ಸರ್ಕಾರದ ಯೋಜನೆ ಸದುಪಡಿಸಿಕೊಳ್ಳಿ

| Published : Jun 18 2025, 11:48 PM IST

ಸಾರಾಂಶ

ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಹಲವು ಪ್ರೋತ್ಸಾಹದಾಯಕ ಕಾರ್ಯಕ್ರಮ ಕೊಟ್ಟಿದ್ದು, ಮಕ್ಕಳು ಕಲಿಕೆ ಮೊಟಕುಗೊಳಿಸದೆ ಮುಂದುವರಿಸಬೇಕು. ಸರ್ಕಾರಿ ಶಾಲೆಯಲ್ಲಿ ದಾಖಲೆ ಪಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.

ಯಲಬುರ್ಗಾ:

ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಎತ್ತರಿಸಲು ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದ್ದು ಸದುಪಯೋಗಪಡೆದುಕೊಳ್ಳಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಹವಳದ ಹೇಳಿದರು.

ತಾಲೂಕಿನ ಮುಧೋಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಹಲವು ಪ್ರೋತ್ಸಾಹದಾಯಕ ಕಾರ್ಯಕ್ರಮ ಕೊಟ್ಟಿದ್ದು, ಮಕ್ಕಳು ಕಲಿಕೆ ಮೊಟಕುಗೊಳಿಸದೆ ಮುಂದುವರಿಸಬೇಕು. ಸರ್ಕಾರಿ ಶಾಲೆಯಲ್ಲಿ ದಾಖಲೆ ಪಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಶಿಕ್ಷಕ ಶ್ರೀಕಾಂತ ಮಾಸಗಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಶೂ-ಸಾಕ್ಸ್ ವಿತರಿಸಲಾಗುತ್ತಿದೆ. ಶಿಕ್ಷಣ ಪಡೆಯುವ ಮೂಲಕ ಹೆತ್ತವರಿಗೆ ಹೆಸರು ತರಬೇಕೆಂದು ಸಲಹೆ ನೀಡಿದರು.

ಈ ವೇಳೆ ಸಿಆರ್‌ಪಿ ಶಾಂತಪ್ಪ ಜುಮ್ಮಣ್ಣವರ, ಶಿಕ್ಷಕರಾದ ಮಾಲತೇಶ ಮುಗನೂರ, ನಿಜಲಿಂಗಪ್ಪ ಕರಡಿ, ಕೌಶಲ್ಯ, ದ್ಯಾಮಣ್ಣ, ಪ್ರಮುಖರಾದ ತಿಮ್ಮಣ್ಣ ವಡ್ಡರ, ವಿಶ್ವಾನಾಥ ಶಿರೂರಮಠ, ಮಲ್ಲಿಕಾರ್ಜುನ ಅಡಗುಡಿ, ಸುರೇಶ ಹುನಗುಂದ, ರಸೂಲ್‌ಸಾಬ್ ಸೇರಿದಂತೆ ಇತರರಿದ್ದರು.