ಕಿಡ್ನಿ ವೈಫಲ್ಯಗೊಂಡ ಯುವಕನಿಗೆ ಕುಲಾಲ ಸಂಘದಿಂದ ಆರ್ಥಿಕ ನೆರವು

| Published : Jun 09 2025, 02:43 AM IST / Updated: Jun 09 2025, 02:44 AM IST

ಕಿಡ್ನಿ ವೈಫಲ್ಯಗೊಂಡ ಯುವಕನಿಗೆ ಕುಲಾಲ ಸಂಘದಿಂದ ಆರ್ಥಿಕ ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಜಿಲ್ಲಾ ಕುಲಾಲ ಸಂಘದಿಂದ ಆರ್ಥಿಕ ನೆರವು ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಜಿಲ್ಲಾ ಕುಲಾಲ ಸಂಘದಿಂದ ಆರ್ಥಿಕ ನೆರವು ನೀಡಲಾಯಿತು.

ಕೊಡಗು ಜಿಲ್ಲೆಯ ಸಿದ್ದಾಪುರದ ನೆಲ್ಲಿಹುದಿಕೇರಿಯ ಬೆಟ್ಟದ ಕಾಡುವಿನ ತನಿಯಪ್ಪ ಮೀನ ದಂಪತಿ ಪುತ್ರ ಕಿರಣ್ ಅವರು ಎರಡು ಕಿಡ್ನಿ ವೈಫಲ್ಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ನೇತೃತ್ವದಲ್ಲಿ ನಾಡಿನ ದಾನಿಗಳಿಂದ ಸಂಗ್ರಹಗೊಂಡ ಮೊತ್ತವನ್ನು ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಚಿಕಿತ್ಸೆಗಾಗಿ ನೀಡಲಾಯಿತು.

ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷ ಕೆ. ಕುಶಾಲಪ್ಪ ಮಾತನಾಡಿದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ, ಪದಾಧಿಕಾರಿಗಳಾದ ಮಂಜು ಬೈಚನಹಳ್ಳಿ, ಯೋಗೀಶ್ ನೆಲ್ಲಿಹುದಿಕೇರಿ, ರೋಹಿತ್ ನೆಲ್ಲಿಹುದಿಕೇರಿ ಉಪಸ್ಥಿತರಿದ್ದರು.