ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಇನ್ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ಜಿ.ಬಿ. ವಿನಯ್ಕುಮಾರ್ ಹೇಳಿದರು.ನಗರದ ಕನಕ ಮಂದಿರದಲ್ಲಿ ಹಾಲುಮತ ಮಹಾಸಭಾ ಹಾಗೂ ಕುರುಬ ಸಮಾಜದ ಎಲ್ಲಾ ಸಂಘಟನೆಗಳ ಸಹಕಾರದೊಂದಿಗೆ ನಡೆದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ, ಅಲಹ್ಯಬಾಯಿ ಹೋಳ್ಕರ್ ಜಯಂತ್ಯುತ್ಸವ, ಕುರುಬ ಜಯಂತಿ, ಸಾಧಕರಿಗೆ ಸನ್ಮಾನ ಹಾಗೂ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಇದನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ. ಇದಾದಲ್ಲಿ ಸಮಾಜದಲ್ಲಿ ಎಲ್ಲರೂ ಮುಖ್ಯ ವಾಹಿನಿಗೆ ಬರಲು ಸಾಧ್ಯ, ಕನಕದಾಸರು, ಸಂಗೊಳ್ಳಿ ರಾಯಣ್ಣ, ಅಲಹ್ಯಬಾಯಿ ಹೋಳ್ಕರ್ ಸಮಾಜದಲ್ಲಿ ಶೋಷಿತರ ಮತ್ತು ಬಡವರ ಹಾಗೂ ನೋಂದವರ ಪರ ಹೋರಾಟ ನಡೆಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ ಎಂದು ತಿಳಿಸಿದರು.ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಹಾಲುಮತ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜು ಮೌರ್ಯ, ನಗರಸಭಾ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ ರಮೇಶ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ನಡುಪಳ್ಳಿ ಗೋವಿಂದರಾಜು, ಗೌರವಾಧ್ಯಕ್ಷ ವೆಂಕಟೇಶ್, ರಾಜ್ಯ ಉಪಾಧ್ಯಕ್ಷೆ ಸ್ವರೂಪರಾಣಿ, ನಗರಸಭಾ ಸದಸ್ಯ ವಿ.ಮಂಜುನಾಥ್, ನಾಮಿನಿ ಸದಸ್ಯ ಅಮರ್ ನಾಥ್, ಮುಖಂಡರಾದ ಕೆಎಸ್ಆರ್ಟಿಸಿ ಮುನಿಯಪ್ಪ, ಕೆ.ಎನ್.ಎನ್ ಪ್ರಕಾಶ್, ಕಠಾರಿಪಾಳ್ಯ ಗಂಗಣ್ಣ, ನಾಗಭೂ?ಣ್, ಬಿ.ಎಂ. ನಾರಾಯಣಸ್ವಾಮಿ, ಹರೀಶ್, ಕುರಿಗಳ ರಮೇಶ್, ಕಿಶೋರ್, ಬಾಲು, ರವೀಂದ್ರ ನಾಥ್, ಪಿ.ನಾರಾಯಣಪ್ಪ, ಸಂಚಾಲಕರಾದ ಹೂಹಳ್ಳಿ ಪ್ರಮೋದ್, ಶ್ರೀಕಾಂತ್, ರಮೇಶ್ ಇದ್ದರು.