವೆಗೆ ನೆರವಾಗಬೇಕು. ೧೮ರಿಂದ ೬೫ ವಯೋಮಾನದವರು, ೪೫ ಕೆಜಿಗಿಂತ ಅಧಿಕ ತೂಕ ಹೊಂದಿದವರು, ಪುರುಷರು ೩ ತಿಂಗಳಿಗೊಮ್ಮೆ, ಮಹಿಳೆಯರು ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.
ರಕ್ತದಾನ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ವಿದ್ಯಾರ್ಥಿಗಳ ರಕ್ತದ ಗುಂಪು ಪರೀಕ್ಷೆ ಮಾಡಲಾಯಿತು. ಕಿರಿಯ ತರಬೇತಿ ಅಧಿಕಾರಿಗಳಾದ ಶಿವಾನಂದ, ನಬಿಸಾಬ್, ಆರೋಗ್ಯ ಇಲಾಖೆಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಬಿ. ರಮೆಶ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಗೀತಾ ಅರಳಿಕಟ್ಟಿ, ಸಮುದಾಯ ಆರೋಗ್ಯ ಅಧಿಕಾರಿ ಜ್ಯೋತಿ ಇದ್ದರು.