ಸಾಲಬಾಧೆ: ರೈತ ಆತ್ಮಹತ್ಯೆ

| Published : Oct 17 2023, 12:46 AM IST

ಸಾರಾಂಶ

ಚನ್ನಪಟ್ಟಣ: ಸಾಲ ತೀರಿಸಲಾಗದೇ ನದಿಗೆ ಬಿದ್ದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸರಗೂರು ಗ್ರಾಮದಲ್ಲಿ ನಡೆದಿದೆ.
ಚನ್ನಪಟ್ಟಣ: ಸಾಲ ತೀರಿಸಲಾಗದೇ ನದಿಗೆ ಬಿದ್ದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸರಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾರಾಯಣಗೌಡ ಮೃತ(56) ರೈತ. ಗ್ರಾಮದಲ್ಲಿನ ತಮ್ಮ ಜಮೀನಿನಲ್ಲಿ ನಾರಾಯಣಗೌಡ ಟೊಮೇಟೊ, ಬಾಳೆ ಬೆಳೆಗಳನ್ನು ಬೆಳೆದಿದ್ದರು. ವ್ಯವಸಾಯಕ್ಕಾಗಿ ಇಗ್ಗಲೂರು ವ್ಯವಸಾಯೋತ್ಪಾಕರ ಸಹಕಾರ ಸಂಘದಲ್ಲಿ 1 ಲಕ್ಷ ರು., ಸ್ತ್ರೀಶಕ್ತಿ ಸಂಘದಲ್ಲಿ 3 ಲಕ್ಷ ರು., ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಸುಮಾರು 4.5 ಲಕ್ಷ ರು. ಸಾಲ ಸೇರಿದಂತೆ ಒಟ್ಟು 8.5 ಲಕ್ಷ ರು. ಸಾಲ ಮಾಡಿದ್ದರು. ಬೆಳೆ ನಷ್ಟವಾದ ಕಾರಣ ಸಾಲ ತೀರಿಸಲಾಗದೇ ಗ್ರಾಮದ ಬಳಿ ಹರಿಯುವ ಶಿಂಷಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.