ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಗ್ರಾಮೀಣ ರೈತರ ಅನುಕೂಲಕ್ಕಾಗಿ ಹೊಸಬಸ್ ನಿಲ್ದಾಣದ ಪಕ್ಕದಲ್ಲಿಯೇ ಹೂವಿನ ಮಂಡಿ ತೆರೆಯಲು ಅವಕಾಶ ಕಲ್ಪಿಸುವಂತೆ,ಪುರಸಭೆಯ ಮುಖ್ಯಾಧಿಕಾರಿಗೆ ಅದೇಶಿಸಲಾಗಿದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ಹೇಳಿದರು.ಈ ಕುರಿತು ಪ್ರತಿಭಟನೆ ನಡೆಸಿದ್ದ ವೇಳೆ ಪ್ರತಿಭಟನಾಕಾರರ ಜೊತೆ ದೂರವಾಣಿ ಮಾತನಾಡಿದ ಅವರು, ರೈತರಿಗೆ ತೊಂದರೆ ಕೊಡುವುದು ಸರಿಯಲ್ಲ, ಪುರಸಭೆ ಅಧಿಕಾರಿಗಳು ಯಾಕೆ ಈ ರೀತಿಯ ಕ್ರಮವಹಿಸಿದ್ದರೂ ಗೊತ್ತಿಲ್ಲ. ನಮಗೆ ರೈತರು ಮುಖ್ಯ, ಹೀಗಾಗಿ, ಹೊಸಬಸ್ ನಿಲ್ದಾಣದ ರಸ್ತೆಯ ಬಲಭಾಗದಲ್ಲಿ ರೈತರ ಮಾರುಕಟ್ಟೆ ಹಾಗೂ ಎಡಭಾಗದಲ್ಲಿ ಹೂವು ವಿಳ್ಯದೆಲೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲು ಪುರಸಭೆ ಮುಖ್ಯಾಧಿಕಾರಿಗೆ ಈಗಲೇ ಸೂಚಿಸುವುದಾಗಿ ಭರವಸೆ ನೀಡಿದರು.ಈ ಮೇರೆಗೆ ಪ್ರತಿಭಟನೆ ಕೈಬಿಟ್ಟ ರೈತರು,ಶಾಸಕರ ಕ್ರಮಕ್ಕೆ ಅಭಿನಂದನೆ ವ್ಯಕ್ತಪಡಿಸಿದರು. ಸ್ಥಳಕ್ಕೆ ಪುರಸಭೆಯ ಆರೋಗ್ಯಧಿಕಾರಿ ಶಂಷುದ್ದೀನ್ ಭೇಟಿ ನೀಡಿ ಹೂವು ಬೆಳೆಗಾರರಿಗೆ, ಭರವಸೆ ನೀಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡನೂರು ಶಿವು, ಜಿಲ್ಲಾ ಉಪಾಧ್ಯಕ್ಷ ದಂಡುಪಾಳ್ಯದ ರಾಮಾಂಜಿನಪ್ಪ, ಚಿತ್ತಯ್ಯ, ಸದಾಶಿವಪ್ಪ, ಕರಿಯಣ್ಣ, ನಾಗರಾಜಪ್ಪ, ಹೊಸಕೋಟೆ ಗೋಪಾಲ್, ರಾಮಪ್ಪ ಪರಮೇಶಪ್ಪ, ಹನುಮಂತರಾಯಪ್ಪನಾಗಪ್ಪ, ರಾಮಾಂಜಿನೇಯ, ಓಬಳಾಪುರದ ಫಕೀರಪ್ಪ ಸೇರಿದಂತೆ ಅನೇಕ ಮಂದಿ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.