ಬಿರುಗಾಳಿಗೆ ಬಾಳೆ ಬೆಳೆ ನಾಶ

| Published : May 04 2024, 12:34 AM IST

ಸಾರಾಂಶ

ಗ್ರಾಮದ ಜಗದೀಶ್ ಎಂಬವರಿಗೆ ಸೇರಿರುವ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಯು ನಾಶವಾಗಿದೆ, ಸಾಲ ಸೋಲ ಮಾಡಿ ಬೆಳೆದ ಫಸಲು ನಾಶವಾದರೆ ಸಾಲ ತಿರಿಸುವುದಾದರೂ ಹೇಗೆ, ಬರಗಾಲದಲ್ಲಿ ಕಷ್ಟಪಟ್ಟು ಬೆಳೆದ ಫಸಲು ನಾಶವಾದರೆ ರೈತ ಸಾಲ ತಿರಿಸಲಾಗದೆ ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಮಲ್ಕುಂಡಿ

ಬಿರುಗಾಳಿಗೆ ಬಾಳೆ ಬೆಳೆ ನಾಶವಾಗಿರುವ ಘಟನೆ ಸಮೀಪದ ಯಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಗದೀಶ್ ಎಂಬವರಿಗೆ ಸೇರಿರುವ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಯು ನಾಶವಾಗಿದೆ, ಸಾಲ ಸೋಲ ಮಾಡಿ ಬೆಳೆದ ಫಸಲು ನಾಶವಾದರೆ ಸಾಲ ತಿರಿಸುವುದಾದರೂ ಹೇಗೆ, ಬರಗಾಲದಲ್ಲಿ ಕಷ್ಟಪಟ್ಟು ಬೆಳೆದ ಫಸಲು ನಾಶವಾದರೆ ರೈತ ಸಾಲ ತಿರಿಸಲಾಗದೆ ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ಉಂಟಾಗಿದೆ. ಕಟ್ಟಾವಿಗೆ ಬಂದ ಬಾಳೆ ಫಸಲು ನಾಶವಾಗಿದ್ದರಿಂದ ರೈತ ಕಂಗಲಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮದ ಮುಖಂಡ ನಾಗೇಂದ್ರ ಒತ್ತಾಯಿಸಿದ್ದಾರೆ.