ಕನ್ನಡ ಭಾಷೆ ಬೆಳವಣಿಗೆಗೆಸರ್ಕಾರ ಹೆಚ್ಚು ಒತ್ತು ನೀಡಲಿ

| Published : Mar 02 2025, 01:19 AM IST

ಸಾರಾಂಶ

ಸಾಗರ: ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ೨೫ ಕೋಟಿ ರು. ಆರ್ಥಿಕ ಸಹಕಾರ ನೀಡಿದಂತೆ ಜಿಲ್ಲಾ ಸಮ್ಮೇಳನಕ್ಕೆ ೨೫ ಲಕ್ಷ ರು. ತಾಲೂಕು ಸಮ್ಮೇಳನಕ್ಕೆ ಕನಿಷ್ಠ ೧೦ ಲಕ್ಷ ರು. ಆರ್ಥಿಕ ಸಹಕಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.

ಸಾಗರ: ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ೨೫ ಕೋಟಿ ರು. ಆರ್ಥಿಕ ಸಹಕಾರ ನೀಡಿದಂತೆ ಜಿಲ್ಲಾ ಸಮ್ಮೇಳನಕ್ಕೆ ೨೫ ಲಕ್ಷ ರು. ತಾಲೂಕು ಸಮ್ಮೇಳನಕ್ಕೆ ಕನಿಷ್ಠ ೧೦ ಲಕ್ಷ ರು. ಆರ್ಥಿಕ ಸಹಕಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.

ನಗರಸಭೆ ರಂಗಮಂದಿರದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಾಲೂಕು ಮಟ್ಟದ ೧೨ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗುವ ಎಲ್ಲಾ ಚಟುವಟಿಕೆಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡಬೇಕು ಎಂದು ಒತ್ತಾಯಿಸಿದರು.ದಿಕ್ಸೂಚಿ ಭಾಷಣ ಮಾಡಿದ ರಂಗಾಯಣ ನಿರ್ದೇಶಕ ಪ್ರಸನ್ನ.ಡಿ, ಮಕ್ಕಳಿಗೆ ಕನ್ನಡ ಕಲಿಸುವ, ಕನ್ನಡ ಸಾಹಿತ್ಯ ಕುರಿತು ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಕಲೆ, ಸಾಹಿತ್ಯ, ಸಂಸ್ಕೃತಿಯ ಸಾಮಿಪ್ಯ ಇರಿಸಿಕೊಂಡಾಗ ಮಾನಸಿಕ ದೃಢತೆ ಹೆಚ್ಚುತ್ತದೆ ಎಂದರು.ಇದಕ್ಕೂ ಮೊದಲು ಉಪವಿಭಾಗಾಧಿಕಾರಿ ಯತೀಶ್.ಆರ್ ರಾಷ್ಟ್ರ ಧ್ವಜಾರೋಹಣ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್ ನಾಡಧ್ವಜ, ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು.