ಸಾರಾಂಶ
ಗಂಗಾವತಿಯಿಂದ -ದರೋಜಿ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರಕ್ಕೆ ಅನುದಾನ ನೀಡುವಂತೆ ಒತ್ತಾಯ ಮಾಡಬೇಕು ಎಂದು ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಅವರಿಗೆ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಮತ್ತು ವಕೀಲರ ಸಂಘದ ಪದಾದಿಕಾರಿಗಳು ಮನವಿ ಸಲ್ಲಿಸಿದರು.
ಗಂಗಾವತಿ:
ಗಂಗಾವತಿಯಿಂದ -ದರೋಜಿ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರಕ್ಕೆ ಅನುದಾನ ನೀಡುವಂತೆ ಒತ್ತಾಯ ಮಾಡಬೇಕು ಎಂದು ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಅವರಿಗೆ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಮತ್ತು ವಕೀಲರ ಸಂಘದ ಪದಾದಿಕಾರಿಗಳು ಮನವಿ ಸಲ್ಲಿಸಿದರು.ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಕೊಪ್ಪಳ ಲೋಕಸಭಾ ಸದಸ್ಯರ ಅನುದಾನದ ಅಡಿಯಲ್ಲಿ ಹೈಮಾಸ್ಟ್ ದೀಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಬಸಾಪುರ ಎಂಎಸ್ಪಿಎಲ್ ಏರೋ ಡ್ರಮ್ನಲ್ಲಿ ಉಡಾನ್ ಯೋಜನೆ ಆರಂಭಿಸಲು, ಗಿಣಿಗೇರಾ -ಗಂಗಾವತಿ -ಸಿಂಧನೂರು -ರಾಯಚೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ, ಚತುಷ್ಪಥ ನಿರ್ಮಾಣ, ಬೂದುಗುಂಪಾ -ಗಂಗಾವತಿ -ಕಂಪ್ಲಿ -ಕುಡತಿನಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ, ಹುಬ್ಬಳ್ಳಿ ತನಕ ಇರುವ ಗೋವಾ- ಮುಂಬೈ -ತಿರುಪತಿ -ಹೈದರಾಬಾದ್ ರೈಲು ಸಿಂಧನೂರು ವರೆಗೆ ವಿಸ್ತರಿಸಲು ಮತ್ತು ಕಾರಟಗಿ ತಾಲೂಕಿನ ನಂದಹಳ್ಳಿ ಮತ್ತು ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೊಟ್ಟೂರು ಮಹಾಸ್ವಾಮಿಗಳು, ಉಪಾಧ್ಯಕ್ಷ ಕೆ. ಚನ್ನಬಸಯ್ಯ, ಕಾರ್ಯದರ್ಶಿ ಶರಣೇಗೌಡ ಮಾಲಿಪಾಟೀಲ್, ಸಹಕಾರ್ಯದರ್ಶಿ ಎಚ್.ಎಂ. ಮಂಜುನಾಥ, ಖಜಾಂಚಿ ಸುರೇಶ ಸಿಂಗನಾಳ, ನಗರಸಭೆ ಸದಸ್ಯರಾದ ಮನೋಹರ ಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಕೆ. ವೆಂಕಟೇಶ, ನಗರ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ, ಕಾಂಗ್ರೆಸ್ ಮುಖಂಡರಾದ ಶೇಖ್ ಇಲಿಯಾಸ್ ಇದ್ದರು.