ಲಿಂಗ ಸಮಾನತೆಗೆ ಪುರುಷರ ಮನಸ್ಥಿತಿ ಬದಲಾವಣೆ ಅಗತ್ಯ

| Published : Mar 10 2025, 01:32 AM IST

ಸಾರಾಂಶ

ಲಿಂಗ ಸಮಾನತೆಗೆ ಆದ್ಯತೆ ಸಿಗಬೇಕಾದರೆ ಪುರುಷರ ಮನಸ್ಥಿತಿ ಹಾಗೂ ಮಹಿಳೆಯರ ಬಗೆಗಿನ ದೃಷ್ಟಿಕೋನ ಬದಲಾಗಬೇಕು ಎಂದು ಸಿನಾಪ್ಸಿಸ್‌ ಸಂಸ್ಥೆಯ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಮಂಜುಳಾ ಡಿ. ಕಡೆತೋಟರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲಿಂಗ ಸಮಾನತೆಗೆ ಆದ್ಯತೆ ಸಿಗಬೇಕಾದರೆ ಪುರುಷರ ಮನಸ್ಥಿತಿ ಹಾಗೂ ಮಹಿಳೆಯರ ಬಗೆಗಿನ ದೃಷ್ಟಿಕೋನ ಬದಲಾಗಬೇಕು ಎಂದು ಸಿನಾಪ್ಸಿಸ್‌ ಸಂಸ್ಥೆಯ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಮಂಜುಳಾ ಡಿ. ಕಡೆತೋಟರ್ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬೆಂಗಳೂರು ಶಾಖೆಯ ದಿ ಇನ್ಸಿಟ್ಯೂಶನ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಶನ್ ಎಂಜಿನಿಯರ್ಸ್ (ಐಇಟಿಇ) ಸಂಸ್ಥೆ ಸಹಯೋಗದಲ್ಲಿ ನಡೆದ ‘ಅಂತಾರಾಷ್ಟ್ರೀಯ ಮಹಿಳಾ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಚೇರಿ ಹಾಗೂ ಮನೆಯ ನಿರ್ವಹಣೆ ಜವಾಬ್ದಾರಿ ಇರುವುದರಿಂದ ಮಹಿಳೆ ಹತ್ತಾರು ಸವಾಲನ್ನು ಏಕಕಾಲಕ್ಕೆ ನಿಭಾಯಿಸುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಐಇಟಿಇ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ಡಾ. ಸಿ.ವಿ. ರವಿಶಂಕರ್, ಮಹಿಳೆಯರು ಸಾಮಾಜಿಕ ಕಂಟಕಗಳಿಗೆ ಬಲಿಯಾಗುವುದು ತಪ್ಪಬೇಕಾದರೆ ತಾರತಮ್ಯ ನಿವಾರಣೆಗೆ ಎಲ್ಲರೂ ಪ್ರತಿಜ್ಞೆ ಮಾಡಬೇಕಿದೆ ಎಂದರು.

ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಪ್ರಾಚಾರ್ಯ ಡಾ. ಎಚ್.ಸಿ. ನಾಗರಾಜ್, ವಿದ್ಯಾರ್ಥಿ ಸಮಾಲೋಚನಾ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಶಾಸ್ತ್ರಿ ಸೇರಿ ಇತರರಿದ್ದರು.