ಸಿದ್ದರಾಮೇಶ್ವರರ ವಿಚಾರಧಾರೆ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು: ತಮ್ಮಯ್ಯ

| Published : Jan 18 2024, 02:04 AM IST

ಸಿದ್ದರಾಮೇಶ್ವರರ ವಿಚಾರಧಾರೆ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು: ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಗುರು ಸಿದ್ದರಾಮೇಶ್ವರರ ವಿಚಾರಧಾರೆಗಳು ಹಾಗೂ ಅವರ ತತ್ವಾದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಮಹಾನ್ ಪುರುಷರ ಜಯಂತಿಗೆ ಅರ್ಥ ಬರುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶ್ರೀಗುರು ಸಿದ್ದರಾಮೇಶ್ವರರ ವಿಚಾರಧಾರೆಗಳು ಹಾಗೂ ಅವರ ತತ್ವಾದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಮಹಾನ್ ಪುರುಷರ ಜಯಂತಿಗೆ ಅರ್ಥ ಬರುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಿಂದ ಹಲವಾರು ಮಹಾನ್ ಪುರುಷರ ಜಯಂತಿಗಳನ್ನು ಆಚರಿಸುತ್ತಾ ಬರುತ್ತಿದ್ದು, ಬುದ್ದ, ಬಸವ, ಅಂಬೇಡ್ಕರ್, ಕನಕದಾಸರು, ವಾಲ್ಮೀಕಿ, ಸಿದ್ದರಾಮೇಶ್ವರ ಜಯಂತಿಗಳು ಅವರ ಉದ್ದೇಶ ಸಮಾಜದಲ್ಲಿ ಸಮಾನತೆ ಕಾಣಬೇಕೆಂಬುದು ಆಗಿತ್ತು ಎಂದು ಹೇಳಿದರು.

ಈ ಮಹಾನ್ ಪುರುಷರ ಆಚರಣೆಗಳು ಕೇವಲ ಸರ್ಕಾರಿ ಕಾರ್ಯಕ್ರಮಗಳಾಗಬಾರದು ಎಂಬುದು ನನ್ನ ಆಶಯ. ಸಮಾಜದ ಎಲ್ಲಾ ಜನರನ್ನು ಜೋಡಿಸಿಕೊಂಡು ಮಹಾನ್ ಪುರುಷರ ಜಯಂತಿ ಆಚರಣೆ ಆಗಬೇಕು ಎಂದರು.

12ನೇ ಶತಮಾನದಲ್ಲಿಯೇ ಸಮಾನತೆಗೆ ಹೋರಾಡಿದವರು ಜಗಜ್ಯೋತಿ ಬಸವಣ್ಣನವರು. ಇವರ ಜೊತೆ ಸಮಕಾಲೀನ ರಾಗಿ ಸೇವೆ ಸಲ್ಲಿಸಿದ ಹಲವಾರು ಮಹಾನ್ ಪುರುಷರಿದ್ದಾರೆ. ಅವರಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಒಬ್ಬರಾಗಿದ್ದಾರೆ ಎಂದು ಹೇಳಿದರು.

ಸಮಾನತೆಗೆ ಹೋರಾಟ ಮಾಡಿದ ಎಲ್ಲಾ ಮಹಾನ್ ಪುರುಷರ ಉದ್ದೇಶ ಒಂದೇ ಆಗಿತ್ತು. ಈ ಕಾರಣಕ್ಕೆ ಸಾವಿರಾರು ವರ್ಷಗಳು ಕಳೆದರೂ ಇನ್ನೂ ಸಹ ಜಯಂತಿ ಆಚರಣೆ ಮೂಲಕ ಜೀವಂತವಾಗಿವೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಅಲ್ಲಿ ಅವರ ವಿಚಾರಧಾರೆಗಳನ್ನು ಭಕ್ತರಿಗೆ ತಿಳಿಸುವ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಿ, ಬಸವಣ್ಣನವರ ತತ್ವಾದರ್ಶಳು ಮತ್ತು ವಚನಗಳನ್ನು ಸಮಾಜಕ್ಕೆ ಬಿತ್ತಿದರು ಎಂದು ಹೇಳಿದರು.

ಉಪ ತಹಸೀಲ್ದಾರ್ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು, ಧಾರ್ಮಿಕ ಚಿಂತಕರಾದ ಸಾಹಿತಿ ಕತ್ತಿಗೆ ಚನ್ನಪ್ಪ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವಕೀಲ ಬಿ.ಆರ್‌. ಜಗದೀಶ್, ಭೋವಿ ಜನಾಂಗದ ಮುಖಂಡ ಚಂದ್ರಶೇಖರ ಭೋವಿ, ನೊಳಂಬ ಸಮಾಜದ ಮುಖಂಡ ಎಂ.ಸತೀಶ್, ಎಚ್.ಪಿ. ಮಂಜೇಗೌಡ, ಎಂ.ಸಿ. ಶಿವಾನಂದಸ್ವಾಮಿ, ಎಸ್.ಎಂ. ರಾಜಪ್ಪ, ದಾಸ ಭೋವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಡಾ. ರಮೇಶ್ ಉಪಸ್ಥಿತರಿದ್ದ 17 ಕೆಸಿಕೆಎಂ 1

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.