ಸೂಲಿಬೆಲೆ: ಸರ್ಕಾರ ಜಾರಿಗೊಳಿಸಿರುವ ಗಂಗಕಲ್ಯಾಣ ಯೋಜನೆ ಬಡ ರೈತರಿಗೆ ಅನುಕೂಲವಾಗಲಿದೆ ಎಂದು ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು. ಹೋಬಳಿಯ ಭೀಮಕನಹಳ್ಳಿ ರಾಧಮ್ಮ ಅವರ ಭೂಮಿಯಲ್ಲಿ ಗಂಗಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರಸಿದ್ದು, ಇದರಿಂದ ಅವರ ಜೀವನ ಸುಧಾರಣೆ ಕಾಣಲಿದೆ ಎಂದರು. ಶಾಸಕ ಶರತ್ ಬಚ್ಚೇಗೌಡರ ಶಿಪಾರಸ್ಸಿನ ಮೇರೆಗೆ ಯೋಜನೆ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗೆ ಯೋಜನೆ ತಲುಪಿಸಲಾಗಿದೆ ಎಂದರು. ಯುವ ಮುಖಂಡ ವಿಜಯಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ರಾಮೇಗೌಡ, ಮಧು, ನಾಗೇಶ್, ರಾಮಯ್ಯ, ಸುಬ್ರಮಣಿ, ರಾಧಮ್ಮ ಇತರರಿದ್ದರು.