ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಗೊರಿನಬೆಲೆ ಗ್ರಾಮದ ಸರ್ಕಾರಿ ಜಾಗದಲ್ಲಿ ಗ್ರಾಮದ ಯುವಕರು ನೆಟ್ಟಿರುವ ಸಸಿಗಳು ಒಣಗುತ್ತಿರುವುದನ್ನು ಗಮನಿಸಿದ ಬಿಸಿಬಿ ಕೊಳವೆಬಾವಿ ಮಾಲೀಕ ಹಂಚಿಪುರ ಚಿಕ್ಕೇಗೌಡ ಮಾನವೀಯತೆಯಿಂದ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಟ್ಟು ಪರಿಸರ ಕಾಳಜಿಗೆ ಮಾದರಿಯಾಗಿದ್ದಾರೆ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಗೊರಿನಬೆಲೆ ಗ್ರಾಮದ ಸರ್ಕಾರಿ ಜಾಗದಲ್ಲಿ ಗ್ರಾಮದ ಯುವಕರು ನೆಟ್ಟಿರುವ ಸಸಿಗಳು ಒಣಗುತ್ತಿರುವುದನ್ನು ಗಮನಿಸಿದ ಬಿಸಿಬಿ ಕೊಳವೆಬಾವಿ ಮಾಲೀಕ ಹಂಚಿಪುರ ಚಿಕ್ಕೇಗೌಡ ಮಾನವೀಯತೆಯಿಂದ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಟ್ಟು ಪರಿಸರ ಕಾಳಜಿಗೆ ಮಾದರಿಯಾಗಿದ್ದಾರೆ.

ಗೊರಿನಬೆಲೆ ಗ್ರಾಮದ ಸರ್ಕಾರಿ ಜಾಗದಲ್ಲಿ ಗ್ರಾಮದ ಯುವಕರು ಹಾಗೂ ಪರಿಸರಾಸಕ್ತರು ಇತ್ತೀಚೆಗೆ ವಿವಿಧ ಜಾತಿಯ ಸಸಿಗಳನ್ನು ನೆಟ್ಟಿದ್ದರು. ಸಸಿಗಳನ್ನು ನೆಟ್ಟ ಬಳಿಕ ಅವುಗಳನ್ನು ಸಂರಕ್ಷಿಸಲು ನಿಯಮಿತವಾಗಿ ನೀರುಣಿಸುವ ಅಗತ್ಯವಿದೆ. ಆದರೆ ಗ್ರಾಮದಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಸಸಿಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗದೆ ಹಲವು ಸಸಿಗಳು ನೀರಿನ ಕೊರತೆಯಿಂದ ಒಣಗುವ ಸ್ಥಿತಿಗೆ ತಲುಪಿದ್ದವು.

ಸಸಿಗಳು ಒಣಗುತ್ತಿರುವುದನ್ನು ಕಂಡ ಯುವಕರು, ಸಸಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದ ವಿಚಾರವನ್ನು ಅರಿತ ಬಿಸಿಬಿ ಬೋರ್ ವೆಲ್ ಮಾಲೀಕದ ಹಂಚಿಪುರ ಚಿಕ್ಕೇಗೌಡ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂಬ ಮನೋಭಾವದಿಂದ ಸ್ವಯಂಪ್ರೇರಿತರಾಗಿ ಯಾವುದೇ ಹಣ ಪಡೆಯದೆ ಉಚಿತವಾಗಿ ಬೋರ್ವೆಲ್ ಕೊರೆಸಿಕೊಟ್ಟಿದ್ದಾರೆ.ಪೋಟೋ 1 :

ನೆಲಮಂಗಲ ತಾಲೂಕಿನ ಗೊರಿನಬೆಲೆ ಗ್ರಾಮದ ಸರ್ಕಾರಿ ಜಾಗದಲ್ಲಿ ಸಸಿಗಳ ಸಂರಕ್ಷಣೆಗಾಗಿ ಕೊರೆಯುವ ಕೊಳವೆಬಾವಿಗೆ ಬಿಸಿಬಿ ಕೊಳವೆಬಾವಿ ಮಾಲೀಕ ಹಂಚಿಪುರ ಚಿಕ್ಕೇಗೌಡ ಚಾಲನೆ ನೀಡಿದರು.