ಜನಿವಾರ: ಏ. 25ಕ್ಕೆ 10 ಸಾವಿರ ಜನರಿಂದ ಪ್ರತಿಭಟನೆ

| Published : Apr 22 2025, 01:48 AM IST

ಜನಿವಾರ: ಏ. 25ಕ್ಕೆ 10 ಸಾವಿರ ಜನರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂದಾಜು 10 ಸಾ​ವಿ​ರಕ್ಕೂ ಅ​ಧಿಕ ಜ​ನರು ಭಾ​ಗ​ವ​ಹಿ​ಸ​ಲಿ​ದ್ದಾರೆ. ಜ​ನಿ​ವಾರ ಧರಿಸಿ ರ್‍ಯಾ​ಲಿ​ಯಲ್ಲಿ ಭಾ​ಗ​ವ​ಹಿ​ಸು​ವಂತೆ ಸೂ​ಚಿ​ಸ​ಲಾ​ಯಿತು. ಅಂದು 10 ಗಂಟೆ​ಯೊ​ಳಗೆ ನಗರದ ಈ​ಶ್ವರ ದೇ​ವ​ಸ್ಥಾ​ನ​ದಲ್ಲಿ ಸ​ಮಾ​ವೇ​ಶ​ಗೊ​ಳ್ಳ​ಬೇಕು. ಅ​ಲ್ಲಿಂದ ರ್‍ಯಾಲಿಯ ಮೂ​ಲಕ ಡಾ.ಅಂಬೇ​ಡ್ಕರ್‌ ಸ​ರ್ಕಲ್‌ಗೆ ಆ​ಗ​ಮಿಸಿ ರಸ್ತೆ ಸಂಚಾರ ತಡೆದು ಪ್ರ​ತಿ​ಭ​ಟನೆ ನ​ಡೆ​ಸು​ವು​ದು.

ಹು​ಬ್ಬ​ಳ್ಳಿ: ಸಿ​ಇಟಿ ಪ​ರೀ​ಕ್ಷೆ​ಯಲ್ಲಿ ಬ್ರಾಹ್ಮಣ ವಿ​ದ್ಯಾ​ರ್ಥಿ​ಗಳ ಜ​ನಿ​ವಾರ ತೆ​ಗೆ​ಸಿದ ಪ್ರ​ಕ​ರಣ ಖಂಡಿಸಿ ಬ್ರಾ​ಹ್ಮ​ಣರು ಹಾಗೂ ಇ​ತರ ಎ​ಲ್ಲ ಸ​ಮಾ​ಜದ ಜ​ನಿ​ವಾರಧಾ​ರಿ​ಗಳ ಮು​ಖಂಡರ ನೇ​ತೃ​ತ್ವ​ದಲ್ಲಿ ಏ. 25ರಂದು ಪಂಚೆ, ​ಶಲ್ಯ ಹಾಗೂ ಜ​ನಿ​ವಾರ ಧ​ರಿ​ಸಿ​ಕೊಂಡು ಸರ್ಕಾರದ ವಿರುದ್ಧ ನಗರದಲ್ಲಿ ಪ್ರ​ತಿ​ಭ​ಟನಾ ರ್‍ಯಾಲಿ ನ​ಡೆ​ಸಲು ನಿ​ರ್ಧಾರ ಕೈ​ಗೊ​ಳ್ಳ​ಲಾ​ಯಿ​ತು.

ಇ​ಲ್ಲಿನ ದೇ​ಶ​ಪಾಂಡೆ ನ​ಗ​ರ​ದ ಶ್ರೀ ರಾ​ಘ​ವೇಂದ್ರ ಸ​ಭಾ​ ಭ​ವ​ನ​ದ​ಲ್ಲಿ ಅಖಿಲ ಭಾ​ರತ ಬ್ರಾ​ಹ್ಮಣ ಮಹಾಸಭಾ ಧಾ​ರ​ವಾಡ ಜಿಲ್ಲೆ ಹಾಗೂ ವಿ​ವಿಧ ಸ​ಮಾ​ಜದ ಮು​ಖಂಡರ ನೇ​ತೃ​ತ್ವ​ದ​ಲ್ಲಿ ಸೋ​ಮ​ವಾರ ಸಂಜೆ ನ​ಡೆದ ಪೂ​ರ್ವ​ಭಾವಿ ಸ​ಭೆ​ಯಲ್ಲಿ ತೀರ್ಮಾನಿಸಲಾಯಿತು.

ಅಂದಾಜು 10 ಸಾ​ವಿ​ರಕ್ಕೂ ಅ​ಧಿಕ ಜ​ನರು ಭಾ​ಗ​ವ​ಹಿ​ಸ​ಲಿ​ದ್ದಾರೆ. ಜ​ನಿ​ವಾರ ಧರಿಸಿ ರ್‍ಯಾ​ಲಿ​ಯಲ್ಲಿ ಭಾ​ಗ​ವ​ಹಿ​ಸು​ವಂತೆ ಸೂ​ಚಿ​ಸ​ಲಾ​ಯಿತು. ಅಂದು 10 ಗಂಟೆ​ಯೊ​ಳಗೆ ನಗರದ ಈ​ಶ್ವರ ದೇ​ವ​ಸ್ಥಾ​ನ​ದಲ್ಲಿ ಸ​ಮಾ​ವೇ​ಶ​ಗೊ​ಳ್ಳ​ಬೇಕು. ಅ​ಲ್ಲಿಂದ ರ್‍ಯಾಲಿಯ ಮೂ​ಲಕ ಡಾ.ಅಂಬೇ​ಡ್ಕರ್‌ ಸ​ರ್ಕಲ್‌ಗೆ ಆ​ಗ​ಮಿಸಿ ರಸ್ತೆ ಸಂಚಾರ ತಡೆದು ಪ್ರ​ತಿ​ಭ​ಟನೆ ನ​ಡೆ​ಸು​ವು​ದು. ತದನಂತರ ಸಂಗೊಳ್ಳಿ ರಾ​ಯಣ್ಣ ಸ​ರ್ಕಲ್‌ ಮೂ​ಲಕ ತ​ಹ​ಸೀ​ಲ್ದಾರ್ ಕ​ಚೇ​ರಿಗೆ ಆ​ಗ​ಮಿಸಿ, ಪ್ರ​ತಿ​ಭ​ಟನಾ ಸ​ಮಾ​ವೇಶ ಕೈಗೊಳ್ಳುವುದರ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.

ಅಖಿಲ ಕ​ರ್ನಾ​ಟ​ಕ ಬ್ರಾ​ಹ್ಮಣ ಸ​ಮಾ​ಜದ ಧಾ​ರ​ವಾಡ ಜಿ​ಲ್ಲಾ ಪ್ರ​ತಿ​ನಿಧಿ ಲ​ಕ್ಷ್ಮಣ ಕು​ಲ​ಕರ್ಣಿ ಮಾ​ತ​ನಾಡಿ, ಅ​ನೇಕ ಕ​ಡೆ​ಗ​ಳಲ್ಲಿ ಬ್ರಾ​ಹ್ಮಣ ವಿ​ದ್ಯಾ​ರ್ಥಿ​ಗಳ ಜ​ನಿ​ವಾರ ತೆ​ಗೆ​ಸುವ ಮೂ​ಲಕ ನೀಚ ಕೃತ್ಯ ಮಾ​ಡ​ಲಾ​ಗಿದೆ. ಇದರಿಂದ ಬ್ರಾಹ್ಮಣ ಸಮಾಜಕ್ಕೆ ಅಪಮಾನವಾಗಿದ್ದು, ಇದರ ವಿರುದ್ಧ ​ಉಗ್ರ ಹೋರಾಟ ಮಾ​ಡು​ವು​ದು ಅ​ನಿ​ವಾ​ರ್ಯ​ವಾ​ಗಿದೆ. ಹಿಂದೂ ಸಮಾಜಕ್ಕೆ ಏನಾದರೂ ಅನ್ಯಾಯ, ಅ​ಪ​ಮಾನ ಹಾ​ಗೂ ದೌರ್ಜನ್ಯ ಆದಲ್ಲಿ ರಕ್ತಕ್ರಾಂತಿಗೂ ಸಿ​ದ್ಧ​ರಿ​ದ್ದೇವೆ ಎಂದು ಎ​ಚ್ಚ​ರಿ​ಸಿ​ದ​ರು.

ವಿಶ್ವಕರ್ಮ ಸಮಾಜದ ಮುಖಂಡ ರಾಜೇಶ ಬಡಿಗೇರ, ಮರಾಠಾ ಸಮಾಜದ ಮುಖಂಡ ಗಾಯಕವಾಡ ಮಾ​ತ​ನಾ​ಡಿ, ಬ್ರಹ್ಮ-ವಿಷ್ಣು- ಮಹೇಶ್ವರ ಕೂಡಿದಾಗ ಮಾತ್ರ ಜನಿವಾರ ಆಗುತ್ತದೆ. ಜನಿವಾರ ಎಂಬುದನ್ನು ಸಾಕ್ಷಾತ್‌ ಭಗವಂತನ ಪ್ರತಿ ರೂಪವಾಗಿದೆ. ಅದಕ್ಕೆ ಕತ್ತರಿ ಹಾಕಿಸುವ ಮೂಲಕ ಬ್ರಾಹ್ಮಣ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಉಗ್ರ ಹೋರಾಟದ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸೋಣ ಎಂದರು.

ಸ​ಮಾ​ಜದ ಮು​ಖಂಡ ಎ.ಸಿ. ಗೋಪಾಲ ಮಾತನಾಡಿ, ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ಸಭೆ ಅಥವಾ ಹೋರಾಟವಲ್ಲ ಎಂಬುದನ್ನು ಮೊದಲು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ವಿ​ದ್ಯಾ​ರ್ಥಿ​ಗ​ಳಿಂದ ಜನಿವಾರದ ಜತೆಗೆ ಲಿಂಗ, ರುದ್ರಾಕ್ಷಿ ಸಹ ತೆಗೆಸಲಾಗಿದೆ. ಇದನ್ನು ಸ್ಪಷ್ಟಪಡಿಸಿಕೊಂಡು, ಅವರೆಲ್ಲನ್ನೂ ಒಗ್ಗೂಡಿಸಿಕೊಂಡು ಪಕ್ಷಾತೀತವಾಗಿ ತ​ಪ್ಪಿ​ತ​ಸ್ಥರ ವಿ​ರು​ದ್ಧ ಹೋರಾಟ ಮಾಡೋಣ ಎಂದರು.

ಡಾ. ಜಿ.ಬಿ. ಸತ್ತೂರ, ಏ. 25ರಂದು ನ​ಡೆ​ಯು​ವ ರ್‍ಯಾ​ಲಿಯ ದಿ​ನ​ದಂದು ಒಂದು ಸಾ​ವಿರ ಜ​ನಿವಾರ ಹಾಗೂ ಕು​ಡಿ​ಯುವ ನೀ​ರಿನ ವ್ಯ​ವ​ಸ್ಥೆ​ಯನ್ನು ಕ​ಲ್ಪಿ​ಸು​ವು​ದಾಗಿ ಭ​ರ​ವಸೆ ನೀ​ಡಿ​ದ​ರು.

ಮು​ಖಂಡ ಜ​ಯ​ತೀರ್ಥ ಕಟ್ಟಿ, ನಾವು ಹಿಂದೂ​ಗ​ಳು ಮು​ಸ್ಲಿಮರ ಹಿಜಾಬ್ ತೆಗೆಸಿದ ಕಾರಣಕ್ಕೆ ಅವರು ಬ್ರಾಹ್ಮಣರ ಜನಿವಾರ ತೆಗೆಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ನ​ಡೆ​ಯನ್ನು ಸ​ಮಸ್ತ ಹಿಂದೂ​ಗಳು ಉ​ಗ್ರ​ವಾಗಿ ಖಂಡಿ​ಸ​ಬೇ​ಕಿದೆ ಎಂದರು.

ಸಂಧ್ಯಾ ದಿ​ಕ್ಷೀ​ತ್‌, ಜನಿವಾರ ಎಂಬುದು ಕೇವಲ ದಾರ ಅಲ್ಲ. ಅದು ನಮ್ಮ ಜೀವನದ ಆಧಾರ. ಅದನ್ನೆ ಕಿತ್ತು ಹಾಕುವ ನೀಚ ಸಂಸ್ಕೃತಿ ಸರಿಯಲ್ಲ. ಹಿಂದೆ ಮಹಿಳೆಯರಿಗೆ ಜನಿವಾರ ಇತ್ತು. ಅದನ್ನು ಮುಂದುವರೆಸೋಣ ಎಂದು ಸ​ಲ​ಹೆ ನೀ​ಡಿ​ದ​ರು.

ಸ​ಭೆ​ಯಲ್ಲಿ ದತ್ತಮೂರ್ತಿ ಕುಲಕರ್ಣಿ, ವೇ​ಣು​ಗೋ​ಪಾಲ ಆ​ಚಾ​ರ್ಯ, ಬಿಂದುಮಾಧವ ಕುಲಕರ್ಣಿ, ಶಂಕರ ಪಾಟೀಲ ಕುಲಕರ್ಣಿ, ಹನುಮಂತ, ವೇಣುಗೋಪಾಲ ಆಚಾರ್ಯ, ನರೇಂದ್ರ ಕುಲಕರ್ಣಿ, ಜೆ.ಬಿ.ಪಾಟೀಲ ಕುಲಕರ್ಣಿ, ರವಿ ಆಚಾರ್ಯ, ಮನೋಹರ ಪರ್ವತಿ ಹಾಗೂ ಸರ್ವ ಬ್ರಾಹ್ಮಣ ಸಮಾಜ, ಆರ್ಯ ವೈಶ್ಯ ಸಮಾಜ,ಎಸ್‌.ಎಸ್‌.ಕೆ. ಸಮಾಜ, ಜೈನ ಸಮಾಜ ಹಾಗೂ ಮರಾಠಾ ಸಮಾಜದ ಮುಖಂಡರು ಇ​ದ್ದ​ರು.