ಸಾರಾಂಶ
ರಾಮನಾಥಪುರ- ಹೋಬಳಿ ಕೇರಳಾಪುರ ಗಡಿಯಿಂದ ಕೇರಳಾಪುರ, ಕಾಳೇನಹಳ್ಳಿ, ಬಸವಾಪಟ್ಟಣ, ರಾಮನಾಥಪುರ, ಕೊಣನೂರು, ಮಾರ್ಗ ಸೋಮವಾರಪೇಟೆಗೆ ಹೋಗುವ ರಸ್ತೆಯ ಬದಿಯಲ್ಲಿದ್ದ ದೇವಸ್ಥಾನಗಳ ಅಭಿವೃದ್ಧಿ ಹಾಗೂ ಬಸ್ ನಿಲ್ದಾಣಗಳು, ಉಳಿದಿರುವ, ರಾಮನಾಥಪುರ ಬಸವೇಶ್ವರ ಸರ್ಕಲ್ನಿಂದ ಅರಣ್ಯ ಗೇಟ್ ಭಾಗದವರೆಗೆ ಬಸವಾಪಟ್ಟಣ ಗ್ರಾಮದ ಮಧ್ಯ ಉಳಿದಿರುವ ಎಲ್ಲಾ ಕಾಮಗಾರಿಯ ಬಗ್ಗೆ ತುರ್ತಾಗಿ ಚರಂಡಿ ನಿರ್ಮಾಣದ ಬಗ್ಗೆ ಕೆಶಿಪ್ ಅಧಿಕಾರಿಗಳಿಗೆ ಶಾಸಕ ಮಂಜು ಸೂಚನೆ ನೀಡಿದರು.
ರಾಮನಾಥಪುರ: ಬೆಂಗಳೂರು- ಮಾಗಡಿ- ಸೋಮವಾರಪೇಟೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಕೇರಳಾಪುರ ಗ್ರಾಮ ಪಂಚಾಯತಿ ಆವರಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರು ಕೆಶಿಪ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು. ರಾಮನಾಥಪುರ- ಹೋಬಳಿ ಕೇರಳಾಪುರ ಗಡಿಯಿಂದ ಕೇರಳಾಪುರ, ಕಾಳೇನಹಳ್ಳಿ, ಬಸವಾಪಟ್ಟಣ, ರಾಮನಾಥಪುರ, ಕೊಣನೂರು, ಮಾರ್ಗ ಸೋಮವಾರಪೇಟೆಗೆ ಹೋಗುವ ರಸ್ತೆಯ ಬದಿಯಲ್ಲಿದ್ದ ದೇವಸ್ಥಾನಗಳ ಅಭಿವೃದ್ಧಿ ಹಾಗೂ ಬಸ್ ನಿಲ್ದಾಣಗಳು, ಉಳಿದಿರುವ, ರಾಮನಾಥಪುರ ಬಸವೇಶ್ವರ ಸರ್ಕಲ್ನಿಂದ ಅರಣ್ಯ ಗೇಟ್ ಭಾಗದವರೆಗೆ ಬಸವಾಪಟ್ಟಣ ಗ್ರಾಮದ ಮಧ್ಯ ಉಳಿದಿರುವ ಎಲ್ಲಾ ಕಾಮಗಾರಿಯ ಬಗ್ಗೆ ತುರ್ತಾಗಿ ಹಾಗೂ ಅಗತ್ಯವಿರುವ ಕಡೆ ಹೆಚ್ಚುವರಿಯಾಗಿ ಚರಂಡಿ ನಿರ್ಮಾಣದ ಬಗ್ಗೆ ಕೆಶಿಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು, ಸಭೆಯಲ್ಲಿ ಕೆಶಿಪ್ ಅಧಿಕಾರಿಗಳಾದ ಸುಪ್ರಿಯಾ, ಶಿವರಾಜ್ ಹಾಗೂ ಎಲ್ಲಾ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.