ಬಹುಪಯೋಗಿ ಎಡೆ ಹೊಡೆಯುವ ಯಂತ್ರಕ್ಕೆ ಮನಸೋತ ರೈತರು

| Published : Sep 23 2024, 01:17 AM IST

ಸಾರಾಂಶ

ಇಲ್ಲಿನ ಕೃಷಿಮೇಳದಲ್ಲಿ ಅರೇಕುರಹಟ್ಟಿಯ ಶ್ರೀನಿವಾಸ್‌ ಜನರಲ್‌ ಎಂಜಿನಿಯರಿಂಗ್‌ ವರ್ಕ್ಸ್‌ನವರು ಅಭಿವೃದ್ಧಿಪಡಿಸಿದ ಬಹುಪಯೋಗಿ ಎಡೆ ಹೊಡೆಯುವ ಯಂತ್ರ ಕೃಷಿಕರ ಗಮನ ಸೆಳೆಯುತ್ತಿದೆ.

ಧಾರವಾಡ: ಇಲ್ಲಿನ ಕೃಷಿಮೇಳದಲ್ಲಿ ಅರೇಕುರಹಟ್ಟಿಯ ಶ್ರೀನಿವಾಸ್‌ ಜನರಲ್‌ ಎಂಜಿನಿಯರಿಂಗ್‌ ವರ್ಕ್ಸ್‌ನವರು ಅಭಿವೃದ್ಧಿಪಡಿಸಿದ ಬಹುಪಯೋಗಿ ಎಡೆ ಹೊಡೆಯುವ ಯಂತ್ರ ಕೃಷಿಕರ ಗಮನ ಸೆಳೆಯುತ್ತಿದೆ.

ಈ ಬಹುಪಯೋಗಿ ಯಂತ್ರ ಒಂದೇ ಬಾರಿ ಮೂರು ಕಾರ್ಯಗಳನ್ನು ನಿರ್ವಹಿಸುತ್ತದೆ. ಎಡೆ ಹೊಡೆಯುವುದರ ಜತೆಗೆ ಗೊಬ್ಬರ ಹಾಕುವುದು, ಬೆಳೆಗಳಿಗೆ ಔಷಧ ಸಿಂಪಡಿಸುವ ಕಾರ್ಯ ಮಾಡುತ್ತದೆ. ಇದರಿಂದ ಕಾರ್ಮಿಕರ ಕೊರತೆ ನೀಗುವುದಲ್ಲದೇ ಸಮಯದ ಉಳಿತಾಯವೂ ಆಗುತ್ತದೆ.

ಸಾಮಾನ್ಯವಾಗಿ ರೈತರು ಎತ್ತುಗಳಿಂದ ಒಂದು ದಿನಕ್ಕೆ 2ರಿಂದ 3 ಎಕರೆ ಎಡೆ ಹೊಡೆಯುತ್ತಾರೆ. ಆದರೆ ಶ್ರೀನಿವಾಸ್‌ ಜನರಲ್‌ ಎಂಜಿನಿಯರಿಂಗ್‌ ವರ್ಕ್ಸ್‌ನವರು ಅಭಿವೃದ್ಧಿಪಡಿಸಿದ ಈ ಯಂತ್ರದಿಂದ ಕೇವಲ ಒಂದೇ ಗಂಟೆಯಲ್ಲಿ 6 ಎಕರೆ ಜಮೀನನ್ನು ಎಡೆ ಹೊಡೆಯಬಹುದು. ಅಲ್ಲದೇ ಇದೇ ಅವಧಿಯಲ್ಲಿ ಗೊಬ್ಬರ, ಔಷಧಿಯನ್ನು ಸಿಂಪಡಿಸಬಹುದು.

ದಿಂಡಿನ ಕುಂಟೆ

ಆಳವಾದ ಉಳುಮೆಗೆ ಸುಧಾರಿಸಿದ ದಿಂಡಿನ ಕುಂಟೆಯನ್ನು ಇವರು ಅಭಿವೃದ್ಧಿಪಡಿಸಿದ್ದಾರೆ. ಮೊದಲು ಈ ಯಂತ್ರ 7 ಅಡಿ ಉದ್ದವಿತ್ತು. ಇದೀಗ ಈ ಯಂತ್ರವನ್ನು 13 ಅಡಿಗೆ ವಿಸ್ತರಿಸಲಾಗಿದೆ. ಇದರಿಂದ ಮತ್ತಷ್ಟು ವೇಗವಾಗಿ ಕೃಷಿ ಕೆಲಸವನ್ನು ಮಾಡಬಹುದು. ಜತೆಗೆ ಗಿಡ- ಮರಗಳು ಇದ್ದಲ್ಲಿ ಯಂತ್ರವನ್ನು ಮಡಚಲು ಅನುಕೂಲವಾಗುವಂತೆ ತಯಾರಿಸಲಾಗಿದೆ. ಇದೇ ರೀತಿ ಹತ್ತಾರು ರೈತಸ್ನೇಹಿ ಉಪಕರಣಗಳನ್ನು ತಯಾರಿಸಿದ್ದೇವೆ. ಉತ್ತಮ ಗುಣಮಟ್ಟ ಇರುವುದರಿಂದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುತ್ತಾರೆ ಮಾಲೀಕರಾದ ಧರ್ಮಾರೆಡ್ಡಿ ಲಕ್ಕಣ್ಣವರ (ಮೊ. 9880197889, 9110657545). ಇವರು ತಯಾರಿಸುವ ಉಪಕರಣಗಳ ಗುಣಮಟ್ಟಕ್ಕೆ ಐಎಸ್‌ಒ 9001 ಸಂಸ್ಥೆ ದೃಢೀಕೃತ ಪ್ರಮಾಣಪತ್ರವೂ ದೊರೆತಿದೆ.ಹೆಚ್ಚಿದ ಬೇಡಿಕೆ

ಕೃಷಿ ಮೇಳದಲ್ಲಿ ನಮ್ಮ ಮಳಿಗೆಗೆ ಎರಡು ದಿನದಲ್ಲಿ 10 ಸಾವಿರಕ್ಕೂ ಅಧಿಕ ಜನರು ಭೇಟಿ ನೀಡಿದ್ದಾರೆ. ಇದು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ. ಗುಣಮಟ್ಟದ ಯಂತ್ರಗಳ ತಯಾರಿಕೆಗೆ ನಾವು ಆದ್ಯತೆ ನೀಡಿದ್ದೇವೆ. ಹೀಗಾಗಿ ನಮ್ಮ ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಧರ್ಮಾರೆಡ್ಡಿ ಲಕ್ಕಣ್ಣವರ, ಶ್ರೀನಿವಾಸ ಜನರಲ್‌ ಎಂಜಿನಿಯರಿಂಗ್ ವರ್ಕ್ಸ್‌ ಅರೇಕುರಹಟ್ಟಿ