ಪುತ್ತೂರು : ಕಾಡಾನೆ ದಾಳಿ ನಡೆಸಿ ಅಡಿಕೆ ತೋಟಕ್ಕೆ ಹಾನಿ ಮಾಡಿದ ಘಟನೆ ಪುತ್ತೂರು ಸುಳ್ಯ ಗಡಿ ಭಾಗವಾಗಿರುವ ಪೆರ್ನಾಜೆಯಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಪೆರ್ನಾಜೆಯ ಕುಮಾರ್ ಪೆರ್ನಾಜೆ ಮತ್ತು ರಾಘವೇಂದ್ರ ಭಟ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಯು ಕೃಷಿಗೆ ಹಾನಿ ಮಾಡಿದೆ. ಬುಧವಾರ ತಡರಾತ್ರಿ ವೇಳೆಯಲ್ಲಿ ಕಾಡಾನೆ ತೋಟಕ್ಕೆ ನುಗ್ಗಿರುವುದಾಗಿ ಕಂಡು ಬಂದಿದ್ದು, ತೋಟದಲ್ಲಿದ್ದ ಹಲವಾರು ಅಡಿಕೆ ಮರಗಳನ್ನು ಬುಡಸಹಿತ ಉರುಳಿಸಿದ್ದು, ಬಾಳೆಗಿಡಗಳನ್ನು ತಿಂದು ಹಾಕಿದೆ. ಬೆಳಗ್ಗಿನ ವೇಳೆ ಹಿಂದಿರುಗಿ ಮುಗೇರು ಗುಡ್ಡಡ್ಕ, ಆನೆಗುಂಡಿ ಕಡೆಯಿಂದ ತೆರಳಿರುವುದಾಗಿ ತಿಳಿದು ಬಂದಿದೆ.