ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಕಂಚಿನ ಪುತ್ಥಳಿ ಸ್ಥಾಪಿಸಿ

| Published : Sep 07 2024, 01:31 AM IST

ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಕಂಚಿನ ಪುತ್ಥಳಿ ಸ್ಥಾಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ತಿ ವರ್ಷ ₹5 ಲಕ್ಷ ಮೊತ್ತದ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ

ಗದಗ: ಗದುಗಿನ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದ ಕನ್ನಡದ ಕುಲಗುರು, ಭಾವೈಕ್ಯತೆಯ ಹರಿಕಾರರಾಗಿದ್ದ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಕಂಚಿನ ಪುತ್ಥಳಿಯನ್ನು ಗದುಗಿನ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಬೇಕು.ಅದಕ್ಕಾಗಿ ನಮ್ಮ ಜ.ತೋಂಟದಾರ್ಯ ನೌಕರರ ಪತ್ತಿನ ಸಹಕಾರಿ ಸಂಘದಿಂದ ಮೊದಲನೇ ಕಂತಾಗಿ ₹20 ಲಕ್ಷ ದೇಣಿಗೆ ನೀಡುವುದಾಗಿ ಸಂಘದ ಅಧ್ಯಕ್ಷ ಪ್ರೊ. ಎಸ್.ಎಸ್.ಪಟ್ಟಣಶೆಟ್ಟಿ ಹೇಳಿದರು.

ಅವರು ಇತ್ತೀಚೆಗೆ ನಗರದ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಜರುಗಿದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಸಹಕಾರಿ ಸಂಘವು ಶ್ರೀಮಠದ ದಾಸೋಹಕ್ಕಾಗಿ ₹1 ಕೋಟಿ ಸ್ಥಿರ ನಿಧಿ ಇಡಲಾಗಿದೆ.ಅದರಂತೆ ಪೂಜ್ಯರು ಲಿಂಗೈಕ್ಯರಾದ ನಂತರ ಅವರ ಸ್ಮರಣಾರ್ಥ ಪ್ರಾರಂಭಗೊಂಡ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸಮಿತಿ ಸ್ಥಾಪಿಸಲಾಗಿದ್ದು ಈಗ ಅದಕ್ಕೆ ಶ್ರೀಗಳ ಕೆಲವು ಅಭಿಮಾನಿ ಶಿಷ್ಯರಿಂದ ಮತ್ತು ಸಂಘದ ಸದಸ್ಯರ ಡೆವಿಡೆಂಡ್ ಆದಾಯದಲ್ಲಿ ₹1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ.ಆ ದೇಣಿಗೆ ಠೇವಣಿಯನ್ನಾಗಿರಿಸಿದ್ದು ಅದರ ಆದಾಯದಲ್ಲಿ ಪ್ರತಿ ವರ್ಷ ₹5 ಲಕ್ಷ ಮೊತ್ತದ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿಯನ್ನು ಪೂಜ್ಯರ ಹೆಸರಿನಲ್ಲಿ ಕೊಡಲಾಗುತ್ತಿದೆ ಎಂದು ವಿವರಿಸಿದರು.

ರಮೇಶ ಕೊರ್ಲಹಳ್ಳಿ, ಎಸ್.ಎಚ್. ಪಾಟೀಲ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಸಂಘದ ಪದಾಧಿಕಾರಿಗಳಾದ ಜಿ.ಎಂ. ಕೋಟ್ಯಾಳ, ಪಿ.ಎ. ಹೇಮಗಿರಿಮಠ, ವಿಜಯಕುಮಾರ ಮಾಲಗಿತ್ತಿ, ಕೊಟ್ರೇಶ ಮೆಣಸಿನಕಾಯಿ, ಜೇವರ್ಗಿಯ ವಿಶ್ವಾಸ ಶಿಂಧೆ, ಉಪ್ಪಿನ, ಲೆಕ್ಕ ಪರಿಶೋಧಕ ಮುಂದಿನಮನಿ, ಐ.ಬಿ. ಬೆನಕೊಪ್ಪ, ದೊಡ್ಡಬಸಪ್ಪ ಚಿತ್ರಗಾರ ಮುಂತಾದವರು ಇದ್ದರು. ಕೆ.ಎಂ. ಗೌಡರ ನಿರೂಪಿಸಿದರು.