ಸ್ವಾತಂತ್ರ್ಯ ಓಟ ನಾಟಕ ಪ್ರದರ್ಶನ

| Published : Jun 01 2025, 02:23 AM IST

ಸಾರಾಂಶ

ಈ ನಾಟಕವು ಭಾರತ- ಪಾಕಿಸ್ತಾನ ವಿಭಜನೆಯ ಸಂದರ್ಭದ ಚಿತ್ರಣ ನೀಡುತ್ತದೆ. ಈ ನಾಟಕದಲ್ಲಿ ಬರುವ ದೃಶ್ಯದಂತೆ ಪಹಲ್ಗಾಮ್‌ ಪ್ರಕರಣದ ನಂತರ ಘಟನೆಯ ಮೈಸೂರಿನಲ್ಲಿಯೇ ನಡೆದಿದೆ.

ಕನ್ನಡಪ್ರಭ ವಾರ್ತೆ ಮೈಸೂರುತರಳಬಾಳು ಸಮಾಗಮವು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಬೋಳುವಾರು ಮಹಮದ್‌ ಕುಂಇ ಕೃತಿಯಾಧಾರಿತ ''''''''ಸ್ವಾತಂತ್ರ್ಯ ಓಟ'''''''' ನಾಟಕವನ್ನು ಶುಕ್ರವಾರ ಪ್ರದರ್ಶಿಸಿತು.ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿಕ್ಷಕರ ಬೇಸಿಗೆ ರಂಗತರಬೇತಿ ಶಿಬಿರದಲ್ಲಿ ಈ ನಾಟಕ ಸಿದ್ಧಪಡಿಸಲಾಗಿದೆ. ನಾಟಕವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಉದ್ಘಾಟಿಸಿ ಮಾತನಾಡಿ, ಈ ನಾಟಕವು ಭಾರತ- ಪಾಕಿಸ್ತಾನ ವಿಭಜನೆಯ ಸಂದರ್ಭದ ಚಿತ್ರಣ ನೀಡುತ್ತದೆ. ಈ ನಾಟಕದಲ್ಲಿ ಬರುವ ದೃಶ್ಯದಂತೆ ಪಹಲ್ಗಾಮ್‌ ಪ್ರಕರಣದ ನಂತರ ಘಟನೆಯ ಮೈಸೂರಿನಲ್ಲಿಯೇ ನಡೆದಿದೆ. ಪಾಕ್‌ ಪ್ರಜೆಗಳನ್ನು ದೇಶಬಿಟ್ಟು ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದರು. ಮೈಸೂರಿನ ಮಹಿಳೆಯೊಬ್ಬರು ಪಾಕ್‌ ಪ್ರಜೆಯನ್ನು ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಆಕೆ ವಾಘಾ ಗಡಿಗೆ ಹೋದಾಗ ಫೋನ್‌ ಮಾಡಿದರೂ ಪತಿ ತೆಗೆಯಲಿಲ್ಲ. ಹೀಗಾಗಿ ತ್ರಿಶಂಕು ಸ್ಥಿತಿಗೆ ಸಿಕ್ಕಿರುವ ಆಕೆ ಹೈಕೋರ್ಟ್‌ ಮೆಟ್ಟಿಲೇರಿದ್ದರು ಎಂದರು.ಟಿವಿ, ಮೊಬೈಲ್‌ ಹಾವಳಿಯಿಂದಾಗಿ ನಾಟಕಗಳಿರಲಿ, ಸಿನಿಮಾಗಳಿಗೆ ವೀಕ್ಷಕರ ಕೊರತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾಟಕ ಕಲೆಯನ್ನು ಉಳಿಸಿ, ಬೆಳೆಸಬೇಕು ಎಂದು ಅವರು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ ಮುಖ್ಯ ಅತಿಥಿಯಾಗಿದ್ದರು,. ತರಳಬಾಳು ಸಮಾಗಮದ ಅಧ್ಯಕ್ಷ ಡಾ.ಎಸ್‌.ಬಿ. ವಸಂತಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿವಕುಮಾರ್‌ ಹಂಜಿ, ಸದಸ್ಯ ಡಾ. ಗುರುಮೂರ್ತಿ, ತರಳಬಾಳು ಸಮಾಗಮದ ರಾಜಶೇಖರಯ್ಯ, ನಾಟಕದ ನಿರ್ದೇಶಕ ಶಶಿಧರ ಭಾರಿಘಾಟ್‌ ಇದ್ದರು. ಸದಸ್ಯ ಡಿ.ಎನ್‌. ಲೋಕಪ್ಪ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ಖ್ಯಾತ ಕವಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.ಭಾರತ- ಪಾಕಿಸ್ತಾನ ವಿಭಜನೆಯ ಸಂದರ್ಭದ ನಾಟಕಸ್ವಾತಂತ್ರ್ಯಓಟ ಭಾರತ- ಪಾಕಿಸ್ತಾನ ವಿಭಜನೆಯ ಸಂದರ್ಭದ ಬಹು ಆಯಾಮದ ಚಿತ್ರಣ ನೀಡುವ ನಾಟಕ. ಮಾನವೀಯ ಮೌಲ್ಯಗಳನ್ನು ಅನಾವರಣಗೊಳಿಸುವ ದೃಶ್ಯಗಳಿವೆ. ಸಿಖ್‌ ಹೆಣ್ಣು ಮಕ್ಕಳಿಬ್ಬರಿಗೆ ಸಹಾಯ ಮಾಡಲೆಂದು ಪಾಕಿಸ್ತಾನದ ಗಡಿ ದಾಟಿ ಭಾರತಕ್ಕೆ ಬಂದ ಮುಸ್ಲಿಂ ಯುವಕನೊಬ್ಬ ಮರಳಿ ಪಾಕಿಸ್ಥಾನಕ್ಕೆ ಹೋಗಲಾರದೇ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗ ಈ ನಾಟಕದ ವಸ್ತು. ವಿಭಜನೆಯ ಸಂದರ್ಭದ ಚಿತ್ರಣವನ್ನು ಮಾರ್ಮಿಕವಾಗಿ ಕಟ್ಟಿಕೊಡುತ್ತದೆ.ಶಶಿಧರ ಭಾರಿಘಾಟ್‌- ನಿರ್ದೇಶನ, ನಿರಂಜನ ಖಾಲಿಕೊಡ- ಸಹ ನಿರ್ದೇಶನ, ದಿಗ್ವಿಜಯ ಹೆಗ್ಗೋಡು- ಸಂಗೀತ, ಎಂ.ಎಸ್‌. ಸಿದ್ದೇಶ್‌, ಇರ್ಫಾನ್‌- ಬೆಳಕು ಹಾಗೂ ಎಸ್‌.ಸಿ. ಪ್ರಕಾಶ್‌, ಎಂ.ಎಸ್‌. ಸಿದ್ದೇಶ್‌- ಧ್ವನಿ. ರಂಗ ಪರಿಕರ, ರಂಗಸಜ್ಜಿಕೆ, ಪ್ರಸಾದನ ಹಾಗೂ ಅಭಿನಯ ಸಿರಿಗೆರೆ ತರಳಬಾಳು ಕಲಾ ಸಂಘ- ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅಧ್ಯಾಪಕ ವರ್ಗದವರು ನಾಟಕ ಪ್ರಸ್ತುತಪಡಿಸಿದರು.