ಕಿರಾಣಿ ಅಂಗಡಿಗೆ ಬೆಂಕಿ: ಅಪಾರ ಹಾನಿ

| Published : Jan 14 2025, 01:01 AM IST

ಸಾರಾಂಶ

Grocery store fire: extensive damage

ಬಸವಕಲ್ಯಾಣ: ನಗರದ ಸಪ್ತಾಪೂರ ಬಂಗ್ಲಾ ಮಹಾದ್ವಾರ ಹತ್ತಿರ ಭಾನುವಾರ ಬೆಳಗಿನ ಜಾವ 3 ಗಂಟೆಗೆ ವಿದ್ಯುತ ಶಾರ್ಟ್ ಸರ್ಕ್ಯೂಟ್‌ ನಿಂದ ಕಿರಾಣಿ ಅಂಗಡಿ ಸುಟ್ಟು ಭಸ್ಮವಾಗಿದ್ದು, ಅಪಾರ ಪ್ರಮಾಣ ಹಾನಿಯಾಗಿದೆ ಎಂದು ಕಿರಾಣಿ ಅಂಗಡಿ ಮಾಲಿಕ ಮಹೇಶರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಎಸ್‌ಐ ಬಿಳಿಯಾನೆ ಸಿದ್ದ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ಮಿ ಶಾಮಕದಳದವರು ಬರುವಷ್ಟರಲ್ಲಿ ಅಂಗಡಿ ಸಂಪೂರ್ಣ ಭಸ್ಮವಾಗಿದೆ ಎಂದು ತಿಳಿದು ಬಂದಿದೆ.

---