ಸಾರಾಂಶ
ರಬಕವಿ-ಬನಹಟ್ಟಿ: ರಾಮನಗರ ಜಿಲ್ಲೆಯ ವಕೀಲರ ಸಂಘದ ೪೦ ಜನ ವಕೀಲರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ವಕೀಲರು ತಹಸೀಲ್ದಾರ್ ಕಾರ್ಯಾಲಯದ ಶಿರಸ್ತೇದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಬಕವಿ-ಬನಹಟ್ಟಿ: ರಾಮನಗರ ಜಿಲ್ಲೆಯ ವಕೀಲರ ಸಂಘದ ೪೦ ಜನ ವಕೀಲರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ವಕೀಲರು
ತಹಸೀಲ್ದಾರ್ ಕಾರ್ಯಾಲಯದ ಶಿರಸ್ತೇದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ವಕೀಲರ ಸಂಘದ ಕಾರ್ಯದರ್ಶಿ ಎಸ್.ಜಿ. ಸಲಬನ್ನವರ ಮಾತನಾಡಿ, ಸರ್ಕಾರ ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಕೀಲರಾದ ಪಿ.ಜಿ.ಪಾಟೀಲ, ಕಾಡೇಶ ನ್ಯಾಮಗೌಡ, ಭೀಮಶಿ ಯಲ್ಲಟ್ಟಿ, ಮಹಾಂತೇಶ ಪದಮಗೊಂಡ, ಎಸ್.ಎಸ್. ಸಿದ್ದಾಪುರ, ಅಖಿಲ ವ್ಯಾಸ್, ವಿನೋದ ಖೇಮನ್ನವರ, ಎಸ್.ಎಂ. ಫಕೀರಪೂರ, ರವೀಂದ್ರ ಸಂಪಗಾಂವಿ ಇತರರು ಇದ್ದರು.