ಮಂಗಳೂರಿನ ಈಶಿಕಾಗೆ ಮಿಸ್‌ ಟೀನ್‌ ಗ್ಲೋಬಲ್‌ ವರ್ಲ್ಡ್‌ ಇಂಡಿಯಾ ಪ್ರಶಸ್ತಿ

| Published : Mar 05 2024, 01:34 AM IST

ಮಂಗಳೂರಿನ ಈಶಿಕಾಗೆ ಮಿಸ್‌ ಟೀನ್‌ ಗ್ಲೋಬಲ್‌ ವರ್ಲ್ಡ್‌ ಇಂಡಿಯಾ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಲೋಬಲ್‌ ಇಂಡಿಯಾ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್‌ ಮತ್ತು ಅಲಿ ಶರ್ಮಾ ವತಿಯಿಂದ ಸ್ಪರ್ಧೆ ಏರ್ಪಡಿಸಲಾಗಿತ್ತುತ್ರ. ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯದ 65 ಮಂದಿ ಭಾಗವಹಿಸಿದ್ದರು. ಅದರಲ್ಲಿ ತುಳುನಾಡಿನ ಈಶಿಕಾ ಶೆಟ್ಟಿ ಗೆದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದೆಹಲಿಯಲ್ಲಿ ನಡೆದ ಮಿಸೆಸ್‌/ ಮಿಸ್ಟರ್‌ ಮತ್ತು ಮಿಸ್‌ ಹಾಗೂ ಮಿಸ್‌ ಟೀನ್‌ ಗ್ಲೋಬಲ್‌ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಈಶಿಕಾ ಶೆಟ್ಟಿ ‘ಮಿಸ್‌ ಟೀನ್‌ ಗ್ಲೋಬಲ್‌ ವರ್ಲ್ಡ್‌ ಇಂಡಿಯಾ ಓಶಿಯಾನ 2024’ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ನಟ ಸಾಯಿಕೃಷ್ಣ ಕುಡ್ಲ, ಗ್ಲೋಬಲ್‌ ಇಂಡಿಯಾ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್‌ ಮತ್ತು ಅಲಿ ಶರ್ಮಾ ವತಿಯಿಂದ ಸ್ಪರ್ಧೆ ಏರ್ಪಡಿಸಲಾಗಿತ್ತುತ್ರ. ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯದ 65 ಮಂದಿ ಭಾಗವಹಿಸಿದ್ದರು. ಅದರಲ್ಲಿ ತುಳುನಾಡಿನ ಈಶಿಕಾ ಶೆಟ್ಟಿ ಗೆದ್ದಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು.ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆ ಈಶಿಕಾ ಶೆಟ್ಟಿ ಮಾತನಾಡಿ, ಚಿಕ್ಕಂದಿನಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ನಟನೆ ಬಗ್ಗೆ ಆಸಕ್ತಿಯಿತ್ತು. ಇದರಿಂದಾಗಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವಂತಾಗಿದೆ ಎಂದರು.ಈಶಿಕಾ ಶೆಟ್ಟಿ ಅವರು ಕಾವೂರಿನ ಶಿವನಗರ ನಿವಾಸಿ, ಪೊಲೀಸ್‌ ಇಲಾಖೆಯಲ್ಲಿ ಎಎಸ್‌ಐ ಆಗಿರುವ ಶರತ್‌ ಕುಮಾರ್‌ ಶೆಟ್ಟಿ ಹಾಗೂ ಶ್ವೇತಾ ಶೆಟ್ಟಿ ದಂಪತಿ ಪುತ್ರಿ.ಸುದ್ದಿಗೋಷ್ಠಿಯಲ್ಲಿ ಶರತ್‌ ಕುಮಾರ್‌ ಶೆಟ್ಟಿ, ಶ್ವೇತಾ ಶರತ್‌ ಶೆಟ್ಟಿ, ರವಿಕಲಾ ಶೆಟ್ಟಿ ಇದ್ದರು.

...........ಮಂಗಳೂರಲ್ಲಿ ನಾರಿಶಕ್ತಿ ಮ್ಯಾರಥಾನ್‌‘ರನ್‌ ಫಾರ್‌ ನೇಷನ್‌, ರನ್‌ ಫಾರ್‌ ಮೋದಿಜಿ’ ಅಭಿಯಾನದ ಅಂಗವಾಗಿ ನಾರಿಶಕ್ತಿ ವಂದನ ಮ್ಯಾರಥಾನ್‌ ನಗರದ ನಂತೂರು ಕೋರ್ದಬ್ಬು ದೇವಸ್ಥಾನದಿಂದ ಸರ್ಕ್ಯೂಟ್‌ ಹೌಸ್‌ವರೆಗೆ ಸೋಮವಾರ ನಡೆಯಿತು.ಮ್ಯಾರಥಾನ್‌ ಉದ್ಘಾಟಿಸಿದ ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಈ ಬಾರಿ ಬಜೆಟ್‌ನಲ್ಲಿ ಮಹಿಳಾ ಅಭಿವೃದ್ದಿಗೆ ವಿಶೇಷ ಅನುದಾನ ನೀಡಲಾಗಿದ್ದು, ದೇಶಕ್ಕೆ ಮೋದಿ ನೇತೃತ್ವದ ಸರ್ಕಾರ ಅನಿವಾರ್ಯತೆ ಇದೆ. ಎಲ್ಲರೂ ಒಗ್ಗಟ್ಟಾಗಿ ಮತ್ತೊಮ್ಮೆ ಮೋದಿಗೆ ಅಧಿಕಾರದ ಬಲ ನೀಡಬೇಕು ಎಂದು ಹೇಳಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಕಿಶೋರ್‌ ಕುಮಾರ್‌ ಪುತ್ತೂರು, ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್‌, ಮಾಧ್ಯಮ ಜಿಲ್ಲಾ ಸಂಚಾಲಕ ವಸಂತ್‌ ಪೂಜಾರಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ್‌ ಮನೋಹರ್‌ ಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್‌ ಮಲ್ಯ, ಕಾರ್ಯದರ್ಶಿ ಪ್ರಕಾಶ್‌ ಗರೋಡಿ, ಕಾರ್ಪೊರೇಟರ್‌ಗಳಾದ ಶಕೀಲಾ ಕಾವ, ಕಾವ್ಯ ನಟರಾಜ್‌, ಕಿಶೋರ್‌ ಕೊಟ್ಟಾರಿ, ಸಂಗೀತಾ ನಾಯಕ್‌, ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್‌ ಮತ್ತಿತರರು ಇದ್ದರು.