ಹುಬ್ಬಳ್ಳಿಯ ಹವ್ಯಕ ಸಮುದಾಯ ಭವನದಲ್ಲಿ ಭಕ್ತರನ್ನುದ್ದೇಶಿಸಿ ಎಡತೊರೆ ಯೋಗಾನಂದ ಮಠದ ಶಂಕರ ಭಾರತಿ ಶ್ರೀಗಳು ಮಾತನಾಡಿದರು. | Kannada Prabha
Image Credit: KP
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಬಾಹ್ಯ ಆನಂದ ಅನುಭವಿಸಬೇಕಾದರೆ ಅಂತರಂಗದ ಶುದ್ಧಿ ಅತ್ಯವಶ್ಯಕ ಎಂದು ಮೈಸೂರಿನ ಕೆ.ಆರ್.ನಗರದ ಯಡತೊರೆ ಯೋಗಾನಂದ ಮಠದ ಶಂಕರ ಭಾರತಿ ಶ್ರೀಗಳು ಹೇಳಿದರು.ಇಲ್ಲಿಯ ಹವ್ಯಕ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಉಪದೇಶಾಮೃತ ನೀಡಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಬಾಹ್ಯ ಆನಂದ ಅನುಭವಿಸಬೇಕಾದರೆ ಅಂತರಂಗದ ಶುದ್ಧಿ ಅತ್ಯವಶ್ಯಕ ಎಂದು ಮೈಸೂರಿನ ಕೆ.ಆರ್.ನಗರದ ಯಡತೊರೆ ಯೋಗಾನಂದ ಮಠದ ಶಂಕರ ಭಾರತಿ ಶ್ರೀಗಳು ಹೇಳಿದರು. ಇಲ್ಲಿಯ ಹವ್ಯಕ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಉಪದೇಶಾಮೃತ ನೀಡಿದರು. ಶಂಕರಾಚಾರ್ಯ ಭಗವತ್ಪಾದರು ಈ ವಿಶ್ವಕ್ಕೆ ಸೌಂದರ್ಯ ಲಹರಿ, ಶಿವಾನಂದ ಲಹರಿ ಮೊದಲಾದ ಅಮೂಲ್ಯ ಸ್ತೋತ್ರ ರತ್ನಗಳನ್ನು ನೀಡಿದ್ದು, ಅವುಗಳ ನಿತ್ಯ ಪಠಣದ ಮೂಲಕ ಅಂತರಂಗ ಶುದ್ಧಿಯ ಜತೆಗೆ ಮೋಕ್ಷದ ಮಾರ್ಗ ಕಾಣಬಹುದಾಗಿದೆ. ಈ ರತ್ನಗಳನ್ನು ಜನರು ಭಕ್ತಿಭಾವದಿಂದ ಪಠಿಸುವುದು ಅಗತ್ಯ ಎಂದರು. ಇಡೀ ಭರತ ಖಂಡದಲ್ಲಿ ಸೌಂದರ್ಯ ಲಹರಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಶಂಕರಾಚಾರ್ಯ ಭಗವತ್ಪಾದರ ಸಂದೇಶ ಬಿತ್ತರಿಸುವ ಕಾರ್ಯವನ್ನು ಎಡತೊರೆ ಮಠ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿದೆ ಎಂದರು. ಇದೇ ಸಂದರ್ಭದಲ್ಲಿ ಅವಳಿ ನಗರದ ವಿವಿಧ ಮಹಿಳಾ ಮಂಡಲಗಳ ಸುಮಾರು ಇನ್ನೂರಕ್ಕೂ ಹೆಚ್ಚು ಮಹಿಳೆಯರು ಸೌಂದರ್ಯ ಲಹರಿಯ ಶ್ಲೋಕಗಳ ಪಠಣ ಮಾಡಿದರು.ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ.ಭಟ್ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.