ಸಾರಾಂಶ
ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಮೈಸೂರು ಮಠದಲ್ಲಿ ಜು. ೨೫ರಿಂದ ಆ. ೨೪ರ ವರೆಗೆ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪುರಾಣ ಪ್ರಾರಂಭವಾಗಲಿದೆ ಎಂದು ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಹೇಳಿದರು.
ಗಜೇಂದ್ರಗಡ: ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಮೈಸೂರು ಮಠದಲ್ಲಿ ಜು. ೨೫ರಿಂದ ಆ. ೨೪ರ ವರೆಗೆ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪುರಾಣ ಪ್ರಾರಂಭವಾಗಲಿದೆ ಎಂದು ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಹೇಳಿದರು.
ಪಟ್ಟಣದ ಮೈಸೂರು ಮಠದ ಆವರಣದಲ್ಲಿ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪುರಾಣ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕುದರಿಮೋತಿ-ಗಜೇಂದ್ರಗಡ ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮೈಸೂರಿನ ನಿರಂಜನ ದೇವರು ಹಾನಗಲ್ಲ ಕುಮಾರೇಶ್ವರರ ಕುರಿತು ಪ್ರವಚನ ನೀಡಲಿದ್ದಾರೆ. ಒಂದು ತಿಂಗಳು ಪ್ರತಿದಿನ ಸಂಜೆ ೭ ಗಂಟೆಗೆ ನಡೆಯಲಿದೆ ಎಂದರು.ಹಿರಿಯರಾದ ಎಸ್.ಎಸ್. ವಾಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜನರು ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಇಂತಹ ಪುರಾಣ-ಪ್ರವಚನ ಕಾರ್ಯಕ್ರಮಗಳ ಆಯೋಜನೆ ಅಗತ್ಯವಿದೆ. ಅದರಲ್ಲೂ ಯುವಕರು ಒತ್ತಡದ ಬದುಕಿನ ನಡುವೆ ಪ್ರತಿದಿನ ಸಂಜೆ ಮಠಕ್ಕೆ ಬಂದು ಪವಾಡ ಪುರುಷ ಹಾನಗಲ್ಲ ಕುಮಾರೇಶ್ವರರ ಪುರಾಣ ಆಲಿಸಬೇಕು ಎಂದರು. ಬಿ.ಎಸ್. ಶೀಲವಂತರ ಮಾತನಾಡಿದರು.
ಪುರಾಣ ಸಮಿತಿ ಅಧ್ಯಕ್ಷ ಶಿವಪ್ಪ ಮಡಿವಾಳರ, ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಮುಖಂಡರಾದ ಮಹಾಂತೇಶ ಅರಳಿ, ಬಸವರಾಜ ಬೇಲೇರಿ, ಪ್ರಭು ಚವಡಿ, ಬಸವರಾಜ ಕೋಟಗಿ, ಅಮರೇಶ ಗಾಣಿಗೇರ, ಶೇಕಣ್ಣ ಇಟಗಿ, ಚಿದಾನಂದಪ್ಪ ಹಡಪದ, ನಿಂಗಪ್ಪ ಹೂಗಾರ, ನಾಗಯ್ಯ ಗೋಂಗಡಶೆಟ್ಟಿಮಠ, ಮಾದೇವಪ್ಪ ಪವಾರ, ಹೇಮರಡ್ಡಿ ದೇವರಡ್ಡಿ, ವಿಜಯ ನೂಲ್ವಿ, ಮಹೇಶ ಪಲ್ಲೇದ, ಬಸವರಾಜ ನಂದಿಹಾಳ ಇದ್ದರು.