ಸಕಲೇಶಪುರ ತಾಲೂಕಲ್ಲಿ ವ್ಯಾಪಕ ಮಳೆ

| Published : Jun 25 2025, 12:33 AM IST

ಸಾರಾಂಶ

ಸಕಲೇಶಪುರ ತಾಲೂಕಿನಲ್ಲಿ ಆರಿದ್ರ್ಯಾ ಮಳೆಯ ಅಬ್ಬರ ಮುಂದುವರಿದಿದ್ದು ಸೋಮವಾರ ಸಂಜೆಯಿಂದ ಬಿರುಸು ಪಡೆದಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದ್ದರೆ, ಮಳೆಯಿಂದಾಗಿ ಹೇಮಾವತಿ ನದಿಯ ಒಡಲು ತುಂಬಿ ಹರಿಯುತ್ತಿದೆ. ತಾಲೂಕಿನ ಪ್ರಮುಖ ನದಿಗಳೆಲ್ಲವೂ ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಳೆಯಿಂದಾಗಿ ಚಳಿ ಹೆಚ್ಚಿದ್ದು ಜನರು ಮನೆಬಿಟ್ಟು ಹೊರಬಾರದ ಕಾರಣ ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರದ ರಸ್ತೆಗಳು ನಿರ್ಜನಗೊಂಡಿವೆ.

ಸಕಲೇಶಪುರ: ತಾಲೂಕಿನಲ್ಲಿ ಆರಿದ್ರ್ಯಾ ಮಳೆಯ ಅಬ್ಬರ ಮುಂದುವರಿದಿದ್ದು ಸೋಮವಾರ ಸಂಜೆಯಿಂದ ಬಿರುಸು ಪಡೆದಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದ್ದರೆ, ಮಳೆಯಿಂದಾಗಿ ಹೇಮಾವತಿ ನದಿಯ ಒಡಲು ತುಂಬಿ ಹರಿಯುತ್ತಿದೆ. ತಾಲೂಕಿನ ಪ್ರಮುಖ ನದಿಗಳೆಲ್ಲವೂ ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದ್ದರೆ ದೊಡ್ಡತಪ್ಲೆ ಗ್ರಾಮ ಸಮೀಪದ ಹೆದ್ದಾರಿ ಸಮೀಪವಿರುವ ಗುಡ್ಡದಿಂದ ಭಾರಿ ಪ್ರಮಾಣದಲ್ಲಿ ಅಂತರ್ಜಲ ಉಕ್ಕಿ ಹರಿಯುತ್ತಿದ್ದು ವಾಹನ ಸವಾರರ ಆತಂಕ ಇಮ್ಮಡಿ ಮಾಡಿದೆ. ಇಲ್ಲಿ ಗುಡ್ಡ ಯಾವ ಸಂದರ್ಭದಲ್ಲೂ ಬೇಕಿದ್ದರೂ ಹೆದ್ದಾರಿಗೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಮಳೆಯಿಂದಾಗಿ ಚಳಿ ಹೆಚ್ಚಿದ್ದು ಜನರು ಮನೆಬಿಟ್ಟು ಹೊರಬಾರದ ಕಾರಣ ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರದ ರಸ್ತೆಗಳು ನಿರ್ಜನಗೊಂಡಿವೆ.