ಸಾರಾಂಶ
ನಾನು ಹೆಣ್ಣು ಎಂಬ ಕೀಳು ಭಾವನೆ ಬಿಡಬೇಕು
ಕನ್ನಡಪ್ರಭ ವಾರ್ತೆ ಇಳಕಲ್ಲ
ಇಂದು ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಹಾಗೂ ಬೆಳವಣಿಗೆ ಆಗ ಬೇಕಾದರೆ ಅವರಿಗೆ ಪ್ರತಿಯೊಬ್ಬರು ವಿದ್ಯೆ ಕಲಿಸಲು ಮುಂದಾಗಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ತಿಳಿಸಿದರು.ನಗರದ ವಿಜಯ ಮಹಾಂತೇಶ್ವರ ವಿದ್ಯಾವರ್ದಕ ಸಂಘದ ವಿಜಯ ಮಹಾಂತೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಅಡಿಯಲ್ಲಿ ಮಹಿಳಾ ವೇದಿಕೆಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬಂದು ತಮ್ಮ ಪ್ರತಿಭೆ ತೋರಬೇಕು. ನಾನು ಹೆಣ್ಣು ಎಂಬ ಕೀಳು ಭಾವನೆಯನ್ನು ಮೊದಲು ಬಿಡಬೇಕು. ಆಗ ಮಹಿಳೆಯರ ಬದುಕು ಸುಂದರವಾಗುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜ ಚೇರಮನ್ ಮಲ್ಲಣ್ಣ ಹರವಿ ವಹಿಸಿ ಮಾತನಾಡಿದರು. ಕಾಲೇಜಿನ ಪ್ರಾಶುಂಪಾಲ್ ಎಸ್.ವ್ಹಿ. ಕಂಬಿ ಹಾಗೂ ಸಂಘದ ಆಡಳಿತಾಧಿಕಾರಿ ಆರ್. ಎಮ್. ಪಾಟೀಲ ಹಾಗೂ ಒಕ್ಕೂಟದ ಕಾರ್ಯಧ್ಯಕ್ಷೆ ಆರತಿ ರಜಪೂತ, ವಿದ್ಯಾರ್ಥಿ ಪ್ರತಿನಿಧಿ ಜ್ಯೋತಿ ಬಿರಾದಾರ ವೇದಿಕೆ ಮೇಲೆ ಇದ್ದರು.ಮಹಿಳಾ ವೇದಿಕೆಯ ಸಂಚಾಲಕಿ ಡಾ.ಎಲ್. ಆರ್. ರಾಜಾಪೂರ ಸ್ವಾಗತಿಸಿ ಪರಿಚಯಿಸಿದರು. ವೈಷ್ಣವಿ ಕುಂಟೋಜಿ ನಿರೂಪಿಸಿದರು. ಮಂಜುಳಾ ಗಜೇಂದ್ರಗಡ ವಂದಿಸಿದರು.