ಸಾರಾಂಶ
ಕೆ.ಆರ್. ನಗರ: ತಾಲೂಕಿನ ಇತಿಹಾಸ ಪ್ರಸಿದ್ದ ಡೋರ್ನಹಳ್ಳಿಯ ಸಂತ ಅಂಥೋಣಿಯವರ ಬಸಿಲಿಕಾದ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ರಥೋತ್ಸವದ ಮೆರವಣಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಡಾ. ಬರ್ನಾಡ್ ಮೊರಾಸ್ ಅವರು ಬೆಳಗ್ಗೆ ಹಬ್ಬದ ಆಡಂಬರ ಗಾಯನ ಪೂಜೆಗೆ ಚಾಲನೆ ನೀಡಿದರು.ಬಸಿಲಿಕಾದ ಧರ್ಮಗುರು ಡೇವಿಡ್ ಸಗಾಯರಾಜ್, ಕೊಲ್ಕತ್ತಾ ಧರ್ಮಗುರು ರಾಬರ್ಟ್ ಗ್ರೆಗೊರಿ ಮೊಂತೇರೊ, ಮೈಸೂರು ಧರ್ಮಕ್ಷೇತ್ರದ ಕೋಶಾಧಿಕಾರಿ ಸೆಬಾಸ್ಟಿಯನ್ ಅಲೆಕ್ಸಾಂಡರ್, ಯಾದವಗಿರಿ ಧರ್ಮಗುರು ರೋಹನ್, ಬೋಗಾದಿಯ ಧರ್ಮಗುರು ವಾಲೆಂಟೆನ್ ರಾಜೇಂದ್ರ ಕುಮಾರ್, ಮೈಸೂರು ರೆಕ್ಟರ್ ಗುರು ಓಸ್ವಾಲ್ಡ್ ಕ್ರಾಸ್ತ, ಮಂಡ್ಯ ಧರ್ಮಗುರು ಮರಿರಾಜ್, ಶ್ರೀರಾಂಪುರ ಧರ್ಮಗುರು ಆರ್. ಆರೋಗ್ಯಸ್ವಾಮಿ, ಮೈಸೂರು ಧರ್ಮಕ್ಷೇತ್ರದ ಸಹಾಯಕ ಕೋಶಾಧಿಕಾರಿ ಯೇಸು ಪ್ರಸಾದ್ ಅವರು ಹಬ್ಬದ ಆಡಂಬರ ಗಾಯನ ಬಲಿಪೂಜೆ ನಡೆಸಿಕೊಟ್ಟರು.
ಬಳಿಕ ಸಂಜೆ ಬಸಿಲಿಕಾದ ಮುಂಭಾಗದ ಸಾವಿರಾರು ಜನರ ಸಮ್ಮುಖದಲ್ಲಿ ಸಂತ ಅಂಥೋಣಿಯವರ ವೈಭವದ ತೇರಿನ ಮೆರವಣಿಗೆಗೆ ನಡೆಯಿತು.ಬಸಿಲಿಕಾ ಚರ್ಚ್ ನ ಆಡಳಿತಾಧಿಕಾರಿ ಪ್ರವೀಣ್ ಪೆದ್ರು ಹಾಗೂ ಧರ್ಮಗುರು ಡೇವಿಡ್ ಸಗಾಯರಾಜ್ ಅವರು ಜಾತ್ರಾ ಮಹೋತ್ಸವದ ನೇತೃತ್ವವನ್ನು ಡೋರಹಳ್ಳಿ ಸಂತ ಅಂತೋಣಿಯವರ ಬಸಿಲಿಕಾ ಜಾತ್ರಾ ಮಹೋತ್ಸವ ನೇತೃತ್ವದ ವಹಿಸಿದ್ದರು.
ಐತಿಹಾಸಿಕ ಮತ್ತು ಅತ್ಯಂತ ಹೆಸರುವಾಸಿಯಾದ ಡೋರನಹಳ್ಳಿ ಸಂತ ಅಂತೋಣಿಯವರ ವಾರ್ಷಿಕ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಜನರು ಪಾಲ್ಗೊಂಡು ಗಾಯನಪೂಜೆ ವೀಕ್ಷಿಸಿ ಅಂತೋಣಿಯವರ ದರ್ಶನ ಪಡೆದರು. ಕೆ.ಆರ್. ನಗರ ಪೊಲೀಸ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.