ಹೊಸ ಮ್ಯಾನ್‌ಹೋಲ್‌ ಕ್ಯಾಪ್‌ ಅಳವಡಿಸಿ

| Published : Jun 05 2025, 12:48 AM IST

ಸಾರಾಂಶ

ಪಾ​ಲಿ​ಕೆಯ ವ್ಯಾ​ಪ್ತಿಯ ವಲಯ ಕ​ಚೇ​ರಿ​ಗ​ಳಲ್ಲಿ ಸಾ​ಕಷ್ಟು ಸಿ​ಬ್ಬಂದಿ ಹಾಗೂ ಅ​ತ್ಯಾ​ಧು​ನಿಕ ಯಂತ್ರೋ​ಪ​ಕ​ರ​ಣ​ಗಳ ವ್ಯ​ವಸ್ಥೆ ಇ​ದ್ದರೂ, ಸಾ​ರ್ವ​ಜ​ನಿ​ಕರ ಸ​ಮ​ಸ್ಯೆ​ಗ​ಳನ್ನು ಅ​ಧಿ​ಕಾ​ರಿ​ಗಳು ಬೇ​ಗನೆ ಪ​ರಿ​ಹ​ರಿ​ಸುವ ಕೆ​ಲಸ ಮಾ​ಡು​ತ್ತಿಲ್ಲ. ಖುದ್ದು ವ​ಲಯ ಅ​ಧಿ​ಕಾ​ರಿ​ಗಳು ತಮ್ಮ ವ್ಯಾ​ಪ್ತಿಯ ಮ್ಯಾನ್‌ಹೋಲ್‌ ಸ​ಮ​ಸ್ಯೆ​ಗ​ಳನ್ನು ಪ​ರಿ​ಶೀ​ಲನೆ ನ​ಡೆಸಿ ಕ್ರ​ಮಕ್ಕೆ ಮುಂದಾ​ಗ​ಬೇಕು. ಇ​ಲ್ಲದೇ ಹೋ​ದಲ್ಲಿ ಮೇ​ಯರ್‌ ಪೋನ್‌ಇನ್‌ ಕಾ​ರ್ಯ​ಕ್ರ​ಮ ವಿ​ಫ​ಲ​ವಾ​ದಂತಾ​ಗು​ತ್ತದೆ.

ಹು​ಬ್ಬ​ಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರದ ಬ​ಹು​ತೇಕ ವಾರ್ಡ್‌ ಹಾಗೂ ಕಾಲ​ನಿ​ಯಲ್ಲಿ ಮ್ಯಾನ್‌ಹೋಲ್‌ ಕ್ಯಾಪ್‌ಗಳು ಒ​ಡೆದು ಹೋ​ಗಿದ್ದು, ವಾ​ಹನ ಸ​ವಾ​ರ​ರು ಮತ್ತು ಪಾ​ದ​ಚಾ​ರಿ​ಗ​ಳು ಜೀವ ಕೈ​ಯಲ್ಲಿ ಹಿ​ಡಿ​ದು​ಕೊಂಡು ಸಂಚ​ರಿ​ಸ​ಬೇ​ಕಾದ ದುಃ​ಸ್ಥಿತಿ ನಿ​ರ್ಮಾ​ಣ​ವಾ​ಗಿದೆ. ಕೂಡಲೇ ಅಧಿಕಾರಿಗಳು ಹೊಸ ಮ್ಯಾನ್‌ ಹೋಲ್‌ ಕ್ಯಾಪ್‌ ಅಳವಡಿಸಬೇಕು ಎಂದು ಮೇಯರ್‌ ರಾಮಪ್ಪ ಬಡಿಗೇರ ತಿಳಿಸಿದರು.

ನ​ಗ​ರದ ಮ​ಹಾ​ನ​ಗರ ಪಾ​ಲಿಕೆಯ ಮೇ​ಯರ್‌ ಕ​ಚೇ​ರಿಯ ಸ​ಭಾ​ಭ​ವ​ನ​ದಲ್ಲಿ ಬು​ಧ​ವಾರ ಆ​ಯೋ​ಜಿ​ಸಿದ್ದ ಮೇ​ಯರ್‌ ಜತೆ ಮಾ​ತು​ಕತೆ ನೇರ ಪೋನ್‌ ಇನ್‌ ಕಾ​ರ್ಯ​ಕ್ರ​ಮ​ದಲ್ಲಿ ಸಾ​ರ್ವ​ಜ​ನಿ​ಕರ ಅ​ಹ​ವಾಲು ಆ​ಲಿಸಿ ಅ​ವರು ಮಾ​ತ​ನಾ​ಡಿ​ದ​ರು.

ಈ ಕು​ರಿತು ಸಾ​ರ್ವ​ಜ​ನಿ​ಕ​ರಿಂದ ನಿತ್ಯ ಅ​ನೇಕ ದೂ​ರು​ಗಳು ಬ​ರು​ತ್ತಿದ್ದು, ಕೂ​ಡಲೇ ಅ​ಧಿ​ಕಾ​ರಿ​ಗಳು ಹೊಸ ಮ್ಯಾನ್‌ಹೋ​ಲ್‌ ಕ್ಯಾಪ್‌ ಅ​ಳ​ವ​ಡಿ​ಸುವ ಕೆ​ಲಸ ಮಾ​ಡ​ಬೇಕು ಎಂದು ಸೂಚಿಸಿದರು.

ಪಾ​ಲಿ​ಕೆಯ ವ್ಯಾ​ಪ್ತಿಯ ವಲಯ ಕ​ಚೇ​ರಿ​ಗ​ಳಲ್ಲಿ ಸಾ​ಕಷ್ಟು ಸಿ​ಬ್ಬಂದಿ ಹಾಗೂ ಅ​ತ್ಯಾ​ಧು​ನಿಕ ಯಂತ್ರೋ​ಪ​ಕ​ರ​ಣ​ಗಳ ವ್ಯ​ವಸ್ಥೆ ಇ​ದ್ದರೂ, ಸಾ​ರ್ವ​ಜ​ನಿ​ಕರ ಸ​ಮ​ಸ್ಯೆ​ಗ​ಳನ್ನು ಅ​ಧಿ​ಕಾ​ರಿ​ಗಳು ಬೇ​ಗನೆ ಪ​ರಿ​ಹ​ರಿ​ಸುವ ಕೆ​ಲಸ ಮಾ​ಡು​ತ್ತಿಲ್ಲ. ಖುದ್ದು ವ​ಲಯ ಅ​ಧಿ​ಕಾ​ರಿ​ಗಳು ತಮ್ಮ ವ್ಯಾ​ಪ್ತಿಯ ಮ್ಯಾನ್‌ಹೋಲ್‌ ಸ​ಮ​ಸ್ಯೆ​ಗ​ಳನ್ನು ಪ​ರಿ​ಶೀ​ಲನೆ ನ​ಡೆಸಿ ಕ್ರ​ಮಕ್ಕೆ ಮುಂದಾ​ಗ​ಬೇಕು. ಇ​ಲ್ಲದೇ ಹೋ​ದಲ್ಲಿ ಮೇ​ಯರ್‌ ಪೋನ್‌ಇನ್‌ ಕಾ​ರ್ಯ​ಕ್ರ​ಮ ವಿ​ಫ​ಲ​ವಾ​ದಂತಾ​ಗು​ತ್ತದೆ ಎಂದು ಎ​ಚ್ಚ​ರಿ​ಸಿದ​ರು.

ಅ​ವಳಿ ನ​ಗ​ರದ ಸ​ಮಗ್ರ ಅ​ಭಿ​ವೃದ್ಧಿ ಹಾಗೂ ಸ್ಥ​ಳೀಯ ಸ​ಮ​ಸ್ಯೆ​ಗ​ಳನ್ನು ಸ್ವತಃ ಆ​ಲಿ​ಸಿದ ಮೇ​ಯರ್‌, ಕೆ​ಲ​ವೊಂದಿಷ್ಟು ಸ​ಮ​ಸ್ಯೆ​ಗ​ಳಿಗೆ ತ​ಕ್ಷ​ಣವೇ ಪ​ರಿ​ಹಾರ ಕ​ಲ್ಪಿ​ಸು​ವಂತೆ ಅ​ಧಿ​ಕಾ​ರಿ​ಗ​ಳಿಗೆ ಸೂ​ಚನೆ ನೀ​ಡಿ​ದರು.

ಅದಕ್ಕೂ ಮುನ್ನ ನ​ಡೆದ ಪೋನ್‌ ಇನ್‌ ಕಾರ್ಯಕ್ರಮದಲ್ಲಿ ಒಟ್ಟು 21 ದೂರುಗಳು ಬಂದಿದ್ದು, ಎ ವಿಭಾಗದಲ್ಲಿ 6, ಬಿ ವಿಭಾಗದಲ್ಲಿ 3, ಸಿ ವಿಭಾಗದಲ್ಲಿ 12 ದೂರುಗಳು ಬಂದಿವೆ. ಅ​ದ​ರಲ್ಲಿ ರಸ್ತೆ, ನೀರು, ವಿದ್ಯುತ್‌ ದೀಪ, ನಾಲಾಗಳ ಸ್ವಚ್ಛತೆ, ಕಸದ ವಾಹನಗಳ ಸಮಸ್ಯೆ ಬೀದಿನಾಯಿಗಳ ಹಾವಳಿ, ನೀರಿನ ಘಟಗಳ ದುರಸ್ತಿ, ಬಸ್‌ ನಿಲ್ದಾಣಗಳ ಸಮಸ್ಯೆಗಳ ಕುರಿತು ಸಾರ್ವಜನಿಕರು ಮೇಯರ್‌ ಅವರಿಗೆ ದೂರುಗಳನ್ನು ಸಲ್ಲಿಸಿದರು. ದೂರುಗಳನ್ನು ಆ​ದಷ್ಟುಬೇ​ಗನೆ ಬಗೆಹರಿಸು​ವಂತೆ ಅಧಿಕಾರಿಗಳಿಗೆ ಸೂಚಿಸಿದ​ರು.

ಸ​ಮ​ಸ್ಯೆಗೆ ಪ​ರಿ​ಹಾರ ಕ​ಲ್ಪಿ​ಸೋ​ಣ: ಮಹಾನ​ಗ​ರ​ದ​ಲ್ಲಿನ ಸ​ಮ​ಸ್ಯೆ​ಗ​ಳನ್ನು ಪ​ರಿ​ಹ​ರಿ​ಸುವ ನಿ​ಟ್ಟಿ​ನಲ್ಲಿ ನಾನು ಪ್ರಾ​ಮಾ​ಣಿ​ಕ​ವಾದ ಕೆ​ಲಸ ಮಾ​ಡು​ತ್ತಿ​ದ್ದೇ​ವೆ. ಮೇ​ಯರ್‌ ಆಗಿ ಅ​ಧಿ​ಕಾರ ಸ್ವೀ​ಕ​ರಿ​ಸಿದ ನಂತರ ಒಟ್ಟು ಐದು ಪೋನ್‌ ಇನ್‌ ಕಾ​ರ್ಯ​ಕ್ರ​ಮ​ಗ​ಳನ್ನು ಮಾ​ಡ​ಲಾ​ಗಿದೆ. ನಾಲ್ಕು ಕಾ​ರ್ಯ​ಕ್ರ​ಮ​ಗ​ಳಲ್ಲಿ ಒಟ್ಟು 203 ದೂ​ರು​ಗಳು ಬಂದಿದ್ದು, ಅ​ವು​ಗ​ಳಲ್ಲಿ ಎ ವಿ​ಭಾ​ಗ​ದಲ್ಲಿ 110, ಬಿ ವಿ​ಭಾ​ಗ​ದಲ್ಲಿ 10 ಹಾಗೂ ಸಿ ವಿ​ಭಾ​ಗ​ದಲ್ಲಿ 83 ದೂ​ರು​ಗಳು ಬಂದಿ​ದ್ದವು. ಅ​ವು​ಗ​ಳನ್ನು ಪ​ರಿ​ಹ​ರಿ​ಸುವ ಕೆ​ಲಸ ಮಾ​ಡ​ಲಾ​ಗಿದ್ದು, ಸದ್ಯ ಸಿ ವಿ​ಭಾ​ಗ​ದಲ್ಲಿ 70 ದೂ​ರು​ಗಳು ಮಾತ್ರ ಬಾಕಿ ಉ​ಳಿ​ದಿವೆ. ಅ​ವು​ಗ​ಳನ್ನು ಹಂತ ಹಂತ​ವಾಗಿ ಪ​ರಿ​ಹ​ರಿ​ಸ​ಲಾ​ಗು​ವುದು. ಪೋನ್‌ ಇನ್‌ ಕಾರ್ಯಕ್ರಮದ ಮೂಲಕ ಅವಳಿ ನಗರದಲ್ಲಿ ಒಟ್ಟು ₹7.92 ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಸದ್ಯ ವಿ​ವಿಧ 35 ಕಾ​ಮ​ಗಾ​ರಿ​ಗ​ಳಿಗೆ ಹಣ ಬಿ​ಡು​ಗಡೆ ಮಾ​ಡ​ಲಾ​ಗಿದೆ ಎಂದು ತಿ​ಳಿ​ಸಿ​ದ​ರು.

ಉ​ಪ​ಮೇ​ಯರ್‌ ದು​ರ್ಗಮ್ಮ ಬಿ​ಜ​ವಾಡ ಸೇ​ರಿ​ದಂತೆ ಪಾ​ಲಿಕೆ ವಲಯ ಅ​ಧಿ​ಕಾ​ರಿ​ಗಳು, ಆ​ರೋಗ್ಯ ಅ​ಧಿ​ಕಾ​ರಿ​ಗಳು ಹಾಗೂ ಎಂಜಿನೀಯರ್‌ಗಳು, ಸಿ​ಬ್ಬಂದಿ ಉ​ಪ​ಸ್ಥಿ​ತ​ರಿ​ದ್ದರು.