ಹೆಸ್ಕಾಂ ನೌಕರರು ಸುರಕ್ಷತೆಗೆ ಆದ್ಯತೆ ನೀಡಲಿ: ಶ್ರೀನಿವಾಸ

| Published : Jul 07 2025, 11:48 PM IST

ಹೆಸ್ಕಾಂ ನೌಕರರು ಸುರಕ್ಷತೆಗೆ ಆದ್ಯತೆ ನೀಡಲಿ: ಶ್ರೀನಿವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಗಳ ಸುರಕ್ಷತೆಗಾಗಿ ಅರ್ಥಿಂಗ್ ಮಾಡುವುದು ಮುಖ್ಯವಾಗಿದೆ. ಆದರೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು. ಅದರ ಬಳಕೆ ಕುರಿತು ತಿಳಿಸಬೇಕು.

ಶಿಗ್ಗಾಂವಿ: ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿ ನೌಕರರು ಸುರಕ್ಷತೆಯಿಂದ ಕಾರ್ಯ ಮಾಡಿ ಸಾರ್ವಜನಿಕರ ಸುರಕ್ಷತೆ ಕಾಪಾಡುವುದು ಅವಶ್ಯವಾಗಿದೆ. ಅದಕ್ಕಾಗಿ ನೌಕರರು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಹಾವೇರಿ ವಿಭಾಗದ ವಿದ್ಯುತ್ ಪರಿವೀಕ್ಷಕ ಅಧಿಕಾರಿ ಶ್ರೀನಿವಾಸ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಹೆಸ್ಕಾಂ ಇಲಾಖೆ ವತಿಯಿಂದ ನಡೆದ ವಿದ್ಯುತ್ ಸುರಕ್ಷತಾ ಸಪ್ತಾಹ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಮನೆಗಳ ಸುರಕ್ಷತೆಗಾಗಿ ಅರ್ಥಿಂಗ್ ಮಾಡುವುದು ಮುಖ್ಯವಾಗಿದೆ. ಆದರೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು. ಅದರ ಬಳಕೆ ಕುರಿತು ತಿಳಿಸಬೇಕು. ನೌಕರರು ಕೆಲಸ ಮಾಡುವ ಸಂದರ್ಭದಲ್ಲಿ ಸುರಕ್ಷಾ ಕವಚಗಳನ್ನು ಹಾಕಿಕೊಳ್ಳಬೇಕು. ಅದರಿಂದ ಅನಾಹುತಗಳನ್ನು ತಡೆಯಲು ಸಾಧ್ಯವಿದೆ ಎಂದರು.ಗ್ರಾಹಕರು ವಿದ್ಯುತ್ ಕಾರ್ಯ ನಿರ್ವಹಿಸಬಾರದು. ವಿದ್ಯುತ್ ಕಂಬಗಳ ಆಧಾರ ಬಳಸಿ ಬಟ್ಟೆ ಒಣಗಿಸಲು ಸ್ಟೇ ತಂತಿಗಳನ್ನು ಬಿಗಿಯಬಾರದು. ತುಂಡಾಗಿ ನೆಲದ ಮೇಲೆ ಬಿದ್ದಿರುವ ಸ್ಥಳದಿಂದ ೧೦ ಮೀಟರ್ ಅಂತರದಲ್ಲಿರಬೇಕು. ವಿದ್ಯುತ್ ಕಂಬಗಳಿಗೆ ದನಕರುಗಳನ್ನು ಕಟ್ಟಬಾರದು. ವಿದ್ಯುತ್ ಮಾರ್ಗದ ಕೆಳಗೆ ವಾಹನ, ಬಂಡೆಗಳನ್ನು ಸಾಗಿಸಬಾರದು ಮತ್ತು ಗಾಳಿಪಟ, ಡ್ರೋನ್‌ಗಳನ್ನು ಹಾರಿಸಬಾರದು ಎಂದರು.ಹಾವೇರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ. ಹೊಸಮನಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಎಸ್. ನೀರಲಗಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಬಿ. ಹಾದಿಮನಿ, ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗಯ್ಯ ಹಿರೇಮಠ, ಜಿಲ್ಲಾ ಘಟಕದ ಮಾಜಿ ಸದಸ್ಯ ಮಂಜುನಾಥ ಮಣ್ಣಣ್ಣವರ, ಶಂಕರ ಕಾಳಶೆಟ್ಟಿ, ಹನುಮಂತಪ್ಪ ಮರಿದ್ಯಾಮಣ್ಣವರ, ಕೆ.ಎನ್. ಅಂಗಡಿ, ದಯಾನಂದ ಸೋಲಾವರ, ಎಂ.ಬಿ. ಮಿಶ್ರಿಕೋಟಿ, ಕವಿಪ್ರನಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ಬಂಡಿವಡ್ಡರ ಇತರರು ಇದ್ದರು.