ಸಾರಾಂಶ
ತಾಲೂಕಿನ ವಿರಪಸಮುದ್ರ, ದೊಮ್ಮತಮರಿ, ಕೊಡಮಡಗು, ವೆಂಕಟಾಪುರ, ಕನ್ನಮೇಡಿ, ಬ್ಯಾಡನೂರು ಸಿ.ಕೆ.ಪುರ ಗುಜ್ಜನಡು ಪಂಚಾಯಿತಿಗೆ ಸಂಬಂಧಿಸಿದ ಪಿಡಿಒ ನರೇಗಾ ಹಾಗೂ ಇತರೆ ಗ್ರಾಪಂ ಪ್ರಗತಿಯ ಅನುಷ್ಟಾನದಲ್ಲಿ ಏಕ ಪಕ್ಷ ಧೋರಣೆಯಿಂದಾಗಿ ಗ್ರಾಮೀಣಾಭಿವೃದ್ಧಿ ಸಾಧ್ಯವಾಗುತ್ತಿಲ್ಲ. ನರೇಗಾದಲ್ಲಿ ಭ್ರಷ್ಟಚಾರ ನಡೆಯುತ್ತಿದ್ದು ತನಿಖೆ ನಡೆಸಿ ಸೂಕ್ತ ಕ್ರಮವಹಿಸುವಲ್ಲಿ ಮೇಲಧಿಕಾರಿಗಳು ಅಸಕ್ತಿ ವಹಿಸುತ್ತಿಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ದೊಡ್ಡಹಳ್ಳಿ ಆಶೋಕ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ವಿರಪಸಮುದ್ರ, ದೊಮ್ಮತಮರಿ, ಕೊಡಮಡಗು, ವೆಂಕಟಾಪುರ, ಕನ್ನಮೇಡಿ, ಬ್ಯಾಡನೂರು ಸಿ.ಕೆ.ಪುರ ಗುಜ್ಜನಡು ಪಂಚಾಯಿತಿಗೆ ಸಂಬಂಧಿಸಿದ ಪಿಡಿಒ ನರೇಗಾ ಹಾಗೂ ಇತರೆ ಗ್ರಾಪಂ ಪ್ರಗತಿಯ ಅನುಷ್ಟಾನದಲ್ಲಿ ಏಕ ಪಕ್ಷ ಧೋರಣೆಯಿಂದಾಗಿ ಗ್ರಾಮೀಣಾಭಿವೃದ್ಧಿ ಸಾಧ್ಯವಾಗುತ್ತಿಲ್ಲ. ನರೇಗಾದಲ್ಲಿ ಭ್ರಷ್ಟಚಾರ ನಡೆಯುತ್ತಿದ್ದು ತನಿಖೆ ನಡೆಸಿ ಸೂಕ್ತ ಕ್ರಮವಹಿಸುವಲ್ಲಿ ಮೇಲಧಿಕಾರಿಗಳು ಅಸಕ್ತಿ ವಹಿಸುತ್ತಿಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ದೊಡ್ಡಹಳ್ಳಿ ಆಶೋಕ್ ಆರೋಪಿಸಿದ್ದಾರೆ.ತಾಲೂಕಿನ ಕಸಬಾ ವ್ಯಾಪ್ತಿಯ ಗ್ರಾಪಂಗಳಲ್ಲಿ ನಡೆಯುವ ಭ್ರಷ್ಟಚಾರ ಖಂಡಿಸಿ ತಾಲೂಕು ಬಿಜೆಪಿಯಿಂದ ಬುಧವಾರ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ತಮಗೆ ಮನಬಂದಂತೆ ಯೋಜನೆ ಬಳಕೆ ಮಾಡುಕೊಳ್ಳುವ ಮೂಲಕ ಅವ್ಯವಹಾರ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಗ್ರಾಪಂ ಯೋಜನೆಯ ಅನುಷ್ಟಾನ ವಿಚಾರದ ಕರ್ತವ್ಯದಲ್ಲಿ ಪಾರದರ್ಶಕತೆ ಅನುಸರಿಸುತ್ತಿಲ್ಲ. ಯೋಜನೆ ಕುರಿತು ಗ್ರಾಪಂ ನೋಟೀಸ್ ಬೋರ್ಡ್ಗೆ ಆಳವಡಿಸುತ್ತಿಲ್ಲ. ಕುಡಿಯುವ ನೀರು, ನೈರ್ಮಲ್ಯ ಶುಚಿತ್ವ ವಸತಿ ಸೌಲಭ್ಯ ಸೇರಿದಂತೆ ಅನೇಕ ಸ್ಥಳೀಯ ಸಮಸ್ಯೆಗಳನ್ನು ಗುರುತಿಸುತ್ತಿಲ್ಲ. ಗ್ರಾಮಗಳಲ್ಲಿನ ಸಮಸ್ಯೆ ಕುರಿತು ನಿರ್ಧರಿಸುವುದು ಮತ್ತು ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ಜನತೆಗೆ ಅನುಕೂಲ ಕಲ್ಪಿಸುವಲ್ಲಿ ಗ್ರಾಪಂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.ರೈತ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಸರಿಯಾದ ರೀತಿಯಲ್ಲಿ ಸಫಲತೆ ಕಾಣಬೇಕು. ಜಿಪಂ ಮಟ್ಟದ ಮೇಲಧಿಕಾರಿಗಳು ಗ್ರಾಪಂಗೆ ಭೇಟಿ ನೀಡಿ ಸಾರ್ವಜನಿಕ ಯೋಜನೆಗಳ ಸದ್ಬಳಕೆ ಕುರಿತು ಪರಿಶೀಲನೆ ನಡೆಸಬೇಕು.ಯೋಜನೆಗಳ ಅನುಷ್ಟಾನದಲ್ಲಿ ಬೇಕಾಬಿಟ್ಟಿ ಕಾರ್ಯನಿರ್ವಹಿಸುವ ಗ್ರಾಪಂ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಬಿಜೆಪಿ ಘಟಕದ ಒಬಿಸಿ ಪ್ರಧಾನ ಕಾರ್ಯದರ್ಶಿ ಮುರಳೀ ಮಾತನಾಡಿ ಗ್ರಾಪಂಗಳಲ್ಲಿ ಕಳೆದ ಎರಡು ವರ್ಷಗಳಿಂದ ವಾರ್ಡ್ ಮತ್ತು ಗ್ರಾಮ ಸಭೆ ನಡೆಸಿರುವುದಿಲ್ಲ.ಜಲಜೀವನ್ ಮಿಷನ್ ಕಾಮಗಾರಿಕೆಗಳ ಕುಂದು ಕೊರತೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.ನರೇಗಾ ಕಾಮಗಾರಿಕೆಗಳು ಏಕಪಕ್ಷದಿಂದ ಕೂಡಿದ್ದು ಕಾಂಗ್ರೆಸ್ ಮುಖಂಡರ ಕಣ್ಣು ಸನ್ನೆಯಲ್ಲಿ ಹೇಳಿದವರಿಗೆ ಮಾತ್ರ ಗ್ರಾಪಂನಲ್ಲಿ ಕಾಮಗಾರಿ ಮಂಜೂರಾತಿ ನೀಡುತ್ತಿದ್ದಾರೆ.ಗ್ರಾಪಂ ಯೋಜನೆಯ ವೀಕೇಂದ್ರಿಕರಣ ವ್ಯವಸ್ಥೆಯಲ್ಲಿ ಅತ್ಯಂತ ತಳ ಹಂತದ ರಾಜಕೀಯ ಮಾಡುತ್ತಿದ್ದು ಮನೆ ಹಾಗೂ ನಿವೇಶನದ ಅನ್ಲೈನ್ ಇ.ಖಾತೆ ಮಾಡಿಕೊಡಲು ಗ್ರಾಪಂ ಅಧಿಕಾರಿಗಳು ಸಾರ್ವಜನಿಕರ ಪೋಷಕಾಂಶಗಳನ್ನು ಹೀರಿಕೊಳ್ಳುವ ಬೇರುಗಳಾಗಿದ್ದು ಗ್ರಾಪಂ ಯೋಜನೆಗಳ ಸಾಮಾಜಿಕ ಆಡಿಟ್ ವರದಿ ಕೂಡಲೇ ಸಾರ್ವಜನಿಕರ ಮುಂದಿಡುವಂತೆ ಅಗ್ರಹಿಸಿದರು.ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಒಳ ಸಂಚು ಕಾರ್ಯಗಳಿಗೆ ಕೈ ಬಿಟ್ಟು ಸಾರ್ವಜನಿಕ ಸೇವಕರಾಗಿ ಸಾರ್ವಜನಿಕರ ತೆರಿಗೆಯಿಂದ ವೇತನ ಪಡೆಯುತ್ತಿರುವ ಈ ಅಧಿಕಾರಿಗಳು ವಿಳಂಬ ನೀತಿಯನ್ನು ದೂರವಿಟ್ಟು ಸಾರ್ವಜನಿಕರ ಪರವಾಗಿ ಕರ್ತವ್ಯ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಒತ್ತಾಯಿಸಿದರು.ಬಳಿಕ ತಾಪಂ ಇಒ ಜಾನಕಿರಾಮ್ ಹಾಗೂ ತಾಲೂಕು ಕಚೇರಿಯ ಗ್ರೆಡ್ 2ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಗ್ರಾಪಂ ಮಟ್ಟದಲ್ಲಿ ಸುಧಾರಣೆ ಕಾಣದಿದ್ದರೆ ಮುಂದಿನ ದಿನಗಳಲ್ಲಿ ತಾ,ಬಿಜೆಪಿಯಿಂದ ಉಗ್ರಪ್ರತಿಭಟನೆಗೆ ಸಜ್ಜಾಗುವುದಾಗಿ ಅವರು ಎಚ್ಚರಿಸಿದ್ದಾರೆ.ಇದೇ ವೇಳೆ ವೆಂಕಟಾಪುರ ವಿಎಸ್ಎಸ್ಎನ್ ನಿರ್ದೇಶಕ ಈಶ್ವರಪ್ಪ,ಕಸಬಾ ಹೋಬಳಿ ಅಧ್ಯಕ್ಷ ಹರೀಶ್ ದೊಮ್ಮತಮರಿ ಕೃಷ್ಣಪ್ಪ ಕೆಎಸ್ಆರ್ಟಿಸಿ ನಿವೃತ್ತ ಕಂಡಕ್ಟರ್ ವೆಂಕಟೇಶ್,ಗುಮ್ಮಘಟ್ಟ ರವಿ,ಬಜರಂಗದಳದ ಜಿಲ್ಲಾ ಕಾರ್ಯದರ್ಶಿ ಸುಧಾಕರ್ ಹಾಗೂ ಚಂದ್ರಣ್ಣ ನಾರಾಯಣಪ್ಪ ಚಂದ್ರಶೇಖರ್ ಕಾರ್ಯಕರ್ತರಿದ್ದರು.