ಸಾರಾಂಶ
ಮೈಸೂರು: ಅಂತಾರಾಷ್ಟ್ರೀಯ ಲಿಂಗಾಯತ್ ಯೂತ್ ಫೋರಂನ ಮೈಸೂರು ಚಾಪ್ಟರ್ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
ಮೈಸೂರು: ಅಂತಾರಾಷ್ಟ್ರೀಯ ಲಿಂಗಾಯತ್ ಯೂತ್ ಫೋರಂನ ಮೈಸೂರು ಚಾಪ್ಟರ್ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಈ ಸಭೆಯಲ್ಲಿ 2025- 26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಎಚ್. ಕಿರಣ್, ಉಪಾಧ್ಯಕ್ಷರಾಗಿ ಎಂ. ಮಹೇಶ್, ಕಾರ್ಯದರ್ಶಿ ಎಸ್. ಸಂತೋಷ್, ಜಂಟಿ ಕಾರ್ಯದರ್ಶಿಯಾಗಿ ರುದ್ರೇಶ್ ಮತ್ತು ತೀರ್ಥ ಎಸ್. ಸ್ವಾಮಿ, ಖಜಾಂಚಿ ಎ.ಪಿ. ಮನು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ. ಶೇಖರ್, ಎ.ಎಸ್. ಪ್ರದೀಪ್, ವಿನಯ್ಕುಮಾರ್, ಶೀಲಾ, ರವಿಕಿರಣ್ ಆಯ್ಕೆಯಾದರು. ಈ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.