ಯುವ ಸಮೂಹಕ್ಕೆ ದೇಶದ ಆರ್ಥಿಕ ಸ್ವರೂಪದ‌ ಜ್ಞಾನ ನೀಡಿ: ಡಾ.ಆರ್.ವೈದ್ಯನಾಥನ್

| Published : May 22 2024, 12:47 AM IST

ಯುವ ಸಮೂಹಕ್ಕೆ ದೇಶದ ಆರ್ಥಿಕ ಸ್ವರೂಪದ‌ ಜ್ಞಾನ ನೀಡಿ: ಡಾ.ಆರ್.ವೈದ್ಯನಾಥನ್
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ಪ್ರಮುಖ ಆರ್ಥಿಕತೆಯ ಪಾಲನ್ನು ಭಾರತ ಮತ್ತು ಚೀನಾ ಹಂಚಿಕೊಂಡಿದೆ. ಇಂತಹ ಬೃಹತ್ ಬೆಳವಣಿಗೆಗೆ ಭಾರತದ ಅದ್ಭುತ ಆರ್ಥಿಕ ಸ್ವರೂಪ ಕಾರಣವಾಗಿದೆ. ಯುವ ಸಮೂಹಕ್ಕೆ ದೇಶದ ಆರ್ಥಿಕ ಸ್ವರೂಪದ‌ ಕುರಿತು ಜ್ಞಾನ ನೀಡಬೇಕಿದೆ. ಪ್ರತಿಯೊಬ್ಬ ಭಾರತೀಯ ಮಹಿಳೆಯರು ಶ್ರೇಷ್ಠ ಅರ್ಥಶಾಸ್ತ್ರಜ್ಞರು. ಉಳಿತಾಯ ಮತ್ತು ಹೂಡಿಕೆಯ ಕುರಿತಾಗಿ ಅವರಲ್ಲಿರುವ ಜ್ಞಾನವು ಗೃಹಿಣಿಯರ ಶ್ರೇಷ್ಠತೆಯ ಸಾಲಿಗೆ ಸೇರಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೇಶದ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ವಿದ್ಯಾಸಂಸ್ಥೆಗಳು ನೀಡಬೇಕಿದೆ ಎಂದು ಬೆಂಗಳೂರು ಐಐಎಂ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ವೈದ್ಯನಾಥನ್ ಹೇಳಿದರು.

ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಸಂಘದ ಬೆಂಗಳೂರಿನ ಸಮಿತಿಯ ಸಹಯೋಗದಲ್ಲಿ ಬೆಂಗಳೂರಿನ ‌ಆರ್.ವಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ''''''''ನೆನಪಿನ ಅಂಗಳ - 2024'''''''' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶ್ವದ ಪ್ರಮುಖ ಆರ್ಥಿಕತೆಯ ಪಾಲನ್ನು ಭಾರತ ಮತ್ತು ಚೀನಾ ಹಂಚಿಕೊಂಡಿದೆ. ಇಂತಹ ಬೃಹತ್ ಬೆಳವಣಿಗೆಗೆ ಭಾರತದ ಅದ್ಭುತ ಆರ್ಥಿಕ ಸ್ವರೂಪ ಕಾರಣವಾಗಿದೆ. ಯುವ ಸಮೂಹಕ್ಕೆ ದೇಶದ ಆರ್ಥಿಕ ಸ್ವರೂಪದ‌ ಕುರಿತು ಜ್ಞಾನ ನೀಡಬೇಕಿದೆ. ಪ್ರತಿಯೊಬ್ಬ ಭಾರತೀಯ ಮಹಿಳೆಯರು ಶ್ರೇಷ್ಠ ಅರ್ಥಶಾಸ್ತ್ರಜ್ಞರು. ಉಳಿತಾಯ ಮತ್ತು ಹೂಡಿಕೆಯ ಕುರಿತಾಗಿ ಅವರಲ್ಲಿರುವ ಜ್ಞಾನವು ಗೃಹಿಣಿಯರ ಶ್ರೇಷ್ಠತೆಯ ಸಾಲಿಗೆ ಸೇರಿಸಿದೆ ಎಂದರು.

ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಸಿಸ್ಕೊ ಕಂಪನಿ ಗ್ರಾಹಕ‌ ವಿಭಾಗದ ಉಪಾಧ್ಯಕ್ಷೆ ಪಲ್ಲವಿ ಅರೋರ ಮಾತನಾಡಿ, ಕಾಲೇಜಿನ ಸಾಧನೆ ಮತ್ತು ಹೊರಹೊಮ್ಮುವಿಕೆ ರೀತಿ ಕಂಡು ಸಂತೋಷವಾಗುತ್ತಿದೆ. ಶಿಕ್ಷಣದ ಜೊತೆಗೆ ಕೃತಜ್ಞತಾ ಮನೋಭಾವ ನಮ್ಮ ಕಾಲೇಜು ಕಲಿಸಿಕೊಟ್ಟಿದೆ ಎಂದರು.

ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿಂಗಾಪುರ್ ಕ್ಸೆರೋಲಾಜಿಕಲ್ ಇಂಟರ್‌ನ್ಯಾಷನಲ್ ಕಂಪನಿ ಸ್ಥಾಪಕ ಶ್ರೀರಾಮ ಸುಬ್ಬರಾವ್, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು‌. ಈ ವೇಳೆ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ''''''''ನೆನಪಿನ ಅಂಕಣ'''''''' ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಕೆ.ಎಂ.ಬಸಪ್ಪಾಜಿ, ಕಾರ್ಯದರ್ಶಿ ಡಾ.ಎಸ್.ವಿ.ಸತ್ಯನಾರಾಯಣ, ಸಹ ಕಾರ್ಯದರ್ಶಿ ಸರ್ಜಾ ಸತ್ಯೋದಯ, ಎಂ.ಡಿ.ಸುನಿಲ್, ಬೆಂಗಳೂರು ಸಮಿತಿ ಅಧ್ಯಕ್ಷ ಡಾ.ಜಿ.ಆರ್.ಮಂಜುನಾಥ, ಸದಸ್ಯರಾದ ಅನಂತಪ್ರಸಾದ್ ಸೇರಿ ಮತ್ತಿತರರಿದ್ದರು.