ಸಾರಾಂಶ
ಕಾಂಗ್ರೆಸ್ ಸಂವಿಧಾನಕ್ಕೆ ನೀಡುವ ಅಗೌರವ ಮತ್ತು ತುರ್ತು ಪರಿಸ್ಥಿತಿಯ ಹೋರಾಟ, ಹೋರಾಟದ ಮೂಲಕ ದೇಶಕ್ಕೆ ನೀಡಿದ ನಾಯಕತ್ವದ ಬಗ್ಗೆ ವಿವರಿಸಿದರು.
ಯಲ್ಲಾಪುರ: ಬಿಜೆಪಿ ಮಂಡಳ ವಜ್ರಳ್ಳಿ ಶಕ್ತಿ ಕೇಂದ್ರದಲ್ಲಿ ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ ನಿಮಿತ್ತ ಪಕ್ಷದ ವತಿಯಿಂದ ಸಭೆ ಸಂಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ವಕ್ತಾರರಾಗಿ ವೆಂಕಟ್ರಮಣ ಬೆಳ್ಳಿ, ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯದ ಬಗ್ಗೆ ಮಾಹಿತಿ ನೀಡಿದರು. ಕಾಂಗ್ರೆಸ್ ಸಂವಿಧಾನಕ್ಕೆ ನೀಡುವ ಅಗೌರವ ಮತ್ತು ತುರ್ತು ಪರಿಸ್ಥಿತಿಯ ಹೋರಾಟ, ಹೋರಾಟದ ಮೂಲಕ ದೇಶಕ್ಕೆ ನೀಡಿದ ನಾಯಕತ್ವದ ಬಗ್ಗೆ ವಿವರಿಸಿದರು.ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ತುರ್ತು ಪರಿಸ್ಥಿತಿಯ ಕರಾಳ ದಿನದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣ, ಪ್ರಜಾಪ್ರಭುತ್ವಕ್ಕೆ ಮಾರಕವಾದ ಅಂಶಗಳು, ನ್ಯಾಯಾಂಗ ವ್ಯವಸ್ಥೆಯ ನಿಂದನೆ ಬಗ್ಗೆ ಬೆಳಕು ಚೆಲ್ಲಿದರು.
ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಅವರು, ಮೋದಿ@೧೧ ಅಡಿಯಲ್ಲಿ ಯಲ್ಲಾಪುರ ಮಂಡಳ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಕೇಂದ್ರ ಸರ್ಕಾರದ ಜನಪರ ಯೋಜನೆ, ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನದ ಕುರಿತು ಮಾತನಾಡಿದರು.ಹಿರಿಯರಾದ ಉಮೇಶ ಭಾಗ್ವತ, ಪಕ್ಷದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಗ್ರಾಪಂ ಸದಸ್ಯ ಜಿ.ಆರ್. ಭಾಗ್ವತ, ರೈತ ಮೋರ್ಚಾ ಅಧ್ಯಕ್ಷ ರಾಮಣ್ಣ ಚಿಕ್ಯಾನಮನೆ, ಶಕ್ತಿ ಕೇಂದ್ರ ಪ್ರಮುಖರಾದ ದತ್ತಾತ್ರೇಯ ಭಟ್ಟ ಮತ್ತು ನವೀನ ಕಿರಗಾರೆ, ರಾಮಕೃಷ್ಣ ಭಟ್ಟ ಕಳಚೆ, ರಾಘವೇಂದ್ರ ಭಟ್ಟ, ಪಂಚಾಯಿತಿ ಉಪಾಧ್ಯಕ್ಷೆ ಗಂಗಾ ಭಟ್ಟ, ಪಂಚಾಯಿತಿ ಸದಸ್ಯರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಸ್ವಾಗತ ಪ್ರಸ್ತಾವನೆಯನ್ನು ಪಕ್ಷದ ಪ್ರಮುಖರಾದ ವಿ.ಎನ್. ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಕಾಂತ ಹೆಬ್ಬಾರ ವಂದಿಸಿದರು.