ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ: ನಿಟ್ಟೆ ಕಾಲೇಜಿಗೆ ಪ್ರಶಸ್ತಿ

| Published : Apr 07 2024, 01:53 AM IST

ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ: ನಿಟ್ಟೆ ಕಾಲೇಜಿಗೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಪುಗಾರರಾದ ತಾರಾನಾಥ ವರ್ಕಾಡಿ, ಮುರಳೀಧರ ಭಟ್ ಕಟೀಲು, ಅಂಡಾಲ ದೇವಿಪ್ರಸಾದ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಕಾಲೇಜಿನಲ್ಲಿ ಜರುಗಿದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ನಿಟ್ಟೆ ಕಾಲೇಜು ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಭ್ರಾಮರೀ ಯಕ್ಷ ಝೇಂಕಾರ -೨೦೨೪ ಆಂತರ್ ಕಾಲೇಜು ತೆಂಕುತಿಟ್ಟು ಯಕ್ಷಾಗಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ ಆಳ್ವ, ದೇಶದಲ್ಲಿನ ಅನೇಕ ಜಾನಪದ ಕಲೆಗಳು ನಶಸಿ ಹೋಗುತ್ತಿದ್ದು ೫೦೦ ವರ್ಷಕ್ಕೂ ಮಿಕ್ಕಿ ಇತಿಹಾಸವಿರುವ ಯಕ್ಷಗಾನ ಕಲೆ ಹೊಸ ಹೊಸ ಕಲ್ಪನೆ, ಚಿಂತನೆಗಳೊಂದಿಗೆ ಬೆಳೆಯುತ್ತ ಬಂದಿದೆ. ನಾನು ನೂರಾರು ನಾಟಕ ಯಕ್ಷಗಾನಗಳಲ್ಲಿ ನಾನಾ ಪಾತ್ರಗಳನ್ನು ಮಾಡಿದ್ದೇನೆ. ಆಗೆಲ್ಲ ಸ್ತ್ರೀವೇಷಗಳನ್ನು ಹುಡುಗರೇ ಮಾಡುತ್ತಿದ್ದರು. ಹುಡುಗಿಯರು ನಾಟಕ ಯಕ್ಷಗಾನಗಳಲ್ಲಿ ಇರುತ್ತಲೇ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಭರತನಾಟ್ಯ, ನಾಟಕ ಯಕ್ಷಗಾನಗಳಲ್ಲಿ ಹುಡುಗಿಯರದ್ದೇ ಮೇಲುಗೈಯಾಗಿದೆ ಎಂದರು.

ದೇವಳದ ಅರ್ಚಕ ಶ್ರೀಹರಿನಾರಾಯುಣದಾಸ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಉದ್ಯಮಿ ಯಾದವ ಕೋಟ್ಯಾನ್, ಪ್ರವೀಣ್ ಭಂಡಾರಿ ಕೊಡೆತ್ತೂರುಗುತ್ತು, ಕಾಲೇಜಿನ ಹಿರಿಯ ಹಳೆ ವಿದ್ಯಾರ್ಥಿ ಗಂಗಾಧರ ದೇವಾಡಿಗ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ , ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ದೀಪಕ್, ಕಾರ್ಯದರ್ಶಿ ಬಿ. ನಿಶಾ, ಪುಷ್ಪರಾಜ ಜೆ. ಶೆಟ್ಟಿ, ಎಲ್. ಕೃಷ್ಣರಾಜ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು. ತೀರ್ಪುಗಾರರಾದ ತಾರಾನಾಥ ವರ್ಕಾಡಿ, ಮುರಳೀಧರ ಭಟ್ ಕಟೀಲು, ಅಂಡಾಲ ದೇವಿಪ್ರಸಾದ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ವಿ. ಸ್ವಾಗತಿಸಿದರು. ಸಂಘಟಕಿ ಆಶಾಲತಾ ಕೀರ್ತಿ ಶೆಟ್ಟಿ ವಿಜೇತರ ವಿವರ ನೀಡಿದರು.

ವಿಜೇತರ ವಿವರ: ತಂಡ ಪ್ರಶಸ್ತಿ ಪ್ರಥಮ: ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ಗಿರಿಜಾ ಕಲ್ಯಾಣ,

ದ್ವಿತೀಯ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಚೂಡಾಮಣಿ, ತೃತೀಯ ವಿ.ವಿ. ಕಾಲೇಜು ಮಂಗಳೂರು ಇಲ್ಲಿನ ವರಾಹಾವತಾರಕ್ಕೆ ಲಭಿಸಿದೆ.

ವಿಭಾಗ ವೈಯಕ್ತಿಕ ಪ್ರಶಸ್ತಿಯಲ್ಲಿ ರಾಜ ವೇಷ: ನಿಟ್ಟೆ ಕಾಲೇಜಿನ ಅನ್ವೇಷ್ ಆರ್. ಶೆಟ್ಟಿ- ಪ್ರಥಮ, ಕಾರ್‌ಸ್ಟ್ರೀಟ್ ಕಾಲೇಜಿನನ ಸನತ್ ಕುಮಾರ್ - ದ್ವಿತೀಯ, ಪುಂಡುವೇಷ ವಿಭಾಗದಲ್ಲಿ ಆಳ್ವಾಸ್‌ನ ಪ್ರಜ್ವಲ್ ಶೆಟ್ಟಿ ಪ್ರಥಮ, ನಿಟ್ಟೆ ಕಾಲೇಜಿನ ಪ್ರಶಾಂತ್ ಐತಾಳ್ ದ್ವಿತೀಯ, ಸ್ತ್ರೀವೇಷ ವಿಭಾಗದಲ್ಲಿ ಎ.ಜೆ. ಕಾಲೇಜಿನ ಶರಧಿ ಪ್ರಥಮ, ಆಳ್ವಾಸ್ ಕಾಲೇಜಿನ ಈಶ್ವರೀ ಆರ್. ಶೆಟ್ಟಿ ದ್ವಿತೀಯ, ಹಾಸ್ಯ ವೇಷ ವಿಭಾಗದಲ್ಲಿ ನಿಟ್ಟೆ ಕಾಲೇಜಿನ ರಜತ್ ಬೋಳ ಪ್ರಥಮ, ಆಳ್ವಾಸ್‌ನ ಮಂಥನ್ ದ್ವಿತೀಯ, ಬಣ್ಣದ ವೇಷ ವಿಭಾಗದಲ್ಲಿ ನಿಟ್ಟೆ ಕಾಲೇಜಿನ ಕೆ.ಎಸ್. ಶ್ರೀಕೃಷ್ಣ ರಾವ್ - ಪ್ರಥಮ, ಆಳ್ವಾಸ್ ಜೀವನ್‌ ದ್ವಿತೀಯ, ತಂಡವೈಯಕ್ತಿಕ ಪ್ರಶಸ್ತಿ ಮಂಗಳೂರು ಎಸ್‌ಡಿಎಂ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನ ಲಾವಣ್ಯ, ಕೊಟ್ಟಾರ ಎ.ಜೆ. ಕಾಲೇಜಿನ ಶರಧಿ, ಮಂಗಳೂರು ವಿವಿಕಾ ಲೇಜಿನ ಕೌಶಿಕ್ ಕತ್ತಲ್‌ಸಾರ್, ವಾಮದಪದವು ಕಾಲೇಜಿನ ಮನೋಜ್, ನಿಟ್ಟೆ ಕಾಲೇಜಿನ ಪ್ರಶಾಂತ್ ಐತಾಳ್, ಐಕಳ ಪಾಂಪೆ ಕಾಲೇಜಿನ ಕೃತ್ತಿಕಾ, ಕಾರ್‌ಸ್ಟ್ರೀಟ್ ಕಾಲೇಜಿನ ಸನತ್ ಕುಮಾರ್, ಆಳ್ವಾಸ್ ಕಾಲೇಜಿನ ಪ್ರಜ್ವಲ್ ಶೆಟ್ಟಿ ಪ್ರಶಸ್ತಿ ಪಡೆದುಕೊಂಡರು.