ಸಾರಾಂಶ
ಮೈಸೂರು: ಐಪಿಎಲ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿಸುರ ಆರ್ ಸಿಬಿ ತಂಡಕ್ಕಾಗಿ ಮೈಸೂರಿನ ಅಭಿಮಾನಿಗಳು ವಿಶೇಷ ಕಾರನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮೈಸೂರು: ಐಪಿಎಲ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿಸುರ ಆರ್ ಸಿಬಿ ತಂಡಕ್ಕಾಗಿ ಮೈಸೂರಿನ ಅಭಿಮಾನಿಗಳು ವಿಶೇಷ ಕಾರನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.ಅಭಿಮಾನಿಗಳಾದ ದೀಪಕ್, ಶ್ರೇಯಸ್ ಮತ್ತು ಪ್ರಣೀತ್ ಎಂಬವರು ಹೆಬ್ಬಾಳು ಕೈಗಾರಿಕಾ ಪ್ರದೇಶದ ಕಾರ್ ಮೆಡ್ ನಲ್ಲಿ ವಿಶೇಷ ಕಾರನ್ನು ಸಿದ್ಧಪಡಿಸಿ, ಕಾರನ್ನು ಸಂಪೂರ್ಣವಾಗಿ ಆರ್ ಸಿಬಿಮಯ ಮಾಡಿದ್ದಾರೆ.ಕಾರಿನ ಮುಂಭಾಗದಲ್ಲಿ ಕನ್ನಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು, ಒಂದು ಬದಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರು ಹಾಗೂ ಅಭಿಮಾನಿಗಳ ಸ್ಟಿಕ್ಕರ್, ಮತ್ತೊಂದು ಬದಿ ಐಪಿಎಲ್ ಗೆದ್ದ ಮಹಿಳಾ ತಂಡದ ಸ್ಟಿಕ್ಕರ್ ಅಂಟಿಸಿದ್ದಾರೆ. ತಾಯಿ ಚಾಮುಂಡೇಶ್ವರಿಗೆ ಆರ್ ಸಿಬಿ ಪರವಾಗಿ ವಿಶೇಷ ಪೂಜೆ ಸಲ್ಲಿಸಲಿರುವ ಈ ಅಭಿಮಾನಿಗಳು, ಮೈಸೂರು ಹಾಗೂ ಬೆಂಗಳೂರಿನಲ್ಲಿ ಸಂಚಾರ ಮಾಡಿ, ಆರ್ ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿನ ಜೋಶ್ ತುಂಬಲಿದ್ದಾರೆ.