ಸಾರಾಂಶ
ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಳ್ಳಿ ಗ್ರಾಪಂನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಗಟಹಳ್ಳಿ ಕೆ.ರವಿರಾಜ್ ಅವರನ್ನು ಅಭಿನಂದಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ದೊಡ್ಡಬ್ಯಾಡರಳ್ಳಿ ಗ್ರಾಪಂ ನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಅಗಟಹಳ್ಳಿ ಕೆ.ರವಿರಾಜ್ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.ನಂತರ ಮಾತನಾಡಿದ ಅವರು, ಜೆಡಿಎಸ್ ಬೆಂಬಲಿತ ಅಗಟಹಳ್ಳಿ ಕೆ.ರವಿರಾಜ್ ಅಧ್ಯಕ್ಷರಾಗಿದ್ದು, ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಜತೆಗೂಡಿ ಕೆಲಸ ಮಾಡಬೇಕು. ವ್ಯಾಪ್ತಿ ಹಳ್ಳಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರಾದ ಡಿ.ಎನ್.ರವಿ, ಮನು, ನಿಂಗರಾಜು, ಎಸ್.ಆನಂದ್, ಮುಖಂಡರಾದ ಚಂದನ್, ನಂಜುಂಡಪ್ಪ, ಡಿ.ಎಂ.ನಿಂಗೇಗೌಡ, ಸಂತೋಷ್, ನಿಂಗರಾಜು(ರಂಧ), ಅಗಟಹಳ್ಳಿ ಮನು, ಕುಮಾರ್, ಎ.ಸಿ.ರಾಜೇಶ್, ರಾಕೇಶ್, ಸೇರಿದಂತೆ ಹಲವರು ಹಾಜರಿದ್ದರು.ದೊಂದೆಮಾದಹಳ್ಳಿ: ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ
ದೇವಲಾಪುರ:ನಾಗಮಂಗಲ ಪಟ್ಟಣದಿಂದ ಪ್ರತಿದಿನ ಬೆಳಗ್ಗೆ ದೊಂದೆಮಾದಹಳ್ಳಿಗೆ ನೂತನ ಸಾರಿಗೆ ಬಸ್ ಸಂಚಾರಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಚಾಲನೆ ನೀಡಿದರು.
ಈ ವೇಳೆ ಮಾತಾನಾಡಿದ ರಾಜೇಶ್, ತಾಲೂಕಿನ ಸಣ್ಣ ಗ್ರಾಮಗಳಿಗೂ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಕ್ಷೇತ್ರದ ಶಾಸಕರಾದ, ಸಚಿವ ಎನ್.ಚಲುವರಾಯಸ್ವಾಮಿ ತೀರ್ಮಾನಿಸಿದ್ದು, ಕೃಷಿ ಕ್ಷೇತ್ರದಂತೆ ತಾಲೂಕಿನ ಹಳ್ಳಿಗಳಿಗೂ ಪಟ್ಟಣದಿಂದ ಹೋಗುವ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಗಳಿಗೂ ಬಸ್ ವ್ಯವಸ್ಥೆ ಮಾಡಲಾಗುವುದು. ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.ಈ ವೇಳೆ ಗ್ರಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ ನರಸಿಂಹಮೂರ್ತಿ, ಪಾಂಡು, ಹಾಲತಿ ಗಿರೀಶ್, ಗ್ರಾಮದ ಹಿರಿಯರು ಮುಖಂಡರು ಕಾರ್ಯಕರ್ತರು ಹಾಜರಿದ್ದರು.