ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ ಮತ್ತು ಜಿಎಸ್ಎಸ್ ಯೋಗಿಕ್ ರಿಸರ್ಚ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗ್ರೀನ್ ಮೈಸೂರು ಪೈಲಟ್ ಯೋಜನೆಯ ಅಡಿಯಲ್ಲಿ ಹಸಿರು ಪ್ರಾಂಗಣ ಅಭಿಯಾನ ಆರಂಭವಾಯಿತು.ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಗಿಡ ನೆಡಲು ಕುಳಿ ತೆಗೆಯುವ ಕೆಲಸದಲ್ಲಿ ತೊಡಗಿದರು. ವಿಭಾಗದ ಸುತ್ತಲೂ ಕುಳಿಗಳನ್ನು ತೆಗೆಯಲಾಯಿತು. ಸ್ಥಳಾವಕಾಶದ ಕೊರತೆಯಿಂದ ಜಯಲಕ್ಷ್ಮಿ ವಿಲಾಸ ಅರಮನೆ ಬಳಿ ಇತ್ತೀಚೆಗೆ ತೆಗೆಯಲಾಗಿದ್ದ ಕುಳಿಗಳನ್ನು ಸಹ ಬಳಸಲಾಯಿತು. ವೃಕ್ಷಗಳ ನೆರಳಿನಲ್ಲಿ, ಮುಕ್ತ ಆವರಣದಲ್ಲಿ ನಡೆದ ಈ ಕಾರ್ಯಕ್ರಮವು ದಿನದ ಪವಿತ್ರತೆಯನ್ನು ಪ್ರತಿಬಿಂಬಿಸಿತು.
ಆರಂಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಮರ್ಪಿತವಾದ ಗೀತೆಯೊಂದನ್ನು ಹಾಡಲಾಯಿತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಸಿರನ್ನು ಸ್ಥಾಪಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರ ನೆನಪನ್ನು ಕಾರ್ಯಕ್ರಮ ಸ್ಮರಿಸಿತು.ಐಜಿಬಿಸಿ ಅಧ್ಯಕ್ಷ ಮತ್ತು ವೀನಸ್ ಗ್ಯಾಸ್ ಪ್ರಾಡಕ್ಟ್ಸ್ಸರ್ವೀಸಸ್ನ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಮರೋಳಿ ಮಾತನಾಡಿ, ಹಸಿರು ತಂತ್ರಜ್ಞಾನಗಳ ಪಾತ್ರ ಹಾಗೂ ಐಜಿಬಿಸಿ ಸಂಸ್ಥೆಯು ಹಸಿರು ಅಭಿವೃದ್ಧಿಗೆ ನೀಡುತ್ತಿರುವ ಬದ್ಧತೆಯ ಕುರಿತು ಮಾತನಾಡಿ, ಹಸಿರು ಪ್ರದೇಶಗಳನ್ನು ನಿರ್ಮಿಸುವುದು ಆಯ್ಕೆಯ ವಿಷಯವಲ್ಲ, ಭವಿಷ್ಯಕ್ಕಾಗಿ ಹೊಣೆಗಾರಿಕೆಯಾಗಿದೆ ಎಂದರು.
ಕ್ರೆಡೈ ಉಪಾಧ್ಯಕ್ಷ ಅರುಣ್ ಪಂಡಿತ್ ಮಾತನಾಡಿ, ಮೈಸೂರು ನಗರದ ಪರಿಸರ ಬದಲಾವಣೆಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಈ ನಗರವು ಒಮ್ಮೆ ಹಸಿರು ಗಿಡಗಳಿಂದ ಕಂಗೊಳಿಸುತ್ತಿತ್ತು, ಆದರೆ ನಗರ ವಿಸ್ತಾರದಿಂದಾಗಿ ಅದು ನಾಶವಾಗುತ್ತಿದೆ. ಅಭಿವೃದ್ಧಿ ಮತ್ತು ಪ್ರಕೃತಿಯ ನಡುವಿನ ಸಮತೋಲನವನ್ನು ಉಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಐಜಿಬಿಸಿ ಸಹಾಧ್ಯಕ್ಷ, ಜಿಎಸ್ಎಸ್ಗ್ರೂಪ್ಅಧ್ಯಕ್ಷ ಡಿ. ಶ್ರೀಹರಿ ಮಾತನಾಡಿ, ಮಾನಸಗಂಗೋತ್ರಿ ಈಗಾಗಲೇ ಹಸಿರು ಪ್ರಾಂಗಣವಿದ್ದರೂ, ಅದು ಇನ್ನಷ್ಟು ಹಸಿರಾಗಬಹುದು ಎಂದು ಅಭಿಪ್ರಾಯಪಟ್ಟರು.
ಕ್ಯಾಂಪಸ್ ಒಳಗಿನ ಮತ್ತು ಹೊರಗಿನ ತಾಪಮಾನ ಹಾಗೂ ಆಮ್ಲಜನಕದ ವ್ಯತ್ಯಾಸದ ಮೂಲಕ ಅವರು ಹಸಿರಿನ ಅವಶ್ಯಕತೆ ತಿಳಿಸಿದರು.ಸೌರಮಾನ ಶ್ರೀಲಕ್ಷ್ಮೀನರಸಿಂಹ ಜಯಂತಿ ಹಾಗೂ ಸ್ವಾತಿ ಪೂಜೆ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಶಾಖಾ ಮಠ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸೌರಮಾನ ಶ್ರೀ ಲಕ್ಷ್ಮೀನರಸಿಂಹ ಜಯಂತಿ ಹಾಗೂ ವಿಶೇಷ ಸ್ವಾತಿ ಪೂಜೆ ಆಯೋಜಿಸಿತ್ತು.
ಈ ಪೂಜಾ ಕೈಂಕರ್ಯದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಭಾಗವಹಿಸಿ, ದೇವರ ಆಶೀರ್ವಾದ ಪಡೆದರು. ಬೆಳಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥ ಪ್ರಸಾದವನ್ನು ಬಂದ ಭಕ್ತಾದಿಗಳಿಗೆ ವಿತರಿಸಲಾಯಿತು.ಸಂಜೆ ತೀರುವೀದಿ ಉತ್ಸವದಲ್ಲಿ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು. ದೇವಸ್ಥಾನದ ಸಿಇಒ ಕೆ.ಆರ್. 0ಯೋಗಾನರಸಿಂಹನ್, ಪುರೋಹಿತ ವೀರರಾಘವನ್, ತಾತಾಚಾರ್, ರಾಘವ, ವಿಶ್ವನಾಥ್, ಬಾಲಾಜಿ, ಶಂಕರ ಇದ್ದರು.