ಇತ್ತೀಚಿನ ದಿನಗಳಲ್ಲಿ ಪುರುಷ ಮೇಲಿನ ದೌರ್ಜನ್ಯಗಳನ್ನು ಗಂಬೀರವಾಗಿ ಯಾರೂ ಪರಿಣಿಸುತ್ತಿಲ್ಲ. ಈ ಕುರಿತು ಆಲೋಚನೆ ಮಾಡಬೇಕಿದೆ. ಸಫಲತೆ ಪಡೆಯಬೇಕಿದೆ, ಸಂಘಟನೆ ರಚನೆಗೊಳ್ಳಬೇಕಿದೆ ಎನ್ನುವ ಸುದೀರ್ಘ ಚರ್ಚೆ ನಡೆದಿದೆ. ಸಾಕಷ್ಟು ಮಂದಿ ಉತ್ತಮ ಸಲಹೆ ಅಭಿಪ್ರಾಯ-ಮಾರ್ಗಸೂಚನೆಗಳನ್ನು ನೀಡಿದ್ದೀರಿ.
ಕನ್ನಡಪ್ರಭ ವಾರ್ತೆ ಮಂಡ್ಯ
ಆಧುನಿಕತೆ ಜಗತ್ತಿನಲ್ಲಿ ಪುರುಷರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಗೆ ಹತ್ತಿಕ್ಕಿಲು ರಾಜ್ಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬರುತ್ತಿದೆ ಎಂದು ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕರು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖಂಡರು-ವಿವಿಧ ಇಲಾಖೆಗಳ ನಿವೃತ್ತ ಅಧಿಕಾರಿಗಳ ಸಮ್ಮುಖದಲ್ಲಿ ಆಧುನಿಕ ಮಹಿಳೆಯರಿಂದ ಪುರುಷರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆ ನಿಯಂತ್ರಣ ಮತ್ತು ಹೋರಾಟ ರೂಪಿಸುವ ಸಮಿತಿ ರಚನೆಯ ಪೂರ್ವಭಾವಿ ಸಭೆ ನಡೆದು ಹಲವು ನಿರ್ಣಯಗಳ ಕುರಿತು ಚರ್ಚಿಸಿದ ಬಳಿಕ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪುರುಷ ಮೇಲಿನ ದೌರ್ಜನ್ಯಗಳನ್ನು ಗಂಬೀರವಾಗಿ ಯಾರೂ ಪರಿಣಿಸುತ್ತಿಲ್ಲ. ಈ ಕುರಿತು ಆಲೋಚನೆ ಮಾಡಬೇಕಿದೆ. ಸಫಲತೆ ಪಡೆಯಬೇಕಿದೆ, ಸಂಘಟನೆ ರಚನೆಗೊಳ್ಳಬೇಕಿದೆ ಎನ್ನುವ ಸುದೀರ್ಘ ಚರ್ಚೆ ನಡೆದಿದೆ. ಸಾಕಷ್ಟು ಮಂದಿ ಉತ್ತಮ ಸಲಹೆ ಅಭಿಪ್ರಾಯ-ಮಾರ್ಗಸೂಚನೆಗಳನ್ನು ನೀಡಿದ್ದೀರಿ ಎಂದು ನುಡಿದರು.ಸ್ವಾತಂತ್ರ್ಯ ಬಂದ ನಂತರದಲ್ಲಿ ಹೆಣ್ಣುಮಕ್ಕಳಿಗೆ ಎಲ್ಲಾ ಕಾನೂನು ರಕ್ಷಣೆಗಳು ಹೆಚ್ಚಾಗಿವೆ. ಹಿಂದೆ ಪುರುಷರ ದೌರ್ಜನ್ಯ ಇತ್ತು, ಆ ನಂತರದ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಕಾನೂನಾತ್ಮಕವಾಗಿ ಬಂದವು. ಇದೀಗ ಕೆಲವು ಮಹಿಳೆಯರಿಂದ ತನ್ನ ಕೌಟುಂಬಿಕ ಜೀವನದಲ್ಲಿ ಪುರುಷರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಎಚ್ಚರಿಸಿದರು.
ಪುರುಷರ ಮೇಲಿನ ದೌರ್ಜನ್ಯ ಜಗದ್ಜಾಹಿರಾಗುವುದು ಸಾಮಾನ್ಯ. ಆದರೆ, ಹೆಣ್ಣು ಮಕ್ಕಳ ದೌರ್ಜನ್ಯ ಸಮಾಜಿಕವಾಗಿ ತೆರದುಕೊಳ್ಳುವುದು ಕಷ್ಟು. ಬಾಯಿಬಿಟ್ಟರೆ ಸಂಸಾರದ ಗುಟ್ಟು ರಟ್ಟು ಎನ್ನುವಂತಾಗಿದೆ ಪುರುಷರ ಪರಿಸ್ಥಿತಿಗಳು ಎಂದು ಅಭಿಪ್ರಾಯಿಸಿದರು.ಬಳಿಕ ಮಾತನಾಡಿದ ಧ್ವನಿ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಮತ್ತು ಕೌಟುಂಬಿಕ ಸಮಸ್ಯೆಗಳ ಸಮಾಲೋಚಕಿ ರಜನಿರಾಜ್, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಮಸ್ಯೆಗಳ ಸಾಲಿನಲ್ಲಿ ಪುರುಷರಿಗೆ ಆಗುತ್ತಿರುವ ದೌರ್ಜನ್ಯಗಳ ಪ್ರಕರಣ ಹೆಚ್ಚಾಗುತ್ತಿವೆ, ಮಹಿಳಾ ಆಯೋಗ ಇರುವಂತೆಯೇ ಪುರುಷ ಆಯೋಗ ರಚನೆಯಾಗಬೇಕಿದೆ ಎಂದು ಸಲಹೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜನ್ಮ ದಿನಾಚರಣೆಯ ಸುದಿನದಲ್ಲಿ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಸಭೆ ನಡೆಯುತ್ತಿರುವುದು ಅವಿಸ್ಮರಣೀಯ, ಸಂಘಟನೆ ರೂಪುಗೊಂಡು ನೋಂದಣಿ ಮಾಡಿ, ನಂತರ ಹೋರಾಟ, ಸಮಾಲೋಚನೆ, ಕಾರ್ಯರೂಪಗಳ ಬಗ್ಗೆ ಚರ್ಚಿಸಸಲಾಗುವುದು ಎಂದರು.ಪೊಲೀಸ್ ಇಲಾಖೆಯಲ್ಲಿ ಮಹಿಳಾ ಕುಂದುಕೊರತೆ ವಿಭಾಗ, ಮಹಿಳಾ ಠಾಣೆ ಇದೆ. ಎಲ್ಲಾ ಮಹಿಳಾ ಸಂಘಟನೆಗಳು ಮುಂಚೂಣಿಯಲ್ಲಿವೆ, ಪುರುಷರಿಗೆ ಯಾಕೆ ಇಷ್ಟು ರಕ್ಷಣಾತ್ಮಕ ಕಾನೂನು ಇಲ್ಲ, ಪುರುಷರ ಮೇಲೆ ಆಗುವ ದೌರ್ಜನ್ಯಗಳ ನಿಯಂತ್ರಣ ಮಾಡುವವರು?, ದೌರ್ಜನ್ಯಕ್ಕೊಳಗಾದ ಒಬ್ಬಟ್ಟಿ ಪುರುಷರ ರಕ್ಷಣೆ ಹೇಗೆ ನಡೆಯುತ್ತದೆ ಎನ್ನುವು ಪ್ರಶ್ನೆಗಳು ಸಮಾಜದಲ್ಲಿ ಎದ್ದಿವೆ ಎಂದರು.
ಇಂತಹ ದೌರ್ಜನ್ಯ-ದಬ್ಬಾಳಿಕೆ ನಿಲ್ಲಿಸಲು ಪುರುಷರ ಹಿತರಕ್ಷಣಾ ಸಮಿತಿ ಅತ್ಯವಶ್ಯಕವಿದೆ, ರಾಜ್ಯ, ಜಿಲ್ಲೆಯಿಂದ ಆರಂಭಗೊಳ್ಳಲಿದೆ, ಮಂಡ್ಯ ಜಿಲ್ಲೆಯಿಂದಲೇ ರಾಜ್ಯಮಟ್ಟ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ರಚನೆಗೊಳ್ಳಲಿ ಎಂದರು.ಸಭೆಯಲ್ಲಿ ವಿವಿಧ ಸಂಘನೆಗಳ ಮುಖಂಡರಾದ ಎನ್.ವೈ.ಕೆ ನಿವೃತ್ತ ಅಧಿಕಾರಿ ಎಂ.ಎನ್.ನಟರಾಜು, ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು, ಪ್ರೊ.ಜಿ.ಟಿ.ವೀರಪ್ಪ, ಮಾಜಿ ಪೊಲೀಸ್ ಅಧಿಕಾರಿ ಸತೀಶ್, ಹಿರಿಯ ವಕೀಲ ಮಲ್ಲಿಕಾರ್ಜುನಯ್ಯ, ಎಂ.ಗುರುಪ್ರಸಾದ್, ಪತ್ರಕರ್ತ ಎಂ.ಶಿವಕುಮಾರ್, ಬೆಟ್ಟಹಳ್ಳಿ ಮಂಜುನಾಥ್, ಶಂಕುಂತಲಾ, ನಿಚಿತಾಗೌಡ, ಅರಸು ಮತ್ತಿತರರಿದ್ದರು.