ಗುರುಗಳ ಅನುಭಾವ ಅಮೃತವೇ ಎಲ್ಲಕ್ಕಿಂತ ಮಿಗಿಲು: ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ

| Published : Jul 30 2024, 12:31 AM IST

ಗುರುಗಳ ಅನುಭಾವ ಅಮೃತವೇ ಎಲ್ಲಕ್ಕಿಂತ ಮಿಗಿಲು: ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಭಕ್ತರನ್ನು ಬಿಟ್ಟು ಸ್ವಾಮಿಗಳಿಲ್ಲ, ಸ್ವಾಮಿಗಳನ್ನು ಬಿಟ್ಟು ಭಕ್ತರಿಲ್ಲ ಇಬ್ಬರೂ ಕೂಡಿದಾಗ ಮಾತ್ರ ಬಸವ ಮಂದಿರದ ಮಹಾ ಮಠ ಬೆಳಗಲು ಸಾಧ್ಯ ಎಂದು ಅಥಣಿ ಶ್ರೀ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ನುಡಿದರು.

ಶ್ರೀ ಬಸವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಪೀಠಾರೋಹಣ ವರ್ಷಾಚರಣೆ । ಮಹಾತ್ಮ ರಚರಿತಾಮೃತ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಕ್ತರನ್ನು ಬಿಟ್ಟು ಸ್ವಾಮಿಗಳಿಲ್ಲ, ಸ್ವಾಮಿಗಳನ್ನು ಬಿಟ್ಟು ಭಕ್ತರಿಲ್ಲ ಇಬ್ಬರೂ ಕೂಡಿದಾಗ ಮಾತ್ರ ಬಸವ ಮಂದಿರದ ಮಹಾ ಮಠ ಬೆಳಗಲು ಸಾಧ್ಯ ಎಂದು ಅಥಣಿ ಶ್ರೀ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ನುಡಿದರು.ಕಲ್ಯಾಣ ನಗರ ಶ್ರೀ ಬಸವ ತತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಅವರ ಪೀಠಾರೋಹಣದ 4 ನೇ ವರ್ಷಾ ಚರಣೆ, ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮ ರಚರಿತಾಮೃತ 8ನೇ ಮುದ್ರಣದ ಸಮಾಜಾರ್ಪಣೆ ಕಾರ್ಯ ಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಸಿಕ್ಕಿದ್ದೆಲ್ಲವನ್ನೂ ಬೇಕು, ಬೇಕು ಎನ್ನುವ ಬದಲು ಬಸವ ಪೀಠದ ಗುರುಗಳ ಅನುಭಾವ ಅಮೃತವೇ ಎಲ್ಲಕಿಂತ ಮಿಗಿಲು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕಾಶಿ ಗಂಗೆಗಿಂತಲೂ ನಮ್ಮ ಮನೆಯ ನಲ್ಲಿಯಲ್ಲಿ ಹರಿಯುವ ನೀರು ಸಹ ಶ್ರೇಷ್ಠ ಎನ್ನುವುದನ್ನು ಅರಿಯಬೇಕು ಎಂದರು.ಈ ನೆಲದ ಪವಿತ್ರ ಗುಣವನ್ನು ಬಸವಾದಿ ಶಿವಶರಣರು ಎತ್ತಿ ಹಿಡಿದರು. ಬಸವಣ್ಣ ಯಾವುದೋ ಒಂದು ರಾಜ್ಯಕ್ಕೆ ಮಂತ್ರಿಯಾಗಿದ್ದಕ್ಕೆ ಸಾಂಸ್ಕೃತಿಕ ನಾಯಕರಲ್ಲ. ಬಿದ್ದವರ ಜೊತೆ, ನೊಂದವರು, ನಿರಾಶ್ರಿತರ ಜೊತೆ ತನ್ನನ್ನು ತಾನು ಗುರುತಿಸಿ ಕೊಂಡು ಎಲ್ಲರೂ ನಮ್ಮವರು ಎಂದು ತಬ್ಬಿಕೊಂಡರು ಅದಕ್ಕಾಗಿ ಸಾಂಸ್ಕೃತಿಕ ನಾಯಕರಾದರು ಎಂದು ಹೇಳಿದರು.ಶ್ರೀಮಠದ ಭಕ್ತರಿಂದ ಗುರುವಂದನೆ ಸ್ವೀಕರಿಸಿದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಬಸವತತ್ತ್ವ ಪೀಠದ ಪೀಠಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು ಇಂದಿಗೆ 4 ವರ್ಷಗಳು ತುಂಬಿದವು. ಶ್ರೀ ಮ. ನಿ. ಪ್ರ. ಜಯ ಚಂದ್ರಶೇಖರ ಸ್ವಾಮಿ ಸ್ಥಾಪಿಸಿದ ಈ ಪೀಠ ಶ್ರೀ ಬಸವತತ್ತ್ವ ಪೀಠದ ಹೆಸರಿನ ನಾಡಿನ ಏಕೈಕ ಪೀಠ ಎಂದರು.ಭಕ್ತರೊಂದಿಗೆ ಸೇರಿ ನಾವು ಶ್ರೀ ಪೀಠದ ಮೂಲಕ ಮಾಡಿದ ಹಲವು ಕಾರ್ಯಗಳು ಕಣ್ಮುಂದೆ ಬರುತ್ತವೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಒಂದೇ ದಿನ ಸಾವಿರ ಜನರಿಗೆ ಸರ್ಕಾರದ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕೆ ಹಾಕಿಸಿದ್ದು, ಸಾವಿರಾರು ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದು ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಜನಪರ ಕಾಳಜಿ ಕಾರ್ಯಗಳು ನಮಗೆ ಅತ್ಯಂತ ಸಂತೃಪ್ತಿ ನೀಡಿವೆ ಎಂದು ಹೇಳಿದರು.ಭಕ್ತರೆಡೆಗೆ ಗುರುವಿನ ನಡಿಗೆ ಕಾರ್ಯಕ್ರಮವಂತೂ ಶ್ರೀ ಮಠದಿಂದ ನಡೆದ ಧಾರ್ಮಿಕ ಮತ್ತು ಸಾಮಾಜಿಕ ನೆಲೆ ಮಹತ್ವದ ಕಾರ್ಯಕ್ರಮವಾಗಿತ್ತು. ಒಂದು ಜನಾಂದೋಲನದ ರೀತಿ ನಡೆದ ಈ ಕಾರ್ಯಕ್ರಮ ನಮ್ಮೊಂದಿಗೆ ಒಂದು ತಿಂಗಳ ಕಾಲ ಹೆಜ್ಜೆ ಹಾಕಿದ ಪ್ರತಿಯೊಬ್ಬರ ಬದುಕಿನಲ್ಲೂ ಗಣನೀಯ ಬದಲಾವಣೆ ಮಾಡಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದರು.

ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಭೃಂಗೀಶ್ವರ ಮಠದ ಶ್ರೀ ಬಸವ ಭೃಂಗೇಶ್ವರ ಸ್ವಾಮಿ, ಜವಳಿ, ಕಬ್ಬುಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ.ವಿರೂಪಾಕ್ಷ, ಶಿಕಾರಿಪುರದ ಉದ್ಯಮಿ ಎನ್.ವಿ.ಈರೇಶ್, ಸಾಹಿತಿ ಚಟ್ನಳ್ಳಿ ಮಹೇಶ್, ಶ್ರೀಮಠದ ಟ್ರಸ್ಟಿ ಖಜಾಂಚಿ ಸದಾಶಿವಪ್ಪ, ಜಗದೀಶ್ ಬಾಬು, ಇಂಡಿಕಾ ಅರುಣ್, ಉಪ್ಪಳ್ಳಿ ಲೋಕೇಶ್, ಉಮೇಶ್, ರಾಜು, ಮಧು, ಶಶಿಧರ್, ರಾಜೇಶ, ಚಂದ್ರಣ್ಣ ಮತ್ತು ಶ್ರೀಮಠದ ಭಕ್ತರು ಇದ್ದರು.

28 ಕೆಸಿಕೆಎಂ 6ಚಿಕ್ಕಮಗಳೂರಿನ ಬಸವ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮ ರಚರಿತಾಮೃತ 8ನೇ ಮುದ್ರಣದ ಲೋಕಾರ್ಪಣೆ ನಡೆಯಿತು. ಡಾ.ಬಸವ ಮರುಳಸಿದ್ದ ಸ್ವಾಮೀಜಿ, ಕೋಡಿಹಳ್ಳಿಯ ಭೃಂಗೀಶ್ವರ ಮಠದ ಶ್ರೀ ಬಸವ ಭೃಂಗೇಶ್ವರ ಸ್ವಾಮೀಜಿ, ಸಾಹಿತಿ ಚಟ್ನಳ್ಳಿ ಮಹೇಶ್‌ ಇದ್ದರು.