ಹೈಕೋರ್ಟ್‌ ಅಸ್ತು: ಅಂಜನಾದ್ರಿದಲ್ಲಿ ವಿದ್ಯಾದಾಸ್ ಬಾಬಾರಿಂದ ಪೂಜಾ ಕಾರ್ಯಕ್ಕೆ ಚಾಲನೆ

| Published : Jun 03 2025, 12:48 AM IST

ಹೈಕೋರ್ಟ್‌ ಅಸ್ತು: ಅಂಜನಾದ್ರಿದಲ್ಲಿ ವಿದ್ಯಾದಾಸ್ ಬಾಬಾರಿಂದ ಪೂಜಾ ಕಾರ್ಯಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಹೈಕೋರ್ಟ್ ಪೀಠ, ಎಂದಿನಂತೆ ಅರ್ಚಕ ವಿದ್ಯಾದಾಸ್ ಬಾಬಾ ಅವರು ಪೂಜಾ ಕಾರ್ಯ ನಡೆಸಬೇಕೆಂದು ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಬಾಬಾ ಅವರು ಆಂಜನೇಯಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಸಿದರು.

ಗಂಗಾವತಿ:

ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇಗುಲದಲ್ಲಿ ಅರ್ಚಕರಾಗಿರುವ ವಿದ್ಯಾದಾಸ್ ಬಾಬಾ ಅವರು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸೋಮವಾರದಿಂದ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು.

ಧಾರವಾಡ ಹೈಕೋರ್ಟ್ ಪೀಠ, ಎಂದಿನಂತೆ ಅರ್ಚಕ ವಿದ್ಯಾದಾಸ್ ಬಾಬಾ ಅವರು ಪೂಜಾ ಕಾರ್ಯ ನಡೆಸಬೇಕೆಂದು ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಬಾಬಾ ಅವರು ಆಂಜನೇಯಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಸಿದರು.

ಈ ವೇಳೆ ಮಾತನಾಡಿದ ಬಾಬಾ ಅವರು, ಸತ್ಯಕ್ಕೆ ಜಯ ದೊರೆತಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನಂತೆ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಸಂಸ್ಕೃತ ಪಾಠಶಾಲೆ ಆರಂಭ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಹೋಮ-ಹವನ, ದಿನ ಪ್ರತಿ ಹನುಮಾನ ಚಾಲೀಸಾ ಪಠಣ ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇಗುಲದಲ್ಲಿ ಈ ಹಿಂದೆ ಪೂಜಾ ಕಾರ್ಯ ಮಾಡುತ್ತಿದ್ದ ವಿದ್ಯಾದಾಸ್ ಬಾಬಾ ಅವರಿಗೆ ಮೊದಲಿನಂತೆ ಪೂಜೆ ನಡೆಸಲು ಧಾರವಾಡ ಹೈಕೋರ್ಟ್ ಪೀಠ ಆದೇಶ ನೀಡಿದೆ. ಅದರಂತೆ ಪೂಜೆ ನಡೆಸಿಕೊಂಡು ಹೋಗುತ್ತಿದ್ದಾರೆ.

ಪ್ರಕಾಶ, ಇಒ ಅಂಜನಾದ್ರಿ ದೇವಸ್ಥಾನ ಸಮಿತಿ