ಸಾರಾಂಶ
ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ₹1.38 ಕೋಟಿ ಮೌಲ್ಯದ 4 ಕ್ವಿಂಟಲ್ ಗಾಂಜಾವನ್ನು ಎಸ್ಪಿ ಡಾ.ಬಿ.ಟಿ.ಕವಿತಾ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.
ಚಾಮರಾಜನಗರ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ₹1.38 ಕೋಟಿ ಮೌಲ್ಯದ 4 ಕ್ವಿಂಟಲ್ ಗಾಂಜಾವನ್ನು ಎಸ್ಪಿ ಡಾ.ಬಿ.ಟಿ.ಕವಿತಾ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.
ಮೈಸೂರಿನ ಗುಜ್ಜೇಗೌಡನಪುರದಲ್ಲಿರುವ ಬಯೊಟೆಕ್ ಕುಲುಮೆಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 23 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ₹1,38,16,000 ಮೌಲ್ಯದ 414 ಕೆಜಿ ಗಾಂಜಾವನ್ನು ಕುಲುಮೆಗೆ ಹಾಕಿ ಸುಡಲಾಗಿದೆ. ಜಿಲ್ಲೆಯ ಠಾಣೆಗಳಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಗಳಲ್ಲಿ ಆದೇಶವಾಗಿದ್ದ ಪ್ರಕರಣಗಳ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲು ಜಿಲ್ಲಾ ಮಾದಕವಸ್ತು ವಿಲೇವಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ, ಎಸ್ಪಿ ಸಮ್ಮುಖದಲ್ಲಿ ಬರೋಬ್ಬರಿ 4 ಕ್ವಿಂಟಲ್ ನಷ್ಟು ಗಾಂಜಾವನ್ನು ನಾಶಪಡಿಸಲಾಗಿದೆ.