ಕಾಡಾನೆ ದಾಳಿಗೆ ಮೃತಪಟ್ಟ ಕಾರ್ಮಿಕನ ಮನೆಗೆ ಅರಣ್ಯ ಸಚಿವರ ಭೇಟಿ

| Published : Mar 04 2025, 12:35 AM IST

ಕಾಡಾನೆ ದಾಳಿಗೆ ಮೃತಪಟ್ಟ ಕಾರ್ಮಿಕನ ಮನೆಗೆ ಅರಣ್ಯ ಸಚಿವರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಅರೇಹಳ್ಳಿ ಹೋಬಳಿ ಗುಜ್ಜನಹಳ್ಳಿ ನಿವಾಸಿ, ಕೂಲಿ ಕಾರ್ಮಿಕ ಅನಿಲ್ ಅರಸು ಕಾಡಾನೆ ದಾಳಿ‌ಯಲ್ಲಿ ಮೃತಪಟ್ಟಿದ್ದ ಹಿನ್ನೆಲೆ ಅರೇಹಳ್ಳಿಯ ಮೃತ ಕಾರ್ಮಿಕನ ಮನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬೇಲೂರು: ಅರೇಹಳ್ಳಿ ಹೋಬಳಿ ಗುಜ್ಜನಹಳ್ಳಿ ನಿವಾಸಿ, ಕೂಲಿ ಕಾರ್ಮಿಕ ಅನಿಲ್ ಅರಸು ಕಾಡಾನೆ ದಾಳಿ‌ಯಲ್ಲಿ ಮೃತಪಟ್ಟಿದ್ದ ಹಿನ್ನೆಲೆ ಅರೇಹಳ್ಳಿಯ ಮೃತ ಕಾರ್ಮಿಕನ ಮನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಅರಣ್ಯ ಸಚಿವರು ಮಾತನಾಡಿ, ಹಲವಾರು ವರ್ಷಗಳಿಂದ ಮಾನವ- ಪ್ರಾಣಿ ಸಂಘರ್ಷ ಮಲೆನಾಡು ಭಾಗದಲ್ಲಿ ನಡೆಯುತ್ತಿದೆ. ನಾನು ಸಚಿವನಾದ ಬಳಿಕ ಹಾಸನಕ್ಕೆ ಕಾಡಾನೆ ಸಮಸ್ಯೆ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಭೇಟಿ ನೀಡಿದ್ದೇನೆ. ತಾಲೂಕಿನಲ್ಲಿ ಕಾಡಾನೆ ದಾಳಿಗೆ ಈ ತಿಂಗಳಲ್ಲಿ 2 ಸಾವು ಉಂಟಾಗಿರುವುದು ನೋವು ತಂದಿದೆ. ಹಾಸನ ಜಿಲ್ಲೆಯಲ್ಲಿ 100 ಕಾಡಾನೆಗಳಿವೆ. ಅವುಗಳಲ್ಲಿ ನಾಲ್ಕು ಪುಂಡಾನೆಗಳಿವೆ ಎಂದು ಅರಣ್ಯ ಇಲಾಖೆ ವರದಿ ನೀಡಿದೆ. ಶೀಘ್ರವೇ ಪುಂಡಾನೆಗಳನ್ನು ಕಾರ್ಯಾಚರಣೆ ಮೂಲಕ ಸೆರೆಹಿಡಿಯಲು ಕ್ರಮ ಕೈಗೊಳ್ಳುತ್ತೇವೆ. ಕಾಡಾನೆಗಳಿಂದ ಶಾಶ್ವತ ಪರಿಹಾರಕ್ಕೆ ಸರ್ಕಾರ ಹತ್ತಾರು ಯೋಜನೆ ರೂಪಿಸಿದೆ. ಕಳೆದ ಸರ್ಕಾರ ಆನೆಗಳ ಹಾವಳಿ ನಿಯಂತ್ರಣಕ್ಕೆ ೧೦ ಕೋಟಿ ವೆಚ್ಚ ಮಾಡಿತ್ತು. ನಮ್ಮ ಸರ್ಕಾರ 34 ಕೋಟಿ ವೆಚ್ಚ ಮಾಡಿ ರೈಲ್ವೆ ಕಂಬಿ ಬ್ಯಾರಿಕೇಡ್ ಅಳವಡಿಸಿದೆ ಎಂದರು.

ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಶಾಸಕರಾದ ಎಚ್.ಕೆ.ಸುರೇಶ್, ಸಿಮೆಂಟ್ ಮಂಜು, ಶಾಸಕ ರಾಜೇಗೌಡ, ಮಾಜಿ ಸಚಿವ ಬಿ.ಶಿವರಾಂ. ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ತೋಫಿಕ್, ಮುಖಂಡರಾದ ಗ್ರಾನೈಟ್ ರಾಜಶೇಖರ ಅರಣ್ಯ ಸಂರಕ್ಷಣಾಧಿಕಾರಿ ಏಳು ಕುಂಡಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತ್, ಅಧಿಕಾರಿಗಳು ಇದ್ದರು.

---------