ಸಾರಾಂಶ
ಗದಗ: ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ, ಸೇವೆ,ತ್ಯಾಗ, ಶ್ರಮದ ಸಂಕೇತಗಳಾಗಿವೆ ಎಂದು ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರಕಾಶ ಮಾಚೇನಹಳ್ಳಿ ಹೇಳಿದರು.
ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಗಾಂಧೀಜಿ ಹೆಜ್ಜೆಗಳು ವಿಷಯವಾಗಿ ಮಾತನಾಡಿದರು.1915 ರಿಂದ 1936ರ ವರೆಗೆ ಹಲವು ಬಾರಿ ಗಾಂಧೀಜಿ ಅವರು ಕರ್ನಾಟಕಕ್ಕೆ ಬಂದಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಬೆಟ್ಟ, ದೊಡ್ಡಬಳ್ಳಾಪುರ, ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ಕೊಡಗು, ಮಂಗಳೂರು, ಶಿರಸಿ, ಹಾವೇರಿ, ದಾವಣಗೆರೆ, ಹುಬ್ಬಳ್ಳಿ-ಉಡುಪಿ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರನ್ನುದ್ದೇಶಿಸಿ ಅಹಿಂಸಾ ಚಳವಳಿಯಲ್ಲಿ ಧುಮುಕುವಂತೆ ಮಾತನಾಡಿದರು.
ಅಂದಾನಪ್ಪ ದೊಡ್ಡಮೇಟಿ ಸಖ್ಯದಿಂದ ಗದಗ ಜಿಲ್ಲೆಯ ಜಕ್ಕಲಿ ಗ್ರಾಮಕ್ಕೆಗಾಂಧೀಜಿ ಆಗಮಿಸಿದಾಗ 250 ಚಕ್ಕಡಿಗಳಲ್ಲಿ ಆಗಮಿಸಿ ಭಾಷಣ ಮಾಡಿದರು.ದಲಿತರುದ್ಧಾರಕ್ಕಾಗಿ ದೊಡ್ಡಮೇಟಿ ಜಮೀನು ದಾನ ನೀಡಿದರು, 25 ಸಾವಿರ ಜನರು ನೆರೆದಿದ್ದರು ಇಂದಿಗೂ ಜಕ್ಕಲಿ ಗ್ರಾಮ ಗಾಂಧೀಜಿ ಆಗಮನದ ಕಥೆ ಹೇಳುತ್ತದೆ ಎಂದು ವಿವರಿಸಿದರು.ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಗಾಂಧಿ ಎಂದರೆ ಕೇವಲ ಹೋರಾಟಗಾರರಲ್ಲ ಅವರಿಗೆ ಅನೇಕ ಮಗ್ಗಲುಗಳಿವೆ, ಅವೆಲ್ಲವುಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ.ಅದ್ಭುತ ಶಿಕ್ಷಣ ತಜ್ಞರಾಗಿದ್ದರು. ನಯೀ ತಾಲಿಮ್ ಎನ್ನುವ ಕರ-ಶಿರ-ಉರ ಗಳಿಗೆ ಪ್ರಾಧಾನ್ಯತೆ ದೊರೆಯುವ ಶಿಕ್ಷಣ ನೀಡಿದರು.ಏನನ್ನು ನೋಡಿದರು ಏನನ್ನು ಓದಿದರು ಅದರಂತೆ ಬದುಕಿದರು. ತಮ್ಮನ್ನು ತಾವು ದಂಡಿಸುವುದ ಮೂಲಕ ದಂಡನೆಯ ವ್ಯಾಖ್ಯಾನ ಬದಲಾಯಿಸಿದರು. ಹೀಗಾಗಿ ಗಾಂಧೀಜಿ ಕೇವಲ ಒಂದು ವ್ಯಕ್ತಿಯಾಗಿ ಕಾಣದೇ ದೇವಮಾನವನಾಗಿ ಗೋಚರಿಸುತ್ತಾರೆ.ಇದೇ ವರ್ಷ ಡಿ.26 ಕ್ಕೆ ಗಾಂಧೀಜಿ ಬೆಳಗಾವಿ ಅಧಿವೇಶನಕ್ಕೆ ಬಂದು ಒಂದು ನೂರು ವರ್ಷಗಳಾಗುತ್ತವೆ. ಶತಮಾನೋತ್ಸವ ಅರ್ಥಪೂರ್ಣವಾಗಿ ಆಚರಿಸುವ ದಿಸೆಯಲ್ಲಿ ಗದಗ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಆಯೋಜಿಸಲಾಗುವುದೆಂದು ತಿಳಿಸಿದರು.
ಈ ವೇಳೆ ಪದ್ಮಾ ಕಬಾಡಿ, ಪ್ರೊ. ಚಂದ್ರಶೇಖರ ವಸ್ತ್ರದ, ಡಾ. ಬಿ.ಬಿ.ಹೊಳಗುಂದಿ, ಚನ್ನಬಸವರಾಜ ಹಿರೇಮಠ, ಮಲ್ಲಿಕಾರ್ಜುನ ನಿಂಗೋಜಿ, ಗಂಗಜ್ಜ ಮುದಗಲ್ಲ, ರಾಜಶೇಖರ ಪಾಟೀಲ, ದೇವೇಂದ್ರ ನಾಯಕ, ಎಸ್.ಎಸ್. ಕಳಸಾಪುರಶೆಟ್ರು, ಬಸವರಾಜ ಗಣಪ್ಪನವರ, ಕೆ.ಎಸ್.ಗುಗ್ಗರಿ, ಜೆ.ಎ. ಪಾಟೀಲ, ಬಿ.ಬಿ. ಪಾಟೀಲ, ಎಂ.ಎಫ್. ಡೋಣಿ, ಪ್ರ.ತೋ ನಾರಾಯಣಪುರ, ಅಶೋಕ ಸತ್ಯರಡ್ಡಿ ಸೇರಿದಂತೆ ಇತರರು ಇದ್ದರು.ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು.