ಪರಿಸರ ಮನುಕುಲದ ಜೀವನಾಡಿ ಎಂಎಲ್‌ಸಿ ಆರ್‌.ರಾಜೇಂದ್ರ

| Published : Jun 16 2025, 02:08 AM IST

ಪರಿಸರ ಮನುಕುಲದ ಜೀವನಾಡಿ ಎಂಎಲ್‌ಸಿ ಆರ್‌.ರಾಜೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ಮನುಕುಲದ ಜೀವನಾಡಿ, ಕಾಡು ಇದ್ದರೆ ನಾಡು ಉಳಿದಿತು. ಹಸಿರನ್ನು ಬೆಳಸಿ ಉಳಿಸಲು ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿ ಅದರ ಮಹತ್ವವನ್ನು ಶಿಕ್ಷಕರು, ಪೋಷಕರು ಅರಿತು ಇಂದಿನ ಮಕ್ಕಳಿಗೆ ಅರಣ್ಯದ ಬಗ್ಗೆ ಮನವರಿಕೆ ಮಾಡಿ ಕೊಟ್ಟು ಅರಣ್ಯ ಬೆಳಸಲು ಮುಂದಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಪರಿಸರ ಮನುಕುಲದ ಜೀವನಾಡಿ, ಕಾಡು ಇದ್ದರೆ ನಾಡು ಉಳಿದಿತು. ಹಸಿರನ್ನು ಬೆಳಸಿ ಉಳಿಸಲು ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿ ಅದರ ಮಹತ್ವವನ್ನು ಶಿಕ್ಷಕರು, ಪೋಷಕರು ಅರಿತು ಇಂದಿನ ಮಕ್ಕಳಿಗೆ ಅರಣ್ಯದ ಬಗ್ಗೆ ಮನವರಿಕೆ ಮಾಡಿ ಕೊಟ್ಟು ಅರಣ್ಯ ಬೆಳಸಲು ಮುಂದಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಕರೆ ನೀಡಿದರು.

ಪಟ್ಟಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯಕರ ಸಮಾಜ ರೂಪಗೊಳ್ಳಲು ಸ್ವಚ್ಛ ಪರಿಸರ ಅತ್ಯವಶ್ಯ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು.ಹಂತ ಹಂತವಾಗಿ ಸಾಧ್ಯವಾದಷ್ಟು ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿಲ್ಲಿಸಬೇಕು. ಪ್ಲಾಸ್ಟಿಕ್‌ ತ್ಯಜಿಸಿ ದೇಶದ ಸ್ವಚ್ಛತೆ ರೂಪಿಸಿ,ಇದು ಉತ್ತಮ ಪರಿಸರ ನಿರ್ಮಾಣಕ್ಕೆ ಮೊದಲ ಹೆಜ್ಜೆಯಾಗಲಿ.ಇಂದಿನ ಮಕ್ಕಳಿಗೆ ಅರಣ್ಯದ ಮಹತ್ವವನ್ನು ತಿಳಿಸಲು ನಮ್ಮಲ್ಲಿರುವ ತಿಮ್ಲಾಪುರ ಅರಣ್ಯದ ಕರಡಿಧಾಮ ,ಮೈದನಹಳ್ಳಿ ಕೃಷ್ಣಮೃಗ ಅರಣ್ಯಧಾಮಕ್ಕೆ ಮಕ್ಕಳನ್ನು ಕರೆದ್ಯೊಯ್ಯುವುದು ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು .ಇದರಿಂದ ಮಕ್ಕಳ ಅರಣ್ಯದ ಮಹತ್ವ ಅರಿತು ಆರೋಗ್ಯವಂತ ಸಮಾಜ ಕಟ್ಟಹಬಹುದು .ನಮ್ಮ ತಾಲೂಕಿನ ಮಕ್ಕಳು ವಿದ್ಯಾವಂತರಾಗಬೇಕು.ಅದಕ್ಕಾಗಿ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ತುಂಬಾ ಕಾಳಾಜಿ ವಹಿಸಿದ್ದು,ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ ಪುಸ್ತಕ ವಿತರಿಸಿದ್ದು,ಉಳಿದಂತ ಶಿಕ್ಷಣಕ್ಕೆ ಪೂರಕ ವಾತವರಣ ನಿರ್ಮಿಸುವ ಜೊತೆಗೆ ಶಾಲಾ- ಕಾಲೇಜುಗಳ ಬಗ್ಗೆ ಯಾವುದೇ ಸಮಸ್ಯೆಗಳು ಇದ್ದರೂ ನಮ್ಮ ಗಮನಕ್ಕೆ ತನ್ನಿ ಎಂದರು.

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಅರಣ್ಯದ ಅಭಿವೃದ್ಧಿಯೇ ದೇಶದ ಎಲ್ಲ ಕ್ಷೇತ್ರದ ಪ್ರಗತಿಗೆ ಸಹಕಾರಿಯಾಗಿಲಿದೆ. ಪರಿಸರ ಉಳಿಸಿ ಬೆಳಸುವ ನಿಟ್ಟಿನಲ್ಲಿ ಪ್ರಮುಖವಾಗಿ ಯುವ ಜನಾಂಗ ಮುತುವರ್ಜಿ ವಹಿಸಬೇಕು.ಪರಿಸರ ಬೆಳಸುವುದು ಎಲ್ಲರ ಹೊಣೆ ಅದು ನಿರಂತರ ಪ್ರಕ್ರಿಯೆ ಆದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ತಹಸೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಶೇ.33 ಇರಬೇಕಾದ ಅರಣ್ಯ ತಾಲೂಕಿನಲ್ಲಿ ಶೇ.19ರಷ್ಟಿದೆ. ಹಸಿರು ಉಳಿದರೆ ಮಾತ್ರ ಮನುಕುಲದ ಉಸಿರು ಉಳಿಯಲಿದೆ. ಯುವ ಜನತೆ ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌ ಮಾತನಾಡಿ, ಪರಿಸರ ತಾಯಿ ಇದ್ದಂತೆ ಅದನ್ನು ನಾವುಗಳು ಪ್ರೀತಿಯಿಂದ ಸಾಕಿ ಸಲಹಬೇಕು. ಪ್ರಕೃತಿ ಸುಭೀಕ್ಷವಾಗಿದ್ದರೆ ನಾಡು ಕ್ಷೇಮವಾಗಿರುತ್ತದೆ. ನಾನುಗಳೆಲ್ಲಾ ಸಸಿ ನೆಟ್ಟು ಪೋಷಿಸುವ ನಿಟ್ಟಿನಲ್ಲಿ ಅರಣ್ಯ ಬೆಳಸುವ ಸಂಕಲ್ಪ ಮಾಡೋಣ ಇದೇ ನಾವು ಮುಂದಿನ ಪೀಳಿಗೆಗೆ ಮಾಡುವ ಸೇವೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್‌ ಪ್ರಾಸ್ತಾವಿಕ ಭಾಷಣ ಮಾಡುತ್ತಾ, ಮಾತನಾಡಿ,1973ರಿಂದ ವಿಶ್ವ ಸಂಸ್ಥೆ ಹಾಗೂ ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಜೂ.5ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತೇವೆ. ಈ ಸಲ ಪ್ಲಾಸ್ಟಿಕ್‌ ಮುಕ್ತ ಪರಿಸರ ಎಂಹ ಧ್ಯೇಯ ವಾಕ್ಯವಾಗಿದೆ. ಅರಣ್ಯ ನೀತಿಯ ಪ್ರಕಾರ ಭೂ ಭಾಗದ ಶೇ.33 ರಷ್ಠು ಅರಣ್ಯವಿರಬೇಕಿದ್ದು, ಶೇ.21ರಷ್ಠು ಮಾತ್ರ ಅರಣ್ಯವಿದೆ. ಇದಕ್ಕಾಗಿ ಪ್ರತಿ ವರ್ಷ ರೈತರಿಗೆ,ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರಿ ಜಾಗಗಳಲ್ಲಿ ಅರಣ್ಯ ಬೆಳಸಲು ಸಸಿಗಳನ್ನು ವಿತರಿಸುತ್ತಿದ್ದೇವೆ.ಹಾಗಾಗಿ ಕಾಡು ಬೆಳಸುವುದು ಎಲ್ಲರ ಹೊಣೆ ಎಂದರು.

ಕಾರ್ಯಕ್ರಮದಲ್ಲಿ ತುಮುಲ್‌ ನಿರ್ದೇಶಕ ಬಿ.ನಾಗೇಶ್‌ಬಾಬು, ಬಿಇಓ ಕೆ.ಎನ್‌.ಹನುಮಂತರಾಯಪ್ಪ,ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು,ಸದಸ್ಯ ಮಂಜುನಾಥ್‌ ಆಚಾರ್,ಸಿಓ ಸುರೇಶ್‌,ಸಿಪಿಐ ಹನುಮಂತರಾಯಪ್ಪ,ಅರಣ್ಯ ಇಲಾಖೆ ಆರ್‌ಎಫ್‌ಓ ಸುರೇಶ್,ಮುತ್ತರಾಜು,ಶೈಲಾ,ಮುಖಂಡರಾದ ಎಸ್‌ಬಿಟಿ ರಾಮು ,ಕಿಶೋರ್‌,ವಿದ್ಯಾರ್ಥಿಗಳು ಇದ್ದರು.