ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಮುಖ್ಯ. ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ ಅವಶ್ಯಕ ಎಂದು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಎಸ್. ಗಾಂಧಿ ದಾಸ್ ತಿಳಿಸಿದರು.ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಶನಿವಾರ ನಡೆದ ಅಂತಾರಾಷ್ಟೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾವು ಪ್ರತಿಯೊಬ್ಬರು ಸ್ವಯಂ ಇಚ್ಛೆಯಿಂದ ನಮ್ಮ ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಯೋಗ ಮಾಡಬೇಕು ಎಂದರು.ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ನಾವು ಹೆಚ್ಚು ಗಮನ ನೀಡಬೇಕು. ಆರೋಗ್ಯವೇ ನಮ್ಮ ಸಂಪತ್ತು, ಯುವ ಪೀಳಿಗೆಯು ಆರೋಗ್ಯ ಮತ್ತು ಯೋಗಕ್ಕೆ ತುಂಬಾ ಮಹತ್ವ ನೀಡಬೇಕು. ನಾವು ದೈನಂದಿನ ಕೆಲಸದ ಒತ್ತಡದಲ್ಲಿ ಆರೋಗ್ಯವನ್ನು ನೀರ್ಲಕ್ಷ್ಯ ಮಾಡಬಾರದು. ಇರುವ ಸಮಯದಲ್ಲಿಯೆ ಯೋಗದ ಕಡೆ ಗಮನ ನೀಡವುದು ಅವಶ್ಯಕ ಎಂದು ಅವರು ಹೇಳಿದರು.ಇದೇ ವೇಳೆ ಯೋಗ ಗುರು ಜಯಕೃಷ್ಣ ರಾಘವ ವೇರಿಯರ್ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಯಿತು. ಸಂಸ್ಥೆಯ ವಿಜ್ಞಾನಿಗಳಾದ ಡಾ. ಮಧುಸೂದನ್, ಡಾ. ಮಂಜಪ್ಪ, ಡಾ.ಎಸ್. ಬಾಲಸರಸ್ವತಿ, ಡಾ. ದಯಾನಂದ, ಡಾ. ಮಹೀಬಾ ಹೆಲೆನ್ ಮೊದಲಾದವರು ಇದ್ದರು.