ಹೊಳೆನರಸೀಪುರ: ಪಟ್ಟಣದ ಹೆಸರಾಂತ ವೈದ್ಯರಾದ ಜವರೇಗೌಡರ ಮೊಮ್ಮಗಳಾದ ನಿಯಾತಿ ಎ.ಗೌಡ ರಾಷ್ಟ್ರಮಟ್ಟದ ೧೨ ವರ್ಷದೊಳಗಿನ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಲ್ಲಿ ಪ್ರತಿನಿಧಿಸುವ ಮೂಲಕ ೩ನೇ ಸ್ಥಾನದ ಗೆಲುವಿನೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಬೆಂಗಳೂರಿನ ವಿಶ್ವವಿದ್ಯಾಪೀಠ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿನ ಗೋರಕ್ಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಂತಾರಾಜ್ಯ ಶಾಲೆಗಳ ಕೀಡಾಕೂಟದಲ್ಲಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ತಂಡಗಳು ಹಾಗೂ ಕರ್ನಾಟಕದ ನಡುವೆ ಸೆಣಸಾಟದಲ್ಲಿ ನಿಯತಿ ಎ.ಗೌಡ ಒಟ್ಟು ೩ ಗೋಲ್ಗಳನ್ನು ಹೊಡೆದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೆನಾಲ್ಟಿ ಗೋಲ್ನ ಪಂದ್ಯದ ಹಂತದಲ್ಲಿ ಕರ್ನಾಟಕಕ್ಕೆ ಸೋಲು ಅನುಭವಿಸುವಂತಾಗಿದ್ದು, ೩ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು ಕ್ರೀಡಾ ಸಾಧಕಿ ನಿಯಾತಿ ಹೇಳಿದ್ದಾರೆ.ಫುಟ್ಬಾಲ್ನಲ್ಲಿ ನಿಯಾತಿ ಸಾಧನೆ
ಬೆಂಗಳೂರಿನ ವಿಶ್ವವಿದ್ಯಾಪೀಠ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿನ ಗೋರಕ್ಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಂತಾರಾಜ್ಯ ಶಾಲೆಗಳ ಕೀಡಾಕೂಟದಲ್ಲಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ತಂಡಗಳು ಹಾಗೂ ಕರ್ನಾಟಕದ ನಡುವೆ ಸೆಣಸಾಟದಲ್ಲಿ ನಿಯತಿ ಎ.ಗೌಡ ಒಟ್ಟು ೩ ಗೋಲ್ಗಳನ್ನು ಹೊಡೆದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೆನಾಲ್ಟಿ ಗೋಲ್ನ ಪಂದ್ಯದ ಹಂತದಲ್ಲಿ ಕರ್ನಾಟಕಕ್ಕೆ ಸೋಲು ಅನುಭವಿಸುವಂತಾಗಿದ್ದು, ೩ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು ಕ್ರೀಡಾ ಸಾಧಕಿ ನಿಯಾತಿ ಹೇಳಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.