ನಾನು ಶಾಸಕನಾದರೆ ಶಿರಾ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಹೈಟೆಕ್ ಸರ್ಕಾರಿ ಮಾದರಿ ಶಾಲೆ ಸ್ಥಾಪಿಸಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂಬ ಗುರಿ ಇದೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ನಾನು ಶಾಸಕನಾದರೆ ಶಿರಾ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಹೈಟೆಕ್ ಸರ್ಕಾರಿ ಮಾದರಿ ಶಾಲೆ ಸ್ಥಾಪಿಸಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂಬ ಗುರಿ ಇದೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.ಅವರು ನಗರದ ವಿದ್ಯಾನಗರದಲ್ಲಿ ಅಭಿಮಾನಿ ಬಳಗದಿಂದ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಹೆಣ್ಣುಮಕ್ಕಳಿಗೆ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇದುವರೆಗೂ ನಾನು ನನ್ನ ಖಾಸಗಿ ಪ್ರೆಸಿಡೆನ್ಸಿ ಶಾಲೆಯಲ್ಲಿ ಸುಮಾರು ೧೫೦೦ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದೇನೆ. ಇದಕ್ಕೆ ಸುಮಾರು ೩೦ ಕೋಟಿ ಖರ್ಚು ಮಾಡಿದ್ದೇನೆ. ನಾನು ಜಾತಿ ನೋಡಿ ಉಚಿತ ಶಿಕ್ಷಣ ಕೊಟ್ಟಿಲ್ಲ ಯಾರಿಗೆ ಪ್ರತಿಭೆ ಇದೆ ಎಲ್ಲರಿಗೂ ಕೊಟ್ಟಿದ್ದೇನೆ. ಶಿರಾ ತಾಲೂಕಿನಲ್ಲಿ ಕಳೆದ ೨೫ ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ತಾಲೂಕಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ ಮಾಡಿ ನನ್ನ ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಿದ್ದೇನೆ ಎಂಬ ತೃಪ್ತಿ ಇದೆ. ಶಿರಾ ತಾಲೂಕಿನ ಅಭಿವೃದ್ಧಿಯಲ್ಲಿ ಹೇಮಾವತಿ ನೀರು ಹಾಗೂ ಪ್ರೆಸಿಡೆನ್ಸಿ ಶಾಲೆ ಕಾರಣ ಎಂಬುದು ಎಲ್ಲರ ಮನಸ್ಸಿನಲ್ಲೂ ಇದೆ. ಕಳೆದ ೨೫ ವರ್ಷದಲ್ಲಿ ನಾನು ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಶಿಕ್ಷಣ ಸಂಸ್ಥೆ ನಡೆಸಿದ್ದೇನೆ ಎಂದರು.ಇಂದಿನ ದಿನಗಳಲ್ಲಿ ಪ್ರತಿ ತಾಲೂಕುಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಿದೆ. ಅದಕ್ಕೆ ಗ್ರಾಮಗಳು ಸಹ ಅಭಿವೃದ್ಧಿಯಾಗಬೇಕು. ಇದೆಲ್ಲವೂ ನಡೆಯಬೇಕಾದರೆ ಶೈಕ್ಷಣಿಕ ಗುಣಮಟ್ಟ ಸುಧಾರಿಸುವುದು ಅಗತ್ಯವಾಗಿದ್ದು ಈ ಬಗ್ಗೆ ನಾವುಗಳು ಗಂಭೀರವಾಗಿ ಚರ್ಚೆ ನಡೆಸಿದ್ದು ಈಗಾಗಲೇ ಸಾಕಷ್ಟು ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲೂ ಸಹ ನಾನು ಈ ಕಾರ್ಯವನ್ನು ನಿಯಮಿತವಾಗಿ ಮಾಡುವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಮಹಿಳೆಯರಿಗೆ ಸನ್ಮಾನಿಸಲಾಯಿತು. ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ರಾಧಿಕಾ ಪ್ರಥಮ, ಸುಮಿತ್ರ ದ್ವಿತೀಯ ಮೈಥಲಿ, ಸುಕನ್ಯ, ಗಾಯಿತ್ರಿ, ಅನಿತಾ ತೃತೀಯ ಸ್ಥಾನ ಪಡೆದರು. ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.ತೀರ್ಪುಗಾರರಾಗಿ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪ್ರೇಮಾ ಹೆಗಡೆ, ಜ್ಯೋತಿ ಭಾಗವಹಿಸಿದ್ದರು. ಹಿರಿಯ ವಕೀಲರಾದ ಜವನಯ್ಯ, ನಗರಸಭಾ ಸದಸ್ಯರಾದ ಸುಶೀಲ ವಿರೂಪಾಕ್ಷ, ಹಿಂತರಾಜು, ಮುಖಂಡರಾದ ಕುಮಾರ್ ಮಾಸ್ಟರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಈರಣ್ಣ ಪಟೇಲ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಎಸ್.ಟಿ. ಮೋರ್ಚಾ ಅಧ್ಯಕ್ಷ ತೇಜೇಶ್ವರ್, ಬೊಪ್ಪರಾಯಪ್ಪ, ಮದ್ದಕ್ಕನಹಳ್ಳಿ ರಂಗನಾಥ್. ಯಶ್ವಸ್ವಿನಿ, ಅಶ್ವಿನಿ, ಮೋಹನ, ಪದ್ಮ ಮಂಜುನಾಥ್, ಹೇಮಲತಾ, ರತ್ನಮ್ಮ, ಪದ್ಮ ಮಂಜುನಾಥ್, ಪುರುಷೋತ್ತಮ್, ಮೂಗನಹಳ್ಳಿ ರಾಮು ಸೇರಿದಂತೆ ಹಲವರು ಹಾಜರಿದ್ದರು.