ಸಾರಾಂಶ
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವ್ಯಕ್ತಿಗೆ ಲಕ್ಷಾಂತರ ರುಪಾಯಿ ವಂಚಿಸಿದ ಘಟನೆ ಕಾರ್ಕಳದಲ್ಲಿ ವರದಿಯಾಗಿದೆ.
ಕಾರ್ಕಳ : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವ್ಯಕ್ತಿಗೆ ಲಕ್ಷಾಂತರ ರುಪಾಯಿ ವಂಚಿಸಿದ ಘಟನೆ ಕಾರ್ಕಳದಲ್ಲಿ ವರದಿಯಾಗಿದೆ.
ಕಸಬಾ ಗ್ರಾಮದ ಕಾರ್ಕಳ ಕೋರ್ಟ್ ರಸ್ತೆಯ ಶಿವಾನಂದ ವಿ. ಪದ್ಮಶಾಲಿ ವಂಚನೆಗೊಳಗಾದವರು.ಡಿ. 13ರಂದು ಅಪರಿಚಿತ ವ್ಯಕ್ತಿ ಶಿವಾನಂದ ಅವರಿಗೆ ಮುಂಬೈ ಕ್ರೈಂ ಬ್ರಾಂಚ್ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಮೇಲೆ ಕೇಸು ದಾಖಲಾಗಿದೆ. ನೀವು 30 ಲಕ್ಷ ರು.
ಹಣವನ್ನು ಬೇರೆ ಬೇರೆ ಅಕೌಂಟ್ನಲ್ಲಿ ಮೋಸ ಮಾಡಿದ್ದೀರಿ, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ನಿಮ್ಮ ಅಕೌಂಟ್ ವೆರಿಫೈ ಮಾಡಬೇಕು ಮತ್ತು ಹಣ ವರ್ಗಾವಣೆ ಮಾಡಬೇಕು ಎಂದು ಹೆದರಿಸಿದ್ದಾನೆ. ಅದರಂತೆ ಶಿವಾನಂದ ಅವರು ಡಿ. 13 ರಂದು 95,000 .ಡಿ.14ರಂದು 99,000 ., ಡಿ. 17 ರಂದು 99,000 ರು. ವರ್ಗಾವಣೆ ಮಾಡಿದ್ದಾರೆ. ಡಿ. 18 ರಂದು ಇದೇ ವಿಚಾರವಾಗಿ ಪವನ್ ಕುಮಾರ್ ಗುಜಾರ್ ಎಂಬವನ ಖಾತೆಗೆ 6 ಲಕ್ಷ ರು. ವರ್ಗಾಯಿಸಿದ್ದಾರೆ. ಹೀಗೆ ವಂಚಕರು ಒಟ್ಟು 8,93,000 ರು. ಹಣವನ್ನು ಆನ್ಲೈನ್ ಮುಖಾಂತರ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.