ಸಾರಾಂಶ
ಮೈಸೂರಿನ ದಿ ಪ್ರೆಸಿಡೆಂಟ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆ ಮುಖ್ಯಸ್ಥರಾದ ಎಸ್.ಪಿ. ಯೋಗಣ್ಣ ಪ್ರಶಸ್ತಿ ನೀಡಿ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಮೈಸೂರಿನ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ, ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ದಿ. ಕೆ.ಎಚ್.ರಾಮಯ್ಯ ಜ್ಞಾಪಕಾರ್ಥ ಕೊಡಮಾಡುವ ಸಮಾಜಸೇವೆ ಕ್ಷೇತ್ರದ ‘ವಿಕಾಸ ಶ್ರೀ’ ಪುರಸ್ಕಾರಕ್ಕೆ ಇನ್ನರ್ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ಬಿ.ಕೆ. ಸಂಧ್ಯಾರಾಣಿ ಭಾಜನರಾಗಿದ್ದಾರೆ.ಮೈಸೂರಿನ ದಿ ಪ್ರೆಸಿಡೆಂಟ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆ ಮುಖ್ಯಸ್ಥರಾದ ಎಸ್.ಪಿ. ಯೋಗಣ್ಣ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ. ಮಂಜೇಗೌಡ, ವಿಕಾಸ ವೇದಿಕೆಯ ರಾಜ್ಯಾಧ್ಯಕ್ಷರಾದ ಯಮುನಾ, ಗೌರವಾಧ್ಯಕ್ಷ ಎಚ್.ಕೆ.ರಾಜು, ಸಮಾಜಸೇವಕರಾದ ಟಿ. ಸತೀಶ್ ಜವರೇಗೌಡ, ಶ್ರೀರಂಗಪಟ್ಟಣ ಎಪಿಎಂಸಿ ಸದಸ್ಯರಾದ ಎಂ. ನಂದೀಶ್ ಇದ್ದರು.